MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹೊಟ್ಟೆನೋವು ತಾಳಲಾರದೇ ಮರಳಿ ಬಾರದೂರಿಗೆ ಪಯಣ: ಜೀವಕ್ಕೆ ಅಂತ್ಯವಾಡಿದ 19ರ ತರುಣಿ ಕೀರ್ತನಾ!

ಹೊಟ್ಟೆನೋವು ತಾಳಲಾರದೇ ಮರಳಿ ಬಾರದೂರಿಗೆ ಪಯಣ: ಜೀವಕ್ಕೆ ಅಂತ್ಯವಾಡಿದ 19ರ ತರುಣಿ ಕೀರ್ತನಾ!

ತುಮಕೂರು ಜಿಲ್ಲೆಯ ಬ್ಯಾತ ಗ್ರಾಮದಲ್ಲಿ, ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ 19 ವರ್ಷದ ಕೀರ್ತನಾ ಎಂಬ ಯುವತಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಕೆಲಸ ಹುಡುಕಿಕೊಂಡು ಚಿಕ್ಕಪ್ಪನ ಮನೆಗೆ ಬಂದಿದ್ದ ಈಕೆ, ನೋವು ಸಹಿಸಲಾಗದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.

1 Min read
Author : Sathish Kumar KH
Published : Jan 12 2026, 11:01 AM IST
Share this Photo Gallery
  • FB
  • TW
  • Linkdin
  • Whatsapp
15
ನೋವಿಗಾಗಿ ಜೀವಕ್ಕೆ ಅಂತ್ಯವಾಡಿದ ಕೀರ್ತನಾ
Image Credit : Asianet News

ನೋವಿಗಾಗಿ ಜೀವಕ್ಕೆ ಅಂತ್ಯವಾಡಿದ ಕೀರ್ತನಾ

ತುಮಕೂರು (ಜ.12): ಜಿಲ್ಲೆಯ ಊರ್ಡಿಗೆರೆ ಹೋಬಳಿಯ ಬ್ಯಾತ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ದೀರ್ಘಕಾಲದ ಹೊಟ್ಟೆನೋವಿನ ಬಾಧೆಯಿಂದ ಬೇಸತ್ತ 19 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.

25
ಘಟನೆಯ ವಿವರ
Image Credit : Asianet News

ಘಟನೆಯ ವಿವರ

ಮೃತ ಯುವತಿಯನ್ನು ಕಲಬುರಗಿ ಜಿಲ್ಲೆಯ ಕಲಗಿ ತಾಲೂಕಿನ ಸಾಲಹಳ್ಳಿ ನಿವಾಸಿ ಕೀರ್ತನಾ (19) ಎಂದು ಗುರುತಿಸಲಾಗಿದೆ. ಈಕೆ ಕಳೆದ ಎರಡು ತಿಂಗಳ ಹಿಂದಷ್ಟೇ ಕೆಲಸ ಹುಡುಕುವ ಸಲುವಾಗಿ ತುಮಕೂರು ತಾಲೂಕಿನ ಬ್ಯಾತ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದಳು. ನಗರ ಪ್ರದೇಶದಲ್ಲಿ ಯಾವುದಾದರೂ ಉತ್ತಮ ಕೆಲಸ ಸಿಗಬಹುದು ಎಂಬ ಆಸೆಯೊಂದಿಗೆ ಬಂದಿದ್ದ ಕೀರ್ತನಾಗೆ ಇದುವರೆಗೆ ಸೂಕ್ತ ಉದ್ಯೋಗ ಲಭಿಸಿರಲಿಲ್ಲ. ಹೀಗಾಗಿ ಚಿಕ್ಕಪ್ಪನ ಮನೆಯಲ್ಲೇ ಉಳಿದುಕೊಂಡಿದ್ದಳು.

Related Articles

Related image1
ಚಡ್ಡಿ ಹಾಕಿ ಓಡಾಡಬೇಡಮ್ಮ ಅಂತ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ರಕ್ತಬರುವಂತೆ ಹೋಂಗಾರ್ಡ್‌ಗೆ ನಡುರಸ್ತೆಯಲ್ಲಿ ಥಳಿಸಿದ ಯುವತಿ!
Related image2
19 ವರ್ಷದ ಯುವತಿ ಸಾವು.. ಸಾವಿಗೆ ಕಾರಣ ಗರ್ಭನಿರೋಧಕ ಮಾತ್ರೆನೋ, ನಿರ್ಲಕ್ಷ್ಯವೋ?
35
ನೋವು ತಂದ ಸಾವು
Image Credit : Asianet News

ನೋವು ತಂದ ಸಾವು

ಪೋಷಕರು ನೀಡಿರುವ ಮಾಹಿತಿಯ ಪ್ರಕಾರ, ಕೀರ್ತನಾ ಕಳೆದ ಕೆಲವು ಸಮಯದಿಂದ ತೀವ್ರವಾದ ಋತುಕಾಲದ (ಪಿರಿಯಡ್ಸ್‌) ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನ ಚಿಕ್ಕಪ್ಪನ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿದ ಕೀರ್ತನಾ, ತೀವ್ರವಾದ ಹೊಟ್ಟೆನೋವಿನ ವೇದನೆಯನ್ನು ತಾಳಲಾರದೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.

45
ಕುಟುಂಬಸ್ಥರ ಆಕ್ರಂದನ
Image Credit : Asianet News

ಕುಟುಂಬಸ್ಥರ ಆಕ್ರಂದನ

ಮನೆಯವರು ಹಿಂತಿರುಗಿ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಯುವತಿಯ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬದುಕಬೇಕಿದ್ದ ಮಗಳು ನೋವಿಗೆ ಹೆದರಿ ಹೀಗೆ ಅಕಾಲಿಕ ಮರಣವನ್ನಪ್ಪಿದ್ದು ಗ್ರಾಮಸ್ಥರಲ್ಲೂ ವಿಷಾದ ಮೂಡಿಸಿದೆ.

55
ಪೊಲೀಸ್ ತನಿಖೆ
Image Credit : Asianet News

ಪೊಲೀಸ್ ತನಿಖೆ

ಈ ವಿಷಯ ತಿಳಿಯುತ್ತಿದ್ದಂತೆಯೇ ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಕೆಲಸ ಹುಡುಕಿ ಜೀವನ ಕಟ್ಟಿಕೊಳ್ಳಬೇಕಿದ್ದ ಯುವತಿ, ನೋವಿನ ಕಾರಣಕ್ಕೆ ಬಾರದ ಲೋಕಕ್ಕೆ ಪಯಣಿಸಿರುವುದು ದುರಂತವೇ ಸರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ತುಮಕೂರು
ಋತುಚಕ್ರ

Latest Videos
Recommended Stories
Recommended image1
ಕೋಗಿಲು ಲೇಔಟ್ ತೆರವು: ಸರ್ಕಾರದ ಮನೆಗಾಗಿ ಪಟ್ಟು ಹಿಡಿದವರು ರಾತ್ರೋರಾತ್ರಿ ಪರಾರಿ! 25 ಅರ್ಹರು ಮಾತ್ರ ಪತ್ತೆ!
Recommended image2
Ramanagara: ರಾಮನೂರಿನ ರಾಮೋತ್ಸವದಲ್ಲಿ 450ಕ್ಕೂ ಹೆಚ್ಚು ಗ್ರಾಮದೇವತೆಗಳ ಅಪೂರ್ವ ಸಂಗಮ
Recommended image3
ಊಟ ಕೊಡುವ ನೆಪದಲ್ಲಿ ರೇ* ವಿಡಿಯೋ ವೈರಲ್ : ಅತ್ಯಾ*ಚಾರಿಗಳಿಗೆ ಮೀಸೆ, ತಲೆ ಬೋಳಿಸಿ ಥಳಿಸಿದ ಗ್ರಾಮಸ್ಥರು
Related Stories
Recommended image1
ಚಡ್ಡಿ ಹಾಕಿ ಓಡಾಡಬೇಡಮ್ಮ ಅಂತ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು, ರಕ್ತಬರುವಂತೆ ಹೋಂಗಾರ್ಡ್‌ಗೆ ನಡುರಸ್ತೆಯಲ್ಲಿ ಥಳಿಸಿದ ಯುವತಿ!
Recommended image2
19 ವರ್ಷದ ಯುವತಿ ಸಾವು.. ಸಾವಿಗೆ ಕಾರಣ ಗರ್ಭನಿರೋಧಕ ಮಾತ್ರೆನೋ, ನಿರ್ಲಕ್ಷ್ಯವೋ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved