MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಒಂದು ದಶಕದಿಂದ ಗಲ್ಫ್‌ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್‌ ಮಾವು ರಫ್ತಿಗೆ ಯುದ್ಧದ ಕರಿನೆರಳು!

ಒಂದು ದಶಕದಿಂದ ಗಲ್ಫ್‌ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್‌ ಮಾವು ರಫ್ತಿಗೆ ಯುದ್ಧದ ಕರಿನೆರಳು!

ವರದಿ: ಬಸವರಾಜ ಹಿರೇಮಠಮಧ್ಯಪ್ರಾಚ್ಯದಲ್ಲಿನ ಯುದ್ಧವು ಧಾರವಾಡ ಆಪೂಸ್ ಎಂದೇ ಖ್ಯಾತವಾದ ಅಲ್ಫಾನ್ಸೋ ಮಾವಿನ ರಫ್ತಿಗೆ ಅಡ್ಡಿಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಳೆಗಾರರ ಸಂಘವು ಅಮೆರಿಕ, ಯುಕೆ ಮತ್ತು ಸಿಂಗಾಪುರದಂತಹ ಪರ್ಯಾಯ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ.  

2 Min read
Author : Gowthami K
Published : Mar 13 2026, 11:32 PM IST
Share this Photo Gallery
  • FB
  • TW
  • Linkdin
  • Whatsapp
16
ಧಾರವಾಡ ಆಪೂಸ್‌
Image Credit : our own

ಧಾರವಾಡ ಆಪೂಸ್‌

ಧಾರವಾಡ: ಒಂದು ದಶಕದಿಂದ ಗಲ್ಫ್‌ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್‌ ಎಂದೇ ಹೆಸರಾಗಿರುವ ಅಲ್ಫಾನ್ಸೋ ಮಾವಿನ ರಫ್ತಿಗೆ ಪ್ರಸ್ತುತ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಕರಿ ನೆರಳು ಚೆಲ್ಲಿದೆ.

ಮುಂದಿನ 15 ದಿನಗಳಲ್ಲಿ ಮಾವಿನ ಋತು ಪ್ರಾರಂಭವಾಗಲಿದ್ದು, ಉತ್ತಮ ಗುಣಮಟ್ಟದ ಅಲ್ಫಾನ್ಸೋ ಮಾವನ್ನು ಏಪ್ರಿಲ್‌ ಮೊದಲ ವಾರದಿಂದ ಅಬುಧಾಬಿ, ಇರಾನ್‌, ಯುಎಇ, ಕುವೈತ್‌, ಕತಾರ್‌ ಮತ್ತು ಇರಾಕ್‌ಗೆ ರಪ್ತು ಮಾಡಲು ರೈತರು ಸಿದ್ಧತೆ ನಡೆಸಿದ್ದರು. ಆದರೆ ಈ ದೇಶದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಧಾರವಾಡ, ಬೆಳಗಾವಿ ಮತ್ತು ಹಾವೇರಿಯ ಕೆಲವು ಭಾಗಗಳಲ್ಲಿ ಗುಣಮಟ್ಟದ ಅಲ್ಫಾನ್ಸೋ ತಳಿ ಬೆಳೆಯುತ್ತಿದ್ದು, ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ದೇಶ ಹಾಗೂ ವಿದೇಶಕ್ಕೂ ರಫ್ತಾಗುತ್ತದೆ. ಈ ಪೈಕಿ 10 ವರ್ಷಗಳಿಂದ ಧಾರವಾಡದ ಹಲವು ಮಾವಿನ ತೋಟಗಳಿಂದ ಗಲ್ಫ್‌ ದೇಶ ಮತ್ತು ಯುರೋಪಿಯನ್ ದೇಶಗಳಿಗೂ ಮಾವಿನ ಹಣ್ಣು ರಫ್ತಾಗುತ್ತಿದೆ.

26
300 ಟನ್‌ ರಫ್ತು:
Image Credit : Asianet News

300 ಟನ್‌ ರಫ್ತು:

ದೇಶೀಯ ಮಾರುಕಟ್ಟೆಗೆ ಹೋಲಿಸಿದರೆ ಆಲ್ಫೋನ್ಸೊ ಮಾವಿನ ಹಣ್ಣು ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಹೆಚ್ಚಿನ ಬೆಲೆ ಪಡೆಯುತ್ತವೆ. ಯುರೋಪ್‌ನಲ್ಲಿ ಹೆಚ್ಚಿನ ಗುಣಮಟ್ಟದ ತಪಾಸಣೆ ನಡೆಯುತ್ತಿದ್ದು, ಗಲ್ಫ್‌ ದೇಶಗಳಲ್ಲಿ ಈ ಪ್ರಕ್ರಿಯೆ ಅಷ್ಟೊಂದಿಲ್ಲ. ಈ ಹಿನ್ನೆಲೆಯಲ್ಲಿ ಗಲ್ಫ್‌ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣು ರಫ್ತು ಮಾಡಲು ಬೆಳೆಗಾರರು ಸಹ ಆಸಕ್ತರಾಗಿದ್ದಾರೆ. ಕಳೆದ ಋತುವಿನಲ್ಲಿ ಧಾರವಾಡ, ಹಾವೇರಿ, ಬೆಳಗಾವಿ ಭಾಗದಿಂದ 300 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಮಾವು ರಫ್ತು ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, ಸದ್ಯ ಮಾವು ರಫ್ತು ಮಾಡಲು ಆಸಕ್ತ ವ್ಯಾಪಾರಿಗಳು ಮಾವು ಬೆಳೆಗಾರರನ್ನು ಸಂಪರ್ಕಿಸದೇ ಇರುವುದು ಸಹ ಬೆಳೆಗಾರರಿಗೆ ಆತಂಕ ತಂದಿದೆ.

Related Articles

Related image1
ವರ್ಷಪೂರ್ತಿ ಹಣ್ಣು ಬಿಡುವ ವಿದೇಶಿ ಮಾವು ಬೆಳೆದ ಬಿಸಿಲನಾಡು ವಿಜಯಪುರದ ಯುವ ರೈತ!
Related image2
ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್, ದೇವೇಗೌಡರ ಮನವಿಗೆ ಸಿಕ್ಕಿತು ಫಲ
36
ಪರ್ಯಾಯ ಮಾರುಕಟ್ಟೆ:
Image Credit : stockPhoto

ಪರ್ಯಾಯ ಮಾರುಕಟ್ಟೆ:

ಗಲ್ಫ್ ಮಾರುಕಟ್ಟೆಗೆ ಮಾವು ತಲುಪದಿರುವ ಬಗ್ಗೆ ಬೆಳೆಗಾರರು ಚಿಂತಿತರಾಗಿರುವ ಮಧ್ಯೆಯೇ, ಮಾವು ಬೆಳೆಗಾರರ ​​ಸಂಘವು ಪರ್ಯಾಯ ಚಿಂತನೆ ಸಹ ಮಾಡುತ್ತಿದೆ. ಸದ್ಯದ ಗಲ್ಫ್‌ನಲ್ಲಿರುವ ಯುದ್ಧದ ಪರಿಸ್ಥಿತಿಯನ್ನು ಋಣಾತ್ಮಕವಾಗಿ ನೋಡುವ ಬದಲು ಧನಾತ್ಮಕವಾಗಿ ನೋಡಬೇಕಿದೆ. ಸಂಘವು ಪರ್ಯಾಯ ಅಂತಾರಾಷ್ಟ್ರೀಯ ಮಾರುಕಟ್ಟೆ ಹುಡುಕುತ್ತಿದೆ. ಈ ವರ್ಷ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಸಿಂಗಾಪುರಕ್ಕೆ ಅಲ್ಫೋನ್ಸೊ ಮಾವಿನ ಹಣ್ಣನ್ನು ರಫ್ತು ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಸಿಂಗಾಪುರ ಈಗಾಗಲೇ ಮಾವಿನ ಹಣ್ಣಿಗೆ ಆರ್ಡರ್ ನೀಡುತ್ತಿದೆ ಎಂದು ಸಂಘದ ಗೌರವಾಧ್ಯಕ್ಷ ರಾಜೇಂದ್ರ ಪೋದ್ದಾರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

46
ಯುಕೆಗೆ ರಫ್ತು ಮಾಡಲು ಮಾತುಕತೆ
Image Credit : Freepik

ಯುಕೆಗೆ ರಫ್ತು ಮಾಡಲು ಮಾತುಕತೆ

ಹಣ್ಣನ್ನು ಖರೀದಿಸಿ ಯುಎಸ್ ಮತ್ತು ಯುಕೆಗೆ ರಫ್ತು ಮಾಡಲು ಸಿದ್ಧರಿರುವ ದೆಹಲಿ ಮತ್ತು ಮುಂಬೈನ ವಸೈ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಆದಾಗ್ಯೂ ಯುಎಸ್ ಸರ್ಕಾರ ವಿಧಿಸಿರುವ ಸುಂಕಗಳ ಬಗ್ಗೆ ಅನಿಶ್ಚಿತತೆಯು ಕಳವಳಕಾರಿ ಎನ್ನುವ ಡಾ. ಪೋದ್ದಾರ, ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೊದಲು ನಾವು ಸುಂಕ ರಚನೆ ಅಧ್ಯಯನ ಮಾಡುತ್ತಿದ್ದೇವೆ ಎಂಬ ಮಾಹಿತಿ ನೀಡಿದರು.

ಈ ಋತುವಿನಲ್ಲಿ ಇಳುವರಿ ಕಡಿಮೆಯಾದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಉತ್ಪಾದನೆಯಲ್ಲಿನ ಕುಸಿತವು ಧಾರವಾಡ ಮತ್ತು ಬೆಳಗಾವಿಗೆ ಸೀಮಿತವಾಗಿಲ್ಲ, ಕೇರಳ ಮತ್ತು ಮಹಾರಾಷ್ಟ್ರದಲ್ಲೂ ಇದೇ ರೀತಿ ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಂಠಿತವಾಗಿರುವ ವರದಿ ಇದ್ದು, ಈ ಬಾರಿ ಮಾವಿಗೆ ಹೆಚ್ಚಿನ ಬೆಲೆ ಬರುವ ಸಾಧ್ಯತೆಗಳಿವೆ. ಮುಂಬೈ ವ್ಯಾಪಾರಿಗಳು ಮಾವು ಖರೀದಿಗಾಗಿ ಧಾರವಾಡಕ್ಕೆ ಆಗಮಿಸಲು ಪ್ರಾರಂಭಿಸಿದ್ದಾರೆ ಮತ್ತು ಆರ್ಡರ್‌ ನೀಡುತ್ತಿದ್ದಾರೆ. ಆದ್ದರಿಂದ ಬೆಳೆಗಾರರು ಬೆಲೆ ಕುಸಿತದ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಡಾ. ಪೋದ್ದಾರ ಹೇಳಿದರು.

56
100 ಬೆಳೆಗಾರರಿಂದ ನೋಂದಣಿ
Image Credit : gemini

100 ಬೆಳೆಗಾರರಿಂದ ನೋಂದಣಿ

ಹಿಂದಿನ ವ್ಯಾಪಾರಿಗಳು ಮಾವಿನ ಹಣ್ಣು ಖರೀದಿಸಿ ಮಧ್ಯಪ್ರಾಚ್ಯ ಸೇರಿದಂತೆ ಇತರ ದೇಶಗಳಿಗೆ ರಫ್ತು ನಿರ್ವಹಿಸುತ್ತಿದ್ದರು. ಈ ವರ್ಷ, ರಫ್ತು ಮಾರುಕಟ್ಟೆಗಳಿಗೆ ಉತ್ತಮ ಗುಣಮಟ್ಟದ ಹಣ್ಣು ಉತ್ಪಾದಿಸುವ ಕುರಿತು ತೋಟಗಾರಿಕೆ ಇಲಾಖೆ ಹಲವಾರು ತರಬೇತಿ ಕಾರ್ಯಕ್ರಮ ಮತ್ತು ಕಾರ್ಯಾಗಾರ ನಡೆಸಿತು. ಹೀಗಾಗಿ 100ಕ್ಕೂ ಹೆಚ್ಚು ಬೆಳೆಗಾರರು ನೇರ ರಫ್ತುಗಾಗಿ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

66
100ಕ್ಕೂ ಹೆಚ್ಚು ಬೆಳೆಗಾರರು ಇಲಾಖೆಯಲ್ಲಿ ನೋಂದಣಿ
Image Credit : Meta AI

100ಕ್ಕೂ ಹೆಚ್ಚು ಬೆಳೆಗಾರರು ಇಲಾಖೆಯಲ್ಲಿ ನೋಂದಣಿ

ಮಾವು ರಫ್ತಿಗಾಗಿ 100ಕ್ಕೂ ಹೆಚ್ಚು ಬೆಳೆಗಾರರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಬೇಕಾದ ತರಬೇತಿ ಸಹ ನೀಡಲಾಗಿದೆ. ಇರಾನ್‌ನಲ್ಲಿನ ಸಂಘರ್ಷ ಮತ್ತು ಅದು ಮಧ್ಯ ಪ್ರಾಚ್ಯಕ್ಕೆ ಹರಡಿರುವುದರಿಂದ ಈ ಋತುವಿನಲ್ಲಿ ಬೆಳೆಗಾರರಿಗೆ ಆ ದೇಶ ಹೊರತುಪಡಿಸಿ ಅಮೆರಿಕ ಮತ್ತು ಸಿಂಗಾಪುರಕ್ಕೆ ಮಾವಿನ ಹಣ್ಣು ರಫ್ತು ಮಾಡುವುದು ಸುರಕ್ಷಿತ ಆಯ್ಕೆ. ಅದು ಸಹ ಕಷ್ಟವಾದರೂ ಸ್ಥಳೀಯವಾಗಿಯೂ ಈ ಬಾರಿ ಮಾವಿಗೆ ಉತ್ತಮ ಬೆಲೆ ನಿರೀಕ್ಷೆ ಇದೆ.

ಕಾಶಿನಾಥ ಭದ್ರನ್ನವರ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಮಾವು
ಧಾರವಾಡ
ಇರಾನ್
ಕೊಲ್ಲಿ ಯುದ್ಧ
ವ್ಯವಹಾರ
Latest Videos
Recommended Stories
Recommended image1
ಕೊಡಗಿನ ಆತಂಕಕ್ಕೆ ತೆರೆ: ಹಲವರನ್ನ ಬಲಿ ಪಡೆದ ಕಾಡಿನ ಒಂಟಿ ಸಲಗ ಕೊನೆಗೂ ಸೆರೆ
Recommended image2
ಉಡುಪಿ ಅಬಕಾರಿ ಅಧಿಕಾರಿಗೆ ಲೋಕಾಯುಕ್ತ ಶಾಕ್: 15 ಕಡೆ ದಾಳಿ, ಕೋಟಿಗಟ್ಟಲೆ ಪತ್ತೆ, ಅಕ್ರಮ ಆಸ್ತಿ ಗುಟ್ಟು ರಟ್ಟು!
Recommended image3
ಗೋಕಾಕ- ಧಾರವಾಡ ರಸ್ತೆ ಚತುಷ್ಪಥವಾಗಿಸಿ: ಸಂಸದ ಜಗದೀಶ ಶೆಟ್ಟರ್ ಮನವಿ
Related Stories
Recommended image1
ವರ್ಷಪೂರ್ತಿ ಹಣ್ಣು ಬಿಡುವ ವಿದೇಶಿ ಮಾವು ಬೆಳೆದ ಬಿಸಿಲನಾಡು ವಿಜಯಪುರದ ಯುವ ರೈತ!
Recommended image2
ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್, ದೇವೇಗೌಡರ ಮನವಿಗೆ ಸಿಕ್ಕಿತು ಫಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved