MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಮಾರ್ಕೋನಹಳ್ಳಿ ಬಳಿಕ ತುಮಕೂರಿನ ತೀತಾ ಡ್ಯಾಮ್‌ ಕೂಡ ಭರ್ತಿ, ರೈತರ ಸಂತಸ ಇಮ್ಮಡಿ

ಮಾರ್ಕೋನಹಳ್ಳಿ ಬಳಿಕ ತುಮಕೂರಿನ ತೀತಾ ಡ್ಯಾಮ್‌ ಕೂಡ ಭರ್ತಿ, ರೈತರ ಸಂತಸ ಇಮ್ಮಡಿ

ನಿರಂತರ ಮಳೆಯಿಂದಾಗಿ ತುಮಕೂರಿನ ತೀತಾ ಕಿರು ಜಲಾಶಯ ಭರ್ತಿಯಾಗಿದ್ದು, ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾದ ಬೆನ್ನಲ್ಲೇ ತೀತಾ ಜಲಾಶಯ ಕೂಡ ಭರ್ತಿಯಾಗಿದ್ದು, ಒಂದೇ ವರ್ಷದಲ್ಲಿ ಎರಡು ಬಾರಿ ಈ ಜಲಾಶಯ ಭರ್ತಿಯಾಗಿದೆ.

1 Min read
Santosh Naik
Published : Oct 23 2024, 05:53 PM IST
Share this Photo Gallery
  • FB
  • TW
  • Linkdin
  • Whatsapp
110

ಒಂದೆಡೆ ಬೆಂಗಳೂರಿನ ಜನರು ನಿರಂತರ ಮಳೆಗೆ ಹೈರಾಣಾಗಿದ್ದರೆ, ಪ್ರತಿ ಬಾರಿ ಬೇಸಿಗೆಯಲ್ಲಿ ನೀರಿನ ವಿಚಾರದಲ್ಲಿ ಕಂಗಾಲಾಗುತ್ತಿದ್ದ ತುಮಕೂರಿಗೆ ಈ ಮಳೆಗಾಲ ಹರ್ಷ ನೀಡಿದೆ.
 

210

ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿ ಐದು ದಿನಗಳಾದ ಬೆನ್ನಲ್ಲಿಯೇ ತುಮಕೂರಿನ ಇನ್ನೊಂದು ಕಿರು ಜಲಾಶಯ ಭರ್ತಿಯಾದ ಸುದ್ದಿ ಜನರಿಗೆ ಸಿಕ್ಕಿದೆ.
 

310

ಮಾರ್ಕೋನಹಳ್ಳಿ ಜಲಾಶಯ ಕಳೆದ ಶುಕ್ರವಾರ ಭರ್ತಿಯಾಗಿ ಅಲ್ಲಿದ್ದ 2 ಸ್ವಯಂಚಾಲಿನ ಸೈಫನ್‌ ಓಪನ್‌ ಆಗಿತ್ತು. ಈಗ ನಿರಂತರ ಮಳೆಯಿಂದ ಜಿಲ್ಲೆಯ ಇನ್ನೊಂದು ಜಲಾಶಯ ಕೂಡ ತುಂಬಿ ಹರಿದಿದೆ.
 

410

ನಿರಂತರ ಮಳೆಯಿಂದ ಭರ್ತಿಯಾದ ಕೊರಟಗೊರೆ ತಾಲೂಕಿನ ಗೊರವನಹಳ್ಳಿ ಸಮೀಪದ ತೀತಾ ಕಿರು ಜಲಾಶಯ ಭರ್ತಿಯಾಗಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ತೀತಾ ಡ್ಯಾಮ್‌ ಭರ್ತಿಯಾಗಿದೆ
 

510

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೊರನವಹಳ್ಳಿ ಬಳಿ ಇರುವ ತೀತಾ ಜಲಾಶಯವನ್ನು  ಜಯಮಂಗಲಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.
 

610

ಮಂಗಳವಾರ ಬೆಳಗ್ಗೆಯಿಂದ ತೀತಾ ಕಿರು ಜಲಾಶಯ ತುಂಬಿ ಹರಿಯುತ್ತಿದೆ. ನಿರಂತರ ಮಳೆಯಿಂದ ಜಯಮಂಗಲಿ ನದಿಗೆ ಜೀವ ಕಳೆ ಬಂದಿದೆ. ಇದು ಜಿಲ್ಲೆಯ ರೈತರ ಸಂತಸ ಇಮ್ಮಡಿಯಾಗಲು ಕಾರಣವಾಗಿದೆ.
 

710

ಕಳೆದ ಒಂದು ವಾರದಿಂದ ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿದೆ. ಇದು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ.
 

810

ಜಯಮಂಗಲಿ ನದಿಯ ನೀರು ಪ್ರವಾಹದ ರೀತಿಯಲ್ಲಿ ಡ್ಯಾಂಗೆ ಬಂದು ಸೇರುತ್ತಿದೆ ಪರಿಣಾಮ ಡ್ಯಾಂ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಡ್ಯಾಮ್‌ ವೈಭವ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. 
 

910

ಹೆಚ್ಚಿದ ಹೊರ ಹರಿವಿನಿಂದಾಗಿ ನದಿ ಪಾತ್ರದ ಜನರಿಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಜಮೀನುಗಳಿಗೆ ಹಾಗೂ ನದಿಪಾತ್ರದ ಮನೆಗಳಿಗೆ ನೀರು ನುಗ್ಗುವ ಅಪಾಯ ಈ ವೇಳೆ ಇರುತ್ತದೆ.

1010

 ತೀತಾ ಜಲಾಶಯದ ಕ್ರಸ್ಟ್‌ ಗೇಟ್‌ಅನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ಗೇಟ್‌ಗಳು ಓಪನ್‌ ಆಗಿರುವ ಕಾರಣ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದೆ.
 

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ರೈತರು
ಮಳೆ
ತುಮಕೂರು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved