ಲಾಕ್ಡೌನ್ ಎಫೆಕ್ಟ್: ನಡುನೀರಲ್ಲೇ ಕೈಬಿಟ್ಟ ಮಾಲೀಕ, ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ನೆರವಾದ ಜಡ್ಜ್..!
ಕೊಪ್ಪಳ(ಮೇ.14): ದುಡಿಯಲು ಮಹಾರಾಷ್ಟ್ರದಿಂದ ಕಾರ್ಮಿಕರನ್ನ ಕರೆಸಿಕೊಂಡು ಲಾಕ್ಡೌನ್ ಘೋಷಣೆಯಾಗಿದ್ದರಿಂದ ಇಟ್ಟಿಗೆ ಭಟ್ಟಿ ಮಾಲೀಕರು ಇವರನ್ನ ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಕಂಗಾಲಾಗಿದ್ದ ವಲಸೆ ಕಾರ್ಮಿಕರು ಮಹಾರಾಷ್ಟ್ರಕ್ಕೆ ನಡೆದುಕೊಂಡೇ ತೆರಳುತ್ತಿದ್ದರು.
ಮಹಾರಾಷ್ಟ್ರಕ್ಕೆ ತೆರಳುತ್ತಿರುವ ವೇಳೆ ಕೊಪ್ಪಳದ ಬಳಿ ರೈಲ್ವೆ ಬ್ರಿಡ್ಜ್ ಬಳಿ ವಾಸ್ತವ್ಯ ಹೂಡಿದ್ದ ವಲಸೆ ಕಾರ್ಮಿಕರು
ಉದ್ಯೋಗ ಅರಸಿ ಕೊಪ್ಪಳಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕರು
ಕೊಪ್ಪಳದ ಇಟ್ಟಿಗೆ ಭಟ್ಟಿಯಲ್ಲಿ ದುಡಿಯುತ್ತಿದ್ದ ಬಡ ಕಾರ್ಮಿಕರು
ಲಾಕ್ಡೌನ್ ಹಿನ್ನೆಲೆಯಲ್ಲಿ ಇಟ್ಟಿಗೆ ಭಟ್ಟಿ ಬಂದ್ ಮಾಡಿ ನಡು ನೀರಲ್ಲಿ ಕೈಬಿಟ್ಟಿದ ಮಾಲೀಕ
ಈ ವಿಷಯ ಅರಿತು ಸ್ಥಳಕ್ಕೆ ಆಗಮಿಸಿ ಆಶ್ರಯ ವ್ಯವಸ್ಥೆ ಕಲ್ಪಿಸಿದ ಜಡ್ಜ್
ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚಿಸಿದ ಜಡ್ಜ್
ಕಾರ್ಮಿಕರನ್ನ ದುಡಿಸಿಕೊಡು ಈ ರೀತಿ ಬಿಟ್ಟಿರುವ ಇಟ್ಟಂಗಿ ಭಟ್ಟಿ ಮಾಲೀಕರನ್ನು ಕರೆತರುವಂತೆಯೂ ಸೂಚನೆ