ಕೋವಿಡ್ ವಿರುದ್ಧ ಹೋರಾಟ: ಕೊರೋನಾ ವಾರಿಯರ್ಸ್ಗೆ ಹೂಮಳೆ ಸ್ವಾಗತ..!
ಬೆಂಗಳೂರು(ಮೇ.09): ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ವೈದ್ಯರು, ಬಿಬಿಎಂಪಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಕೆಇಬಿ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಗಳಿಗೆ ಸಾರ್ವಜನಿಕರು ಹೂಮಳೆಯ ಸ್ವಾಗತ ನೀಡಿ ಗೌರವ ಸಲ್ಲಿಸಿದ್ದಾರೆ.
ಜನರ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡುತ್ತಿರುವ ಕೊರೋನಾ ವಾರಿಯರ್ಸ್ಗೆ ಹೂಮಳೆ ಸುರಿಸಿ ಗೌರವ ಸಲ್ಲಿಸಿದ ಸಾರ್ವಜನಿಕರು
ವೈದ್ಯರು, ಬಿಬಿಎಂಪಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಕೆಇಬಿ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿಗಳಿಗೆ ಹೂಮಳೆಗೈದು ಗೌರವ ಸಲ್ಲಿಕೆ
ಲಾಕ್ಡೌನ್ ವೇಳೆ ಹಗಲು ರಾತ್ರಿಯೆನ್ನದೆ ಕೆಲಸ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್
ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳು, ಕುಟುಂಬವಿದ್ದರೂ ಕೊರೋನಾ ಸೋಂಕಿತರ ಆರೈಕೆ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೊಂದು ಸಲಾಂ
ಕೆಲವು ಕಡೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗಳು ಆಗುತ್ತಿದ್ದರೂ ದೃತಿಗೆಡದೆ ದೇಶಕ್ಕಾಗಿ ಕೆಲಸ ಮಾಡುತ್ತಿರುವ ನಾರಿಮಣಿಯರು
ಒಂದೂ ದಿನವೂ ರಜೆ ಪಡೆಯದೆ ನಿರಂತರವಾಗಿ ಸಾರ್ವಜನಿಕರ ಸೇವೆಯಲ್ಲಿ ನಿರತಾಗಿರುವ ಆರಕ್ಷಕರಿಗೆ ಹೂಮಳೆ ಸ್ವಾಗತ
ನಗರದ ಸ್ವಚ್ಛತೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡ ಪೌರ ಕಾರ್ಮಿಕರಿಗೆ ಹೂಮಳೆಯ ಸ್ವಾಗತ
ಜಯನಗರ ಹಾಗೂ ವೈಟ್ ಫೀಲ್ಡ್ನಲ್ಲಿ ಕೊರೋನಾ ವಾರಿಯರ್ಸ್ಗೆ ಸಾರ್ವಜನಿಕರಿಂದ ಗೌರವ ಸಲ್ಲಿಕೆ