MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ 7 ಹೆಡೆಯ ಘಟಸರ್ಪ ಶಿಲೆ ಪತ್ತೆ; ಹಾವಿನ ತಲೆ ಮೇಲಿದೆ ವಿಶೇಷ ನಾಗಮಣಿ!

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ 7 ಹೆಡೆಯ ಘಟಸರ್ಪ ಶಿಲೆ ಪತ್ತೆ; ಹಾವಿನ ತಲೆ ಮೇಲಿದೆ ವಿಶೇಷ ನಾಗಮಣಿ!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 7 ಹೆಡೆ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಕೆತ್ತನೆಯಿರುವ ನೂರಾರು ವರ್ಷಗಳಷ್ಟು ಹಳೆಯದಾದ ನಾಗಶಿಲೆ ಪತ್ತೆಯಾಗಿದೆ. ತಲೆಮಾರುಗಳಿಂದ ಪೂಜಿಸಲ್ಪಡುತ್ತಿರುವ ಈ ಶಿಲೆಯ ಐತಿಹಾಸಿಕ ರಹಸ್ಯವನ್ನು ತಿಳಿಯಲು ಪುರಾತತ್ವ ಇಲಾಖೆಯ ಸಂಶೋಧನೆಗಾಗಿ ಕಾಯಲಾಗುತ್ತಿದೆ.

2 Min read
Author : Sathish Kumar KH
Published : Jan 24 2026, 01:36 PM IST
Share this Photo Gallery
  • FB
  • TW
  • Linkdin
  • Whatsapp
16
ಲಕ್ಕುಂಡಿಯಲ್ಲಿ ನಿಧಿ ಕಾಯುವ ಘಟ ಸರ್ಪ
Image Credit : Asianet News

ಲಕ್ಕುಂಡಿಯಲ್ಲಿ ನಿಧಿ ಕಾಯುವ ಘಟ ಸರ್ಪ

ಗದಗ (ಜ.24): ಐತಿಹಾಸಿಕ ದೇವಾಲಯಗಳ ತವರೂರು, ಶಿಲ್ಪಕಲೆಯ ಕಾಶಿ ಎಂದೇ ಪ್ರಖ್ಯಾತವಾಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮತ್ತೊಂದು ಅಪರೂಪದ ಇತಿಹಾಸದ ಕುರುಹು ಪತ್ತೆಯಾಗಿದೆ. ಇಲ್ಲಿನ ರವದಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ, ಏಳು ಹೆಡೆಗಳನ್ನು ಹೊಂದಿರುವ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಅಮೂಲ್ಯ ಕೆತ್ತನೆಯಿರುವ ನಾಗಶಿಲೆ ಪತ್ತೆಯಾಗಿರುವುದು ಈಗ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

26
ಏನಿದು ಅಪರೂಪದ ನಾಗಶಿಲೆ?
Image Credit : Asianet News

ಏನಿದು ಅಪರೂಪದ ನಾಗಶಿಲೆ?

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ರವದಿ ಕುಟುಂಬದ ಜಮೀನಿನ ಬಾವಿಯ ಪಕ್ಕದಲ್ಲಿ ಈ ಅಪರೂಪದ ಶಿಲೆ ಕಾಲಕಾಲದಿಂದಲೂ ಇದೆ. ಈ ಶಿಲೆಯಲ್ಲಿ ಹಾವಿನ ಏಳು ಹೆಡೆಗಳನ್ನು ಅತ್ಯಂತ ನೈಪುಣ್ಯತೆಯಿಂದ ಕೆತ್ತಲಾಗಿದ್ದು, ಉಬ್ಬು ಚಿತ್ರದ ಮಾದರಿಯಲ್ಲಿದೆ. ವಿಶೇಷವೆಂದರೆ, ಹಾವಿನ ಹಣೆಯ ಭಾಗದಲ್ಲಿ ವಜ್ರ ಅಥವಾ ನಾಗಮಣಿಯ ಆಕಾರದ ಕೆತ್ತನೆಯಿದೆ. ಇದನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

Related Articles

Related image1
ಲಕ್ಕುಂಡಿ ಉತ್ಖನನ ಕೆಲಸಕ್ಕೆ ಅಡ್ಡಪಡಿಸಿದ ಕಾರ್ಮಿಕ ಮುಖಂಡ ಅಶ್ವಥ್: ಸ್ಥಳೀಯರ ತರಾಟೆ, ಎತ್ತಾಕೊಂಡೋದ ಪೊಲೀಸರು!
Related image2
7 ತಲೆ ಘಟಸರ್ಪ, ನಿಧಿ ರಹಸ್ಯ! ಲಕ್ಕುಂಡಿ ನಿಧಿಗೆ ಕಾವಲು ಕಾಯ್ತಿದ್ಯಾ ಘಟಸರ್ಪ? ಏನಿದು ರಹಸ್ಯ?
36
ಹಿರಿಯರ ಕಾಲದ ಐತಿಹ್ಯ
Image Credit : Asianet News

ಹಿರಿಯರ ಕಾಲದ ಐತಿಹ್ಯ

ಈ ಜಮೀನಿನ ಮಾಲೀಕರಾದ ಗಿರಿಜವ್ವ ರವದಿ ಅವರು 'ಏಷ್ಯಾನೆಟ್ ಸುವರ್ಣ ನ್ಯೂಸ್' ಜೊತೆಗೆ ಮಾತನಾಡುತ್ತಾ ತಮ್ಮ ಹಿರಿಯರು ಹೇಳುತ್ತಿದ್ದ ಕಥೆಗಳನ್ನು ಹಂಚಿಕೊಂಡಿದ್ದಾರೆ. 'ನಮ್ಮ ಜಮೀನಿನಲ್ಲಿ ಹಿಂದಿನ ಕಾಲದಲ್ಲಿ ದಿವ್ಯ ಸರ್ಪಗಳು ಓಡಾಡುತ್ತಿದ್ದವು ಎಂದು ಹಿರಿಯರು ಹೇಳುತ್ತಿದ್ದರು. ಹಣೆಯ ಮೇಲೆ ಹೊಳೆಯುವ ವಜ್ರದಂತಹ ಮಣಿಯನ್ನು ಇಟ್ಟುಕೊಂಡು ಹಾವುಗಳು ಇಲ್ಲಿ ಸಂಚರಿಸುತ್ತಿದ್ದವಂತೆ. ಈ ಶಿಲೆಯನ್ನು ನಮ್ಮ ಕುಟುಂಬ ತಲೆತಲಾಂತರದಿಂದ ಪೂಜಿಸಿಕೊಂಡು ಬರುತ್ತಿದೆ' ಎಂದು ಅವರು ತಿಳಿಸಿದ್ದಾರೆ.

46
ವಿಜಯನಗರ ಕಾಲದ ಕಲೆ
Image Credit : Asianet News

ವಿಜಯನಗರ ಕಾಲದ ಕಲೆ

ಇತಿಹಾಸ ತಜ್ಞರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಶಿಲೆಯು ವಿಜಯನಗರ ಸಾಮ್ರಾಜ್ಯದ ಕಾಲದ ಕೆತ್ತನೆಯ ಶೈಲಿಯನ್ನು ಹೋಲುತ್ತದೆ. 12ನೇ ಶತಮಾನದ ಶಾಸನಗಳು ಮತ್ತು ಶಿಲ್ಪಕಲೆಗಳಿಗೆ ಲಕ್ಕುಂಡಿ ಪ್ರಸಿದ್ಧವಾಗಿದ್ದು, ಇಲ್ಲಿನ ಬಾವಿಗಳು ಮತ್ತು ದೇವಾಲಯಗಳ ಆವರಣದಲ್ಲಿ ಇಂತಹ ಅನೇಕ ರಹಸ್ಯಗಳು ಅಡಗಿವೆ. ಈ ನಾಗಶಿಲೆಯು ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ಅಂದಿನ ಕಾಲದ ಶಿಲ್ಪಿಗಳ ಅದ್ಭುತ ಕಲಾಕೌಶಲಕ್ಕೆ ಸಾಕ್ಷಿಯಾಗಿದೆ.

56
ಪುರಾತತ್ವ ಇಲಾಖೆಯ ಗಮನಕ್ಕೆ
Image Credit : Asianet News

ಪುರಾತತ್ವ ಇಲಾಖೆಯ ಗಮನಕ್ಕೆ

ಲಕ್ಕುಂಡಿಯ ಬಾವಿಗಳ ಇತಿಹಾಸವನ್ನು ಕೆದಕಿದಾಗ, ಹನ್ನೆರಡನೇ ಶತಮಾನದ ಅನೇಕ ಕಲ್ಲುಗಳು ಮತ್ತು ವಿಗ್ರಹಗಳು ಭೂಮಿಯ ಅಡಿಯಲ್ಲಿ ಪತ್ತೆಯಾದ ಉದಾಹರಣೆಗಳಿವೆ.

66
ಏಳು ಹೆಡೆಯ ನಾಗಶಿಲೆಯು
Image Credit : Asianet News

ಏಳು ಹೆಡೆಯ ನಾಗಶಿಲೆಯು

ಸದ್ಯ ಈ ಏಳು ಹೆಡೆಯ ನಾಗಶಿಲೆಯು ಇತಿಹಾಸ ಪ್ರೇಮಿಗಳ ಗಮನ ಸೆಳೆದಿದ್ದು, ಪುರಾತತ್ವ ಇಲಾಖೆಯು ಈ ಬಗ್ಗೆ ಸಂಶೋಧನೆ ನಡೆಸಬೇಕಿದೆ. ಈ ಶಿಲೆಯು ಇತಿಹಾಸದ ಯಾವ ಘಟ್ಟಕ್ಕೆ ಸೇರಿದ್ದು ಮತ್ತು ನಾಗಮಣಿಯ ಕೆತ್ತನೆಯ ಹಿಂದಿನ ರಹಸ್ಯವೇನು ಎಂಬುದು ಅಧಿಕೃತ ತಪಾಸಣೆಯ ನಂತರ ತಿಳಿಯಬೇಕಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಗದಗ
ಲಕ್ಕುಂಡಿ
ಹಾವು

Latest Videos
Recommended Stories
Recommended image1
ಕೆಲಸಕ್ಕೆ ರಜೆ ಹಾಕಿದ ಯುವತಿಗೆ ರೋಡಲ್ಲೇ ಬಟ್ಟೆ ಬಿಚ್ಚಿ ಹೊಡಿತೀನೆಂದ ಮಾಲೀಕ; ಆರೋಪಿ ಸೈಯದ್ ಪೊಲೀಸರ ವಶ!
Recommended image2
Vijayapura: 48 ಕೇಸ್‌ಗಳ 14 ಆರೋಪಿಗಳ ಬಂಧನ; ₹1.17 ಕೋಟಿ ಮೌಲ್ಯದ ಬಂಗಾರ, ನಗದು, ಕಾರು, ಬೈಕ್‌ ವಶ
Recommended image3
ಪ್ರಾಮಾಣಿಕ ಫಾರ್ಮಾಸಿಸ್ಟ್ ಜೀವ ತೆಗೆದ ವಿಡಿಯೋ; ಅವಧಿ ಮುಗಿದ ಔಷಧಿ ಕೊಟ್ಟರೆಂದು ವಿಡಿಯೋ ಹರಿಬಿಟ್ಟ ಮೂವರು ಅರೆಸ್ಟ್!
Related Stories
Recommended image1
ಲಕ್ಕುಂಡಿ ಉತ್ಖನನ ಕೆಲಸಕ್ಕೆ ಅಡ್ಡಪಡಿಸಿದ ಕಾರ್ಮಿಕ ಮುಖಂಡ ಅಶ್ವಥ್: ಸ್ಥಳೀಯರ ತರಾಟೆ, ಎತ್ತಾಕೊಂಡೋದ ಪೊಲೀಸರು!
Recommended image2
7 ತಲೆ ಘಟಸರ್ಪ, ನಿಧಿ ರಹಸ್ಯ! ಲಕ್ಕುಂಡಿ ನಿಧಿಗೆ ಕಾವಲು ಕಾಯ್ತಿದ್ಯಾ ಘಟಸರ್ಪ? ಏನಿದು ರಹಸ್ಯ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved