ರಾಸಲೀಲೆ ಸಿಡಿ: ರಮೇಶ್ ಜಾರಕಿಹೊಳಿ ಬೆಂಬಲಿತ ಆಟೋ ಚಾಲಕರ ವಿನೂತನ ಅಭಿಯಾನ
ಬೆಳಗಾವಿ(ಮಾ.11): ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಬಹಿರಂಗವಾಗುತ್ತಿದ್ದಂತೆ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ಸ್ವಕ್ಷೇತ್ರ ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಸಿಡಿ ಪ್ರಕರಣವನ್ನ ಖಂಡಿಸಿ ವ್ಯಾಪಕ ಪ್ರತಿಭಟನೆಗಳನ್ನ ನಡೆಸಿದ್ದರು. ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ರಾಜಕೀಯ ಷಡ್ಯಂತರವಾಗಿದೆ ಅಂತ ರಾಜಕೀಯ ನಾಯಕರು, ಕಾಳಿಮಠದ ಋಷಿಕುಮಾರ್ ಸಾಮೀಜಿ ಸೇರಿದಂತೆ ಅನೇಕರು ಸಾಹುಕಾರ್ ಪರ ಬೆಂಬಲಕ್ಕೆ ನಿಂತಿದ್ದಾರೆ. ಅದೇ ರೀತಿ ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿತ ಆಟೋ ಚಾಲಕರ ವಿನೂತನ ಅಭಿಯಾನವನ್ನ ಆರಂಭಿಸಿದ್ದಾರೆ.
ರಮೇಶ್ ಜಾರಕಿಹೊಳಿ ಬೆಂಬಲಿತ ಆಟೋ ಚಾಲಕರ ವಿನೂತನ ಅಭಿಯಾನ
ಬೆಳಗಾವಿ ಜಿಲ್ಲೆ ಗೋಕಾಕ್ ನಗರದಲ್ಲಿ ಆಟೋ ಚಾಲಕರಿಂದ ವಿಭಿನ್ನ ಅಭಿಯಾನ ಅರಂಭ
ಆಟೋಗಳ ಹಿಂದೆ ರಮೇಶ್ ಭಾವಚಿತ್ರದ ಫ್ಲೆಕ್ಸ್ ಅಂಟಿಸಿರುವ ಚಾಲಕರು
'ನಿಮ್ಮೊಂದಿಗೆ ನಾವು, ಹಮ್ ತುಮಾರೇ ಸಾಥ್ ಹೈ' ಎಂಬ ಬರಹದ ಫ್ಲೆಕ್ಸ್
ಪೋಸ್ಟರ್ ಅಂಟಿಸಿರುವ ಗೋಕಾಕ ನಗರದ ಬಹುತೇಕ ಆಟೋ ಚಾಲಕರು
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತ ಕಾಳಿಮಠದ ಋಷಿಕುಮಾರ್ ಸಾಮೀಜಿ