MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru: ಯುವತಿ ವಿಚಾರವಾಗಿ ಮಹಮ್ಮದ್ ರಫೀಕ್ ಕಿಡ್ನಾಪ್; ಬಟ್ಟೆ ಬಿಚ್ಚಿಸಿ ಹಲ್ಲೆ

Bengaluru: ಯುವತಿ ವಿಚಾರವಾಗಿ ಮಹಮ್ಮದ್ ರಫೀಕ್ ಕಿಡ್ನಾಪ್; ಬಟ್ಟೆ ಬಿಚ್ಚಿಸಿ ಹಲ್ಲೆ

ಬೆಂಗಳೂರಿನ ಬಾಗಲೂರಿನಲ್ಲಿ ಯುವತಿ ವಿಚಾರವಾಗಿ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ. ಹಳೆ ಪ್ರೇಮಿಯ ಸಂಪರ್ಕಕ್ಕೆ ಬಂದಿದ್ದಕ್ಕೆ ಹೊಸ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದು, ಪೊಲೀಸರು ಐವರನ್ನು ಬಂಧಿಸಿದ್ದಾರೆ.

1 Min read
Author : Mahmad Rafik
Published : May 25 2026, 01:02 PM IST
Share this Photo Gallery
  • FB
  • TW
  • Linkdin
  • Whatsapp
15
ಯುವಕನ ಅಪಹರಣ
Image Credit : Gemini

ಯುವಕನ ಅಪಹರಣ

ಬೆಂಗಳೂರಿನ ಬಾಗಲೂರಿನಲ್ಲಿ ಯುವತಿಗಾಗಿ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್ ಕಿಡ್ನಾಪ್ ಆಗಿ ಹಲ್ಲೆಗೊಳಗಾದ ಯುವಕನಾಗಿದ್ದು, ಆತನನ್ನು ಅಪಹರಿಸಿದ್ದ ಅಫಾನ್, ಶಾಹಿದ್, ಅರ್ಫಾತ್, ಮೋಸಿನ್ ಮತ್ತು ಅಲಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದಂತೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಅಬ್ನಾನ್ ಹಾಗೂ ಅಫ್ರೀದಿಗಾಗಿ ಹುಡುಕಾಟ ಮುಂದುವರಿದಿದೆ.

Add Asianetnews Kannada as a Preferred SourcegooglePreferred
25
ಬ್ರೇಕ್ ಅಪ್ ಮತ್ತು ಹೊಸ ಸಂಬಂಧ
Image Credit : AI Meta

ಬ್ರೇಕ್ ಅಪ್ ಮತ್ತು ಹೊಸ ಸಂಬಂಧ

ದೂರುದಾರ ಮೊಹಮ್ಮದ್ ರಫೀಕ್ ಈ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು, ಕಳೆದ ಒಂದು ವರ್ಷದ ಹಿಂದೆ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ತದನಂತರ ಆ ಯುವತಿ ಅಬ್ನಾನ್ ಎಂಬಾತನ ಸಂಪರ್ಕಕ್ಕೆ ಬಂದು, ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿಶ್ಚಯಿಸಿದ್ದರು.

Related Articles

Related image1
ಬೆಂಗಳೂರಿನಲ್ಲಿ ಗರ್ಭಿಣಿ ಬೆಕ್ಕಿನ ಅಪಹರಣ; 9 ಜನರ ವಿರುದ್ಧ FIR ದಾಖಲು! ಇಂಥ ಘಟನೆಗೆ ಕಾರಣ ಏನು?
Related image2
ಉಡುಪಿ: ಸಾಸ್ತಾನ ಯುವಕನ ಅಪಹರಣ ಪ್ರಕರಣ, ಪ್ರಮುಖ ಆರೋಪಿಗಳ ಪತ್ತೆಗೆ 50,000 ಬಹುಮಾನ ಘೋಷಣೆ
35
ಹಳೆ ಲವ್ವರ್ ಎಂಟ್ರಿ ಮತ್ತು ಜಗಳ
Image Credit : Getty

ಹಳೆ ಲವ್ವರ್ ಎಂಟ್ರಿ ಮತ್ತು ಜಗಳ

ಮದುವೆ ಸಮೀಪಿಸುತ್ತಿದ್ದ ವೇಳೆಯಲ್ಲಿ ಹಳೇ ಲವ್ವರ್ ರಫೀಕ್ ಮತ್ತೆ ಯುವತಿಯನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಈ ವಿಷಯ ತಿಳಿದ ಅಬ್ನಾನ್, "ಯಾಕೆ ಹೀಗೆ ಮಾಡುತ್ತಿದ್ದೀಯಾ?" ಎಂದು ಕೇಳಲು ರಫೀಕ್ ಬಳಿ ಹೋದಾಗ, ರಫೀಕ್ ಆತನಿಗೆ ಹಲ್ಲೆ ನಡೆಸಿ ಅವಮಾನ ಮಾಡಿ ಕಳುಹಿಸಿದ್ದಾನೆ.

45
ರಿವೆಂಜ್ ಪ್ಲಾನ್ ಮತ್ತು ಕಿಡ್ನಾಪ್
Image Credit : Getty

ರಿವೆಂಜ್ ಪ್ಲಾನ್ ಮತ್ತು ಕಿಡ್ನಾಪ್

ತನಗಾದ ಅವಮಾನದ ಬಗ್ಗೆ ಅಬ್ನಾನ್ ತನ್ನ ಗೆಳೆಯ ಅಫ್ರೀದಿಗೆ ತಿಳಿಸಿದ್ದು, ಬಳಿಕ ಇಬ್ಬರೂ ಸೇರಿ ಐದಾರು ಜನರ ಗ್ಯಾಂಗ್ ಕಟ್ಟಿಕೊಂಡು ದೇವನಹಳ್ಳಿ ಬಳಿ ರಫೀಕ್‌ನನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ದಾರೆ. ಯೋಜನೆಯಂತೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ ಆರೋಪಿಗಳು, ರಫೀಕ್‌ನನ್ನು ಅಪಹರಿಸಿ ಬಾಗಲೂರಿನ ಖಾಲಿ ಜಾಗವೊಂದಕ್ಕೆ ಕರೆದೊಯ್ದಿದ್ದಾರೆ.

55
ಅಮಾನವೀಯ ಹಲ್ಲೆ ಮತ್ತು ಬಂಧನ
Image Credit : Getty

ಅಮಾನವೀಯ ಹಲ್ಲೆ ಮತ್ತು ಬಂಧನ

ರಫೀಕ್‌ನ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯ ಬಳಿಕ ನೊಂದ ಸಂತ್ರಸ್ತ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದು, ಸದ್ಯ ದೂರಿನ ಅನ್ವಯ ಬಾಗಲೂರು ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಪಹರಣ
ಬೆಂಗಳೂರು

Latest Videos
Recommended Stories
Recommended image1
Love Jihad ಎಲ್ಲರಂತಲ್ಲ ನನ್ನ... ಎಂದು ಹಿಂದೆ ಹೋದವಳಿಗೆ ಬೆತ್ತಲು ಮಾಡಿದ! ಹಿಂದೂ ಸಂಘಟನೆಗೆ ಸಿಕ್ಕಿಬಿದ್ದ ಹುಬ್ಬಳ್ಳಿಯವ
Recommended image2
Haveri: ಅಕ್ರಮ ಸಂಬಂಧ ಶಂಕೆ; ಅಕ್ಕನ ಕತ್ತು ಸೀಳಿದ ತಮ್ಮ! ಅಂಗನವಾಡಿಯಲ್ಲಿ ಭೀಕರ ಕೊಲೆ
Recommended image3
ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ಜೀವಕಳೆ ತಂದ ಕೃತ್ತಿಕಾ ಮಳೆ; ಗರಿಗೆದರಿದ ಕೃಷಿ ಚಟುವಟಿಕೆಗಳು
Related Stories
Recommended image1
ಬೆಂಗಳೂರಿನಲ್ಲಿ ಗರ್ಭಿಣಿ ಬೆಕ್ಕಿನ ಅಪಹರಣ; 9 ಜನರ ವಿರುದ್ಧ FIR ದಾಖಲು! ಇಂಥ ಘಟನೆಗೆ ಕಾರಣ ಏನು?
Recommended image2
ಉಡುಪಿ: ಸಾಸ್ತಾನ ಯುವಕನ ಅಪಹರಣ ಪ್ರಕರಣ, ಪ್ರಮುಖ ಆರೋಪಿಗಳ ಪತ್ತೆಗೆ 50,000 ಬಹುಮಾನ ಘೋಷಣೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved