ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಗಡಿಪ್ರದೇಶದಲ್ಲಿ ಗಡಿಗುರುತು ಕಾರ್ಯ ಶುರು
ಬಳ್ಳಾರಿ(ಅ.17): ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವಿನ ಗಡಿ ಗುರುತಿನ ಸಮೀಕ್ಷಾ ಕಾರ್ಯ ಶುಕ್ರವಾರ ಆರಂಭಗೊಂಡಿದ್ದು, ಸರ್ವೆ ಆಫ್ ಇಂಡಿಯಾ ಅಧಿಕಾರಿಗಳ ತಂಡ ಶುಕ್ರವಾರ ಆಂಧ್ರಪ್ರದೇಶದ ಓಬಳಾಪುರಂ ಹಾಗೂ ಜಿಲ್ಲೆಯ ಹಲಕುಂದಿ ನಡುವಿನ ರಾಜ್ಯಗಡಿ ಪ್ರದೇಶದಲ್ಲಿ ಗಡಿಗುರುತಿನ ಸಮೀಕ್ಷೆ ನಡೆಸಿದ್ದಾರೆ.

<p>ಸರ್ವೆ ಆಫ್ ಇಂಡಿಯಾದ ಅಧೀಕ್ಷಕ ಅಧಿಕಾರಿ ದೇವಸಿಂಗ್ ಮೆಹರ್ ಹಾಗೂ ಸರ್ವೆ ಅಧಿಕಾರಿ ಪಿ. ಪ್ರೇಮಕುಮಾರ್ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಅಂತರ ರಾಜ್ಯದ ಗಡಿಗುರುತನ್ನು ಪತ್ತೆ ಹಚ್ಚಿದರು. </p>
ಸರ್ವೆ ಆಫ್ ಇಂಡಿಯಾದ ಅಧೀಕ್ಷಕ ಅಧಿಕಾರಿ ದೇವಸಿಂಗ್ ಮೆಹರ್ ಹಾಗೂ ಸರ್ವೆ ಅಧಿಕಾರಿ ಪಿ. ಪ್ರೇಮಕುಮಾರ್ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಅಂತರ ರಾಜ್ಯದ ಗಡಿಗುರುತನ್ನು ಪತ್ತೆ ಹಚ್ಚಿದರು.
<p>ಸುಗ್ಗಲಮ್ಮ ದೇವಸ್ಥಾನ, ಒಎಂಸಿ ಗಣಿಗಾರಿಕೆ ಪ್ರದೇಶದಲ್ಲಿ ಓಡಾಡಿ ಗಡಿಗುರುತು ಕಾರ್ಯ ನಡೆಸಿದ ಅಧಿಕಾರಿಗಳ ತಂಡ, ಈ ಹಿಂದಿನ ಗಡಿಗುರುತುಗಳನ್ನು ಸಹ ಪರಿಶೀಲನೆ ನಡೆಸಿತು. </p>
ಸುಗ್ಗಲಮ್ಮ ದೇವಸ್ಥಾನ, ಒಎಂಸಿ ಗಣಿಗಾರಿಕೆ ಪ್ರದೇಶದಲ್ಲಿ ಓಡಾಡಿ ಗಡಿಗುರುತು ಕಾರ್ಯ ನಡೆಸಿದ ಅಧಿಕಾರಿಗಳ ತಂಡ, ಈ ಹಿಂದಿನ ಗಡಿಗುರುತುಗಳನ್ನು ಸಹ ಪರಿಶೀಲನೆ ನಡೆಸಿತು.
<p>ಆಂಧ್ರಪ್ರದೇಶ ಹಾಗೂ ಸಂಡೂರು ತಾಲೂಕು ಗಡಿಯಿಂದ ವಿವಾದಿತ 4 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 12 ಅಡಿಗೆ ಒಂದರಂತೆ ಗಡಿಗುರುತು ಅಳವಡಿಸುವ ಹಾಗೂ ಹದ್ದುಬಸ್ತು ಹಾಕುವ ಕಾರ್ಯ ನಡೆಯಿತು. </p>
ಆಂಧ್ರಪ್ರದೇಶ ಹಾಗೂ ಸಂಡೂರು ತಾಲೂಕು ಗಡಿಯಿಂದ ವಿವಾದಿತ 4 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 12 ಅಡಿಗೆ ಒಂದರಂತೆ ಗಡಿಗುರುತು ಅಳವಡಿಸುವ ಹಾಗೂ ಹದ್ದುಬಸ್ತು ಹಾಕುವ ಕಾರ್ಯ ನಡೆಯಿತು.
<p>ಸರ್ವೆ ಆಫ್ ಇಂಡಿಯಾ, ಭೂಮಾಪನಾ ಇಲಾಖೆ, ಅರಣ್ಯ, ಕಂದಾಯ ಸೇರಿದಂತೆ ಎರಡು ರಾಜ್ಯಗಳ 45ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿಗುರುತು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>
ಸರ್ವೆ ಆಫ್ ಇಂಡಿಯಾ, ಭೂಮಾಪನಾ ಇಲಾಖೆ, ಅರಣ್ಯ, ಕಂದಾಯ ಸೇರಿದಂತೆ ಎರಡು ರಾಜ್ಯಗಳ 45ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿಗುರುತು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
<p>ಜಿಂದಾಲ್ ಗೆಸ್ಟ್ ಹೌಸ್ನಲ್ಲಿ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನದ ವರೆಗೆ ಸಭೆ ನಡೆಸಿ, ಬಳಿಕ ನಿಗದಿತ ಸ್ಥಳಕ್ಕೆ ತೆರಳಿತು. </p>
ಜಿಂದಾಲ್ ಗೆಸ್ಟ್ ಹೌಸ್ನಲ್ಲಿ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನದ ವರೆಗೆ ಸಭೆ ನಡೆಸಿ, ಬಳಿಕ ನಿಗದಿತ ಸ್ಥಳಕ್ಕೆ ತೆರಳಿತು.
<p>ಭೂಮಾಪನಾ ಇಲಾಖೆಯ ಉಪ ನಿರ್ದೇಶಕಿ ಸುಮಾ ನಾಯಕ್, ಸಹಾಯಕ ನಿರ್ದೇಶಕ ಉದಯಶಂಕರ್ ಸೇರಿದಂತೆ ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. </p>
ಭೂಮಾಪನಾ ಇಲಾಖೆಯ ಉಪ ನಿರ್ದೇಶಕಿ ಸುಮಾ ನಾಯಕ್, ಸಹಾಯಕ ನಿರ್ದೇಶಕ ಉದಯಶಂಕರ್ ಸೇರಿದಂತೆ ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
<p>ಒಟ್ಟು 45 ದಿನಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.</p>
ಒಟ್ಟು 45 ದಿನಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.