MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ತಹಶೀಲ್ದಾರ್‌ಗಿಂತ ದೊಡ್ಡವನಾದನಾ ಸಚಿವ ಶಿವರಾಜ ತಂಗಡಗಿ ಪುತ್ರ? ಅಧಿಕಾರಿಗಳು ಕುರ್ಚಿ ಇಲ್ಲದೆ ನಿಂತರೆ, ಮಗನಿಗೆ ರಾಜ ಮರ್ಯಾದೆ!

ತಹಶೀಲ್ದಾರ್‌ಗಿಂತ ದೊಡ್ಡವನಾದನಾ ಸಚಿವ ಶಿವರಾಜ ತಂಗಡಗಿ ಪುತ್ರ? ಅಧಿಕಾರಿಗಳು ಕುರ್ಚಿ ಇಲ್ಲದೆ ನಿಂತರೆ, ಮಗನಿಗೆ ರಾಜ ಮರ್ಯಾದೆ!

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ನಡೆದ ಉತ್ಸವದ ಪೂರ್ವಭಾವಿ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕಿರಣ್, ಜಿಲ್ಲಾಡಳಿತದ ಅಧಿಕೃತ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು ದರ್ಬಾರ್ ನಡೆಸಿದ್ದಾರೆ

1 Min read
Author : Ravi Janekal
Published : Apr 22 2026, 01:19 PM IST
Share this Photo Gallery
  • FB
  • TW
  • Linkdin
  • Whatsapp
14
ತಹಶೀಲ್ದಾರ್‌ಗಿಂತ ದೊಡ್ಡವನಾದನಾ ಸಚಿವ ಶಿವರಾಜ ತಂಗಡಗಿ ಪುತ್ರ?
Image Credit : Asianet News

ತಹಶೀಲ್ದಾರ್‌ಗಿಂತ ದೊಡ್ಡವನಾದನಾ ಸಚಿವ ಶಿವರಾಜ ತಂಗಡಗಿ ಪುತ್ರ?

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ನಡೆದ ಉತ್ಸವದ ಪೂರ್ವಭಾವಿ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕಿರಣ್, ಜಿಲ್ಲಾಡಳಿತದ ಅಧಿಕೃತ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು ದರ್ಬಾರ್ ನಡೆಸಿದ್ದಾರೆ. ಶಿಷ್ಟಾಚಾರದ ಪ್ರಕಾರ ಸಭೆ ನಡೆಸಬೇಕಿದ್ದ ಅಧಿಕಾರಿಗಳು ಮೂಲೆಗುಂಪಾಗಿದ್ದು, ಸಚಿವರ ಪುತ್ರನಿಗೆ ಸಿಕ್ಕ 'ವಿಶೇಷ ಮರ್ಯಾದೆ' ಈಗ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ.

24
ತಹಶೀಲ್ದಾರ್ ನಿಂತಿದ್ದರೂ ಚೇರ್ ಕೊಡದ ಜಿಲ್ಲಾಡಳಿತ
Image Credit : Asianet News

ತಹಶೀಲ್ದಾರ್ ನಿಂತಿದ್ದರೂ ಚೇರ್ ಕೊಡದ ಜಿಲ್ಲಾಡಳಿತ

ಆಘಾತಕಾರಿ ವಿಷಯವೆಂದರೆ, ಸಭೆಯಲ್ಲಿ ವೇದಿಕೆಯ ಮೇಲೆ ಕನಕಗಿರಿ ತಹಶೀಲ್ದಾರ್ ವಿಶ್ವನಾಥ್ ಮುರಡಿ ಮತ್ತು ತಾಲ್ಲೂಕು ಪಂಚಾಯತ್ ಇಓ ರಾಜಶೇಖರ್ ಅವರಿಗೆ ಕುಳಿತುಕೊಳ್ಳಲು ಕುರ್ಚಿಯೇ ಇರಲಿಲ್ಲ. ಕ್ಷೇತ್ರದ ಜವಾಬ್ದಾರಿಯುತ ಅಧಿಕಾರಿಗಳು ಸಭೆಯ ಉದ್ದಕ್ಕೂ ನಿಂತುಕೊಂಡೇ ಇದ್ದರೆ, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲದ ಸಚಿವರ ಪುತ್ರ ಶಶಿಕಿರಣ್ ಮಾತ್ರ ಕುರ್ಚಿಯ ಮೇಲೆ ರಾಜಾರೋಷವಾಗಿ ಕುಳಿತಿದ್ದರು

Related Articles

Related image1
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಪರ್ವ ಆರಂಭ: ಸಚಿವ ಶಿವರಾಜ ತಂಗಡಗಿ
Related image2
ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ರಕ್ಷಿಸಿ: ಸಚಿವ ಶಿವರಾಜ ತಂಗಡಗಿ
34
ಸಚಿವ ಶಿವರಾಜ ತಂಗಡಗಿ ಪುತ್ರನ ದರ್ಬಾರ್
Image Credit : Asianet News

ಸಚಿವ ಶಿವರಾಜ ತಂಗಡಗಿ ಪುತ್ರನ ದರ್ಬಾರ್

ಕನಿಷ್ಟ ಪಕ್ಷ ಪಕ್ಕದಲ್ಲಿ ನಿಂತ ಅಧಿಕಾರಿಗಳನ್ನ ನೋಡಿಯಾದ್ರೂ ಕುರ್ಚಿ ವ್ಯವಸ್ಥೆ ಮಾಡುವಂತೆ ಸಚಿವ ಶಿವರಾಜ ತಂಗಡಗಿಯೂ ಹೇಳಲಿಲ್ಲ. ಪುತ್ರನೂ ಹೇಳಲಿಲ್ಲ. ಜಿಲ್ಲಾಡಳಿತದ ಈ ನಡೆಯು ಅಧಿಕಾರಿಗಳ ಸ್ವಾಭಿಮಾನವನ್ನು ಸಚಿವರ ಪುತ್ರನ ಪಾದದ ಕೆಳಗೆ ಇಟ್ಟಂತಿದೆ ಟೀಕೆ ವ್ಯಕ್ತವಾಗಿದೆ..

44
ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಪುತ್ರನಿಗೇನು ಕೆಲಸ?
Image Credit : Asianet News

ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಪುತ್ರನಿಗೇನು ಕೆಲಸ?

ಸರಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಾತ್ರ ಸ್ಥಾನವಿರಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಜಿಲ್ಲಾಡಳಿತವೇ ಸಚಿವರ ಪುತ್ರನಿಗೆ ಕುರ್ಚಿ ಹಾಕಿ, ರಾಜ ಮರ್ಯಾದೆ ನೀಡಿದೆ. ಅತ್ತ ಜವಾಬ್ದಾರಿಯುತ ಅಧಿಕಾರಿಗಳನ್ನು ಸಭೆಯುದ್ದಕ್ಕೂ ನಿಲ್ಲಿಸಿ ಸಚಿವರ ಮಗನಿಗೆ ಆದ್ಯತೆ ನೀಡಿದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಪ್ರಜಾಪ್ರಭುತ್ವವೋ ಅಥವಾ ಸಚಿವರ ಕುಟುಂಬದ 'ಖಾಸಗಿ ದರ್ಬಾರ್'ವೋ ಎಂಬ ಪ್ರಶ್ನೆ ಎದ್ದಿದೆ.

ವಿಡಿಯೋ ವೈರಲ್

ಕನಕಗಿರಿ ಉತ್ಸವದ ಹೆಸರಿನಲ್ಲಿ ನಡೆಯುತ್ತಿರುವ ಈ 'ಪುತ್ರ ವ್ಯಾಮೋಹ'ದ ಸಭೆಯ ವಿಡಿಯೋಗಳು ಈಗ ವೈರಲ್ ಆಗುತ್ತಿದ್ದು, ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕೊಪ್ಪಳ
ಶಿವರಾಜ ತಂಗಡಗಿ
ವೈರಲ್ ವಿಡಿಯೋ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಚಿಕ್ಕಮಗಳೂರು: ಕಾಡಾನೆಗಳ ಬಳಿಕ ಕಾಡುಕೋಣಗಳ ಹಾವಳಿ: ಟೀ ಎಸ್ಟೇಟ್‌ನಲ್ಲಿ ದಾಂಧಲೆ: 1 ಕಾಟಿ ಸಾವು
Recommended image2
Mandya: 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದ ಭಕ್ತರು
Recommended image3
ಶೀಘ್ರದಲ್ಲಿ ರಾಜ್ಯ ಕಾಂಗ್ರೆಸ್​ ಇಬ್ಭಾಗ; ಬಿಜೆಪಿಯಿಂದ ಯೋಗಿ ಎಂಟ್ರಿ: ಪ್ರಶಾಂತ್​ ಕಿಣಿ ರೋಚಕ ಭವಿಷ್ಯವೇನು
Related Stories
Recommended image1
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಪರ್ವ ಆರಂಭ: ಸಚಿವ ಶಿವರಾಜ ತಂಗಡಗಿ
Recommended image2
ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ರಕ್ಷಿಸಿ: ಸಚಿವ ಶಿವರಾಜ ತಂಗಡಗಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved