MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಲಕ್ಕುಂಡಿ ನಿಧಿ ಸಿಕ್ಕ ಬೆನ್ನಲ್ಲೇ..., ಮುತ್ತು, ರತ್ನ, ಹವಳ, ನೀಲಮಣಿಗಳೂ ಪತ್ತೆ! ಬಡಿಗೇರ ಬಸಪ್ಪ ಫುಲ್ ಖುಷ್!

ಲಕ್ಕುಂಡಿ ನಿಧಿ ಸಿಕ್ಕ ಬೆನ್ನಲ್ಲೇ..., ಮುತ್ತು, ರತ್ನ, ಹವಳ, ನೀಲಮಣಿಗಳೂ ಪತ್ತೆ! ಬಡಿಗೇರ ಬಸಪ್ಪ ಫುಲ್ ಖುಷ್!

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಪ್ರಜ್ವಲ್ ರಿತ್ತಿ ನಿಧಿ ಹಸ್ತಾಂತರಿಸಿದ ಬೆನ್ನಲ್ಲೇ, ಬಸಪ್ಪ ಬಡಿಗೇರ ಎಂಬ ಹವ್ಯಾಸಿ ಪ್ರಾಚ್ಯವಸ್ತು ಸಂಗ್ರಹಕಾರರಿಗೆ ಮುತ್ತು, ಹವಳ, ನೀಲಮಣಿ ಹಾಗೂ ಅಪರೂಪದ ಕಪ್ಪು ಸ್ಪಟಿಕದಂತಹ ಪುರಾತನ ಮಣಿಗಳು ಸಿಕ್ಕಿವೆ.

2 Min read
Author : Sathish Kumar KH
Published : Jan 13 2026, 02:27 PM IST
Share this Photo Gallery
  • FB
  • TW
  • Linkdin
  • Whatsapp
15
ಮುತ್ತು, ಹವಳ, ನೀಲಮಣಿಗಳು ಪತ್ತೆ
Image Credit : Asianet News

ಮುತ್ತು, ಹವಳ, ನೀಲಮಣಿಗಳು ಪತ್ತೆ

ಗದಗ (ಜ.13): ಐತಿಹಾಸಿಕ ನಗರಿ ಲಕ್ಕುಂಡಿಯಲ್ಲಿ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸಿಕ್ಕಿದ 65 ಲಕ್ಷ ರೂ. ಮೌಲ್ಯದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಘಟನೆ ಮಾಸುವ ಮುನ್ನವೇ, ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿ ಬಸಪ್ಪ ಬಡಿಗೇರ ಅವರಿಗೆ ಮುತ್ತು, ಹವಳ, ನೀಲಮಣಿ ಹಾಗೂ ಸ್ಪಟಿಕ ಮಣಿಗಳು ಸಿಕ್ಕಿರುವುದು ಕಂಡುಬಂದಿದೆ.

25
ಲಕ್ಕುಂಡಿಯ ಮಣ್ಣಿನಲ್ಲಿ ಹುದುಗಿರುವ ಪುರಾತನ ವಸ್ತುಗಳು
Image Credit : Asianet News

ಲಕ್ಕುಂಡಿಯ ಮಣ್ಣಿನಲ್ಲಿ ಹುದುಗಿರುವ ಪುರಾತನ ವಸ್ತುಗಳು

ಹೌದು, ಈ ಬಸಪ್ಪ ಬಡಿಗೇರ ಅವರು ಲಕ್ಕುಂಡಿ ಗ್ರಾಮದ ಹವ್ಯಾಸಿ ವಿಶೇಷ ಮಣಿಗಳ ಸಂಗ್ರಹಕಾರ ಆಗಿದ್ದಾರೆ. ಪ್ರತಿಬಾರಿ ಮಳೆ ಬಂದಾಗಲೂ ಭೂಮಿಯ ಮೇಲ್ಪದರದ ಮಣ್ಣು ಸವೆದು ಹೋಗಿ, ಹೊರಗೆ ಬರುವ ವಿಶೇಷ ವಸ್ತುಗಳನ್ನು ಸಂಗ್ರಹಿಸುವ ಈ ಬಸಪ್ಪನವರ ಹವ್ಯಾಸ ಈಗ ಇಡೀ ಜಿಲ್ಲೆಯ ಗಮನ ಸೆಳೆದಿದೆ. ಕಳೆದ ನಾಲ್ಕು ದಶಕಗಳಿಂದ ಲಕ್ಕುಂಡಿಯ ಮಣ್ಣಿನಲ್ಲಿ ಹುದುಗಿರುವ ಪುರಾತನ ವಸ್ತುಗಳನ್ನು ಶೋಧಿಸಿ, ಅವುಗಳನ್ನು ಸಂರಕ್ಷಿಸುವ ಮೂಲಕ ಬಸಪ್ಪ ಅವರು 'ಆಧುನಿಕ ಪ್ರಾಚ್ಯವಸ್ತು ಅನ್ವೇಷಕ'ನಾಗಿ ಗುರುತಿಸಿಕೊಂಡಿದ್ದಾರೆ.

Related Articles

Related image1
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ರಿತ್ತಿ ಕುಟುಂಬಕ್ಕೆ ಶುಕ್ರದೆಸೆ ಆರಂಭ; ನಿಧಿ ಕಾಯುವ ಸರ್ಪದ ಭಯಪಟ್ಟಿದ್ದವರಿಗೆ ಲಕ್!
Related image2
ಲಕ್ಕುಂಡಿ: ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!
35
ಹೊಲ-ಗದ್ದೆ ಮತ್ತು ಹಳೆಯ ಕೆರೆ ಅಂಗಳದಲ್ಲಿ ಶೋಧ
Image Credit : Asianet News

ಹೊಲ-ಗದ್ದೆ ಮತ್ತು ಹಳೆಯ ಕೆರೆ ಅಂಗಳದಲ್ಲಿ ಶೋಧ

ಬಸಪ್ಪ ಬಡಿಗೇರ ಅವರಿಗೆ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸುವುದು ಕೇವಲ ಹವ್ಯಾಸವಲ್ಲ, ಅದು ಅವರ ಬದುಕಿನ ಅವಿಭಾಜ್ಯ ಅಂಗ. ಗ್ರಾಮದಲ್ಲಿ ಜೋರು ಮಳೆ ಬಂದು ಹೋದಾಗಲೆಲ್ಲಾ ಬಸಪ್ಪ ಅವರು ಹೊಲ-ಗದ್ದೆ ಮತ್ತು ಹಳೆಯ ಕೆರೆಗಳ ಆವರಣದಲ್ಲಿ ಶೋಧ ಕಾರ್ಯ ಆರಂಭಿಸುತ್ತಾರೆ. ಮಳೆಗೆ ಮಣ್ಣು ಕೊಚ್ಚಿ ಹೋದಾಗ ಮೇಲೆ ಕಾಣಿಸಿಕೊಳ್ಳುವ ಪುರಾತನ ವಸ್ತುಗಳನ್ನು ಅವರು ಅತ್ಯಂತ ಜಾಗರೂಕತೆಯಿಂದ ಸಂಗ್ರಹಿಸುತ್ತಾರೆ.

45
ಅಪರೂಪದ ಕರಿಪುಕ್ಕ
Image Credit : Asianet News

ಅಪರೂಪದ ಕರಿಪುಕ್ಕ

ಇವರ ಸಂಗ್ರಹದಲ್ಲಿ ಮುತ್ತು, ಹವಳ, ನೀಲಮಣಿ, ಸ್ಪಟಿಕ, ಬಿಳಿ ಹವಳ ಹಾಗೂ ಅಪರೂಪದ ಕರಿಪುಕ್ಕಾ ಸೇರಿದಂತೆ ಅನೇಕ ಪುರಾತನ ಮಣಿಗಳು ಮತ್ತು ಹರಳುಗಳಿವೆ. ಇತ್ತೀಚೆಗೆ ಅಂದರೆ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಬಸಪ್ಪ ಅವರಿಗೆ ಅತ್ಯಂತ ಅಪರೂಪದ 'ಕಪ್ಪು ಸ್ಪಟಿಕ' ದೊರೆತಿತ್ತು. ಈ ಹಿಂದೆಯೂ ತಮಗೆ ಸಿಕ್ಕಿದ್ದ ಅಮೂಲ್ಯ ಪ್ರಾಚ್ಯವಸ್ತುಗಳನ್ನು ಇವರು ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

55
ಪ್ರಾಚ್ಯಾವಶೇಷಗಳ ಅನ್ವೇಷಣೆ
Image Credit : Asianet News

ಪ್ರಾಚ್ಯಾವಶೇಷಗಳ ಅನ್ವೇಷಣೆ

ಬಸಪ್ಪ ಅವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ 2024ರಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಡೆದ 'ಪ್ರಾಚ್ಯಾವಶೇಷಗಳ ಅನ್ವೇಷಣೆ' ಕಾರ್ಯಕ್ರಮದಲ್ಲಿ ಇವರು ಸಂಗ್ರಹಿಸಿದ್ದ ವಸ್ತುಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಗಿತ್ತು. ಲಕ್ಕುಂಡಿಯ ಮಣ್ಣಿನ ಅಡಿಯಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಐತಿಹಾಸಿಕ ಕುರುಹುಗಳಿವೆ ಎಂಬ ನಂಬಿಕೆಗೆ ಬಸಪ್ಪ ಅವರಿಗೆ ಸಿಗುತ್ತಿರುವ ಈ ವಸ್ತುಗಳೇ ಸಾಕ್ಷಿಯಾಗಿವೆ.

ಯಾವುದೇ ಫಲಾಪೇಕ್ಷೆಯಿಲ್ಲದೆ, ಕೇವಲ ಇತಿಹಾಸದ ಮೇಲಿನ ಪ್ರೀತಿಯಿಂದ ಮಣ್ಣಿನಲ್ಲಿ ಅಡಗಿರುವ ಗತವೈಭವವನ್ನು ಹೊರತೆಗೆಯುತ್ತಿರುವ ಬಸಪ್ಪ ಬಡಿಗೇರ ಅವರ ಕಾರ್ಯಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬಂಗಾರದ ನಿಧಿ
ಗದಗ

Latest Videos
Recommended Stories
Recommended image1
ಲಕ್ಕುಂಡಿ: ಚೊಂಬಿನಲ್ಲಿ ತುಂಬಿದ್ದ ನಿಧಿಯನ್ನ ಗುಳುಂ ಮಾಡಿದ್ರಾ ಗ್ರಾ.ಪಂ. ಮೆಂಬರ್ ರಜಿಯಾ ಬೇಗಂ! ಸ್ಪೋಟಕ ಬಹಿರಂಗ!
Recommended image2
ಧಾರವಾಡ ಮಕ್ಕಳ ಕಳ್ಳನ ಕಥೆ ಕೇಳಿ ಪೊಲೀಸರೇ ಸುಸ್ತು! ಈ ಅಬ್ದುಲ್ ಕರೀಂ ಸಾಮಾನ್ಯದವನಲ್ಲ!
Recommended image3
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ರಿತ್ತಿ ಕುಟುಂಬಕ್ಕೆ ಶುಕ್ರದೆಸೆ ಆರಂಭ; ನಿಧಿ ಕಾಯುವ ಸರ್ಪದ ಭಯಪಟ್ಟಿದ್ದವರಿಗೆ ಲಕ್!
Related Stories
Recommended image1
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ರಿತ್ತಿ ಕುಟುಂಬಕ್ಕೆ ಶುಕ್ರದೆಸೆ ಆರಂಭ; ನಿಧಿ ಕಾಯುವ ಸರ್ಪದ ಭಯಪಟ್ಟಿದ್ದವರಿಗೆ ಲಕ್!
Recommended image2
ಲಕ್ಕುಂಡಿ: ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved