ಆಹಾರ ಕಿಟ್ ವಿತರಿಸಿದ ಶಾಸಕ ಆರ್ ಮಂಜುನಾಥ್
ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 1100 ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರಿಗೆ ಆಹಾರ ಕಿಟ್ ಸಾಮಗ್ರಿಗಳನ್ನು ವಿತರಿಸಿದರು.
ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 1100 ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರಿಗೆ ಆಹಾರ ಕಿಟ್ ಸಾಮಗ್ರಿಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಕೋವಿಡ್ ಸಂದರ್ಭದಲ್ಲಿ ಲಾಕ್ ಡೌನ್ ಮಾಡಿದ ಕಾರಣ ಹಲವು ಕುಟುಂಬಗಳು ಜೀವನ ನಿರ್ವಹಣೆ ಮಾಡುವುದು ದುಸ್ತರವಾಗಿತ್ತು.
ನಾವು ಕೊಡುವುದು ಶಾಶ್ವತವಲ್ಲ ನಿಮ್ಮ ಪ್ರಾಮಾಣಿಕ ದುಡಿಮೆಯ ಶಾಶ್ವತ. ಬಡವರಿಗಾಗಿ ಇರುವ ಸರ್ಕಾರದ ಯೋಜನೆಗಳನ್ನ, ಸಮರ್ಪಕವಾಗಿ ತಲುಪಿಸುವುದು ನನ್ನ ಮೊದಲ ಆದ್ಯತೆ.
ಕ್ಷೇತ್ರಕ್ಕೆ ಅನುದಾನದ ಕೊರತೆ ಇರಬಹುದು ಆದರೆ ಕೆಲಸ ಮಾಡುವ ಹುಮ್ಮಸ್ಸು ಕುಗ್ಗಿಲ್ಲ, ಕರೋನ ಲಸಿಕೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ, ಕಳೆದ 2 ದಿನಗಳಿಂದ ವ್ಯಾಕ್ಸಿನೇಷನ್ ಇರಲಿಲ್ಲ.
ನಾಳೆಯೂ ಲಸಿಕೆ ಆರೋಗ್ಯ ಕೇಂದ್ರಲ್ಲಿ ಇರದ ಕಾರಣ,ಜನರಿಗೆ ಆಗುತ್ತಿರುವ ಅನಾನುಕೂಲವನ್ನ ಸರ್ಕಾರದ ಗಮನಕ್ಕೆ ತರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷರಾದ ಮುನಿಸ್ವಾಮಣ್ಣ, ಕೆ ಸಿ ವೆಂಕಟೇಶ್,ಚರಣ್ ಗೌಡ, ಎಚ್ ಎನ್ ಗಂಗಾಧರ್,ವಾರ್ಡ್ ಅಧ್ಯಕ್ಷರುಗಳಾದ ತಮ್ಮಣ್ಣ,ಎಚ್ ಎಸ್ ಪ್ರಕಾಶ್, ಸಿ ಜೆ ರಮೇಶ್, ರುದ್ರೇಗೌಡ,ವರದರಾಜು, ಹನುಮಂತರಾಜು, ಗೋಪಾಲ್,ಗೋವಿಂದಪ್ಪ, ಪುಟ್ಟಸ್ವಾಮಿ, ಜಯಣ್ಣ,ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು