ಲಾಕ್ಡೌನ್ ಎಫೆಕ್ಟ್: ಹಸಿವಿನಿಂದ ಕಂಗಾಲಾದ ಮೂಕ ಪ್ರಾಣಿಗಳಿಗೆ ಯುವಕರಿಂದ ಆಹಾರ ಪೂರೈಕೆ
ವಿಜಯಪುರ(ಏ.29): ಮಹಾಮಾರಿ ಕೊರೊನಾ ವೈರಸ್ ಹರಡುವ ಭೀತಿ ಇರುವುದರಿಂದ ನಗರದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಲಾಕ್ಡೌನ್ ಆದ ಪರಿಣಾಮದಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ಹಸುಗಳು ಕೂಡ ಆಹಾರಕ್ಕೆ ಪರದಾಡುತ್ತಿವೆ. ಹೀಗಾಗಿ ಬಿಡಾಡಿ ದನಗಳ ಹಸಿವು ನೀಗಿಸಲು ಭಾರತ ಸಂಘಟನೆಯ ಕಾರ್ಯಕರ್ತರು ಪಣ ತೊಟ್ಟಿದ್ದಾರೆ.
ಆಹಾರ ಸಿಗದೆ ಹಸಿವಿನಿಂದ ನರಳುತ್ತಿರುವ ಬಿಡಾಡಿ ದನಗಳು
ಆಹಾರ ಅರಸುತ್ತ ನಗರದ ಬೀದಿ ಬೀದಿ ಸುತ್ತುತ್ತಿರುವ ಜಾನುವಾರುಗಳು
ದನಗಳ ಜೊತೆಗೆ ಬೀದಿ ನಾಯಿಗಳಿಗೂ ಕೂಡ ಆಹಾರ ನೀಡುತ್ತಿರುವ ಯುವಕರು
ಸಾಮಾನ್ಯ ದಿನಗಳಲ್ಲಿ ರಸ್ತೆ ಬದಿ ವ್ಯಾಪಾರಿಗಳು, ಸಾರ್ವಜನಿಕರು ಹಾಕುವ ಆಹಾರ ತಿಂದು ಬದುಕುತ್ತಿದ್ದ ದನಗಳು
ದಿನಂಪ್ರತಿ ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳಿಗೆ ಆಹಾರ ಪೂರೈಕೆ
ಈಗ ಜನರ ಓಡಾಟ ಇಲ್ಲದ ಪರಿಣಾಮ ದನಕರುಗಳಿಗೆ ತೀವ್ರ ತೊಂದರೆಯಾಗುತ್ತಿದೆ
ದನಗಳು ಇರುವ ಜಾಗಕ್ಕೆ ತೆರಳಿ ಮೇವು ಹಾಕುತ್ತಿರುವ ಯುವ ಭಾರತ ಸಂಘಟನೆಯ ಕಾರ್ಯಕರ್ತರು
ಬಿಡಾಡಿ ದನಗಳಿಗೆ ಮೇವು ಬೇಕಿದ್ದಲ್ಲಿ ಈ ನಂಬರ್ಗಳಿಗೆ 7411300141,9845454945, 9900412311 ಸಂಪರ್ಕಿಸಲು ಯುವ ಭಾರತ ಸಂಘಟನೆಯ ಸಂಸ್ಥಾಪಕ ಅದ್ಯಕ್ಷ ಉಮೇಶ ಕಾರಜೋಳ ಮನವಿ ಮಾಡಿದ್ದಾರೆ