MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Karnataka Districts
  • ಶೃಂಗೇರಿ ಅಂಚೆ ಮತ ಮರುಎಣಿಕೆ: ಬಿಜೆಪಿ ಏಜೆಂಟರಿಂದಲೇ ಹೊಸ ಟ್ವಿಸ್ಟ್

ಶೃಂಗೇರಿ ಅಂಚೆ ಮತ ಮರುಎಣಿಕೆ: ಬಿಜೆಪಿ ಏಜೆಂಟರಿಂದಲೇ ಹೊಸ ಟ್ವಿಸ್ಟ್

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕರಣವು ಹೊಸ ತಿರುವು ಪಡೆದಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಏಜೆಂಟ್‌ಗಳೇ ಈಗ ಮರುಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂದು ಮಾನ್ಯವಾಗಿದ್ದ ಮತ ಈಗ ಅಮಾನ್ಯಗೊಂಡಿರುವುದರ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

2 Min read
Author : Sathish Kumar KH
Published : May 11 2026, 02:00 PM IST
Share this Photo Gallery
  • FB
  • TW
  • Linkdin
  • Whatsapp
16
ಶೃಂಗೇರಿ ಅಂಚೆ ಮತ ಪ್ರಕರಣದಲ್ಲಿ ಮತ್ತೆ ಟ್ವಿಸ್ಟ್
Image Credit : Asianet News

ಶೃಂಗೇರಿ ಅಂಚೆ ಮತ ಪ್ರಕರಣದಲ್ಲಿ ಮತ್ತೆ ಟ್ವಿಸ್ಟ್

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರುಎಣಿಕೆ ಪ್ರಕ್ರಿಯೆಯು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಈ ಪ್ರಕರಣಕ್ಕೆ ಹೊಸದೊಂದು 'ಟ್ವಿಸ್ಟ್' ಸಿಕ್ಕಿದೆ. 2023ರ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದ ಚುನಾವಣಾ ಏಜೆಂಟ್‌ಗಳೇ ಈಗ ಮರುಎಣಿಕೆ ಪ್ರಕ್ರಿಯೆಯ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಂದು ಪಾರದರ್ಶಕ, ಇಂದು ಅನುಮಾನಸ್ಪದ!
Image Credit : Asianet News

ಅಂದು ಪಾರದರ್ಶಕ, ಇಂದು ಅನುಮಾನಸ್ಪದ!

ಬಿಜೆಪಿ ಪಕ್ಷದ ಅಂದಿನ ಚುನಾವಣಾ ಏಜೆಂಟ್ ಹಾಗೂ ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಎಸ್. ಸತೀಶ್ ಅವರು ಬಹಿರಂಗ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಅಚ್ಚರಿಯ ಸಂಗತಿಗಳನ್ನು ಹೊರಹಾಕಿದ್ದಾರೆ. '2023ರಲ್ಲಿ ನಡೆದ ಎಣಿಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿತ್ತು. ನಾವು ದಾಖಲಿಸಿಕೊಂಡ ಸಂಖ್ಯೆ ಮತ್ತು ಅಧಿಕಾರಿಗಳು ಎಣಿಕೆ ಮಾಡಿದ ಸಂಖ್ಯೆ ಎರಡೂ ಒಂದೇ ಆಗಿತ್ತು. ಎಲ್ಲಾ ಏಜೆಂಟ್‌ಗಳ ಸಹಿ ಪಡೆದ ನಂತರವೇ ಅಂದು ಫಲಿತಾಂಶ ಘೋಷಣೆಯಾಗಿತ್ತು' ಎಂದು ಸ್ಪಷ್ಟಪಡಿಸಿದ್ದಾರೆ.

Related Articles

Related image1
ಶೃಂಗೇರಿ ಕ್ಷೇತ್ರದಲ್ಲಿ ಅಂಚೆ‌ ಮತ ಮರು ಎಣಿಕೆ ವಿವಾದ: ಆಣೆ-ಪ್ರಮಾಣ-ಪ್ರಾರ್ಥನೆ ರಾಜಕೀಯ ಶುರು
Related image2
ಶೃಂಗೇರಿ ಕ್ಷೇತ್ರದ ಮತ ಮರು ಎಣಿಕೆ, 2023ರಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಈಗ ಗೆಲುವು
36
ಅಂಕಿ-ಅಂಶಗಳ ವ್ಯತ್ಯಾಸವೇ ಸಂಶಯದ ಮೂಲ
Image Credit : Asianet News

ಅಂಕಿ-ಅಂಶಗಳ ವ್ಯತ್ಯಾಸವೇ ಸಂಶಯದ ಮೂಲ

2023ರ ಫಲಿತಾಂಶದ ಪ್ರಕಾರ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ 689 ಅಂಚೆ ಮತಗಳು ಲಭಿಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 562 ಮತಗಳು ಬಂದಿದ್ದವು ಮತ್ತು 279 ಮತಗಳು ಅಂದೇ ತಿರಸ್ಕೃತಗೊಂಡಿದ್ದವು. ಆದರೆ, 2026ರ ಮರುಎಣಿಕೆಯಲ್ಲಿ 257 ಮತಗಳು ಅಮಾನ್ಯಗೊಂಡಿವೆ.

46
ಅಂದು ಮಾನ್ಯವಾಗಿದ್ದ ಮತ ಈಗ ಅಮಾನ್ಯ
Image Credit : Asianet News

ಅಂದು ಮಾನ್ಯವಾಗಿದ್ದ ಮತ ಈಗ ಅಮಾನ್ಯ

ಇದರಲ್ಲಿ ಗಮನಾರ್ಹ ಅಂಶವೆಂದರೆ, ರದ್ದಾದ 257 ಮತಗಳಲ್ಲಿ 255 ಮತಗಳು ಕಾಂಗ್ರೆಸ್ ಅಭ್ಯರ್ಥಿಯದ್ದೇ ಆಗಿದೆ! 'ಅಂದು ಮಾನ್ಯವಾಗಿದ್ದ ಮತಗಳು ಈಗ ಅಮಾನ್ಯವಾಗಿದ್ದು ಹೇಗೆ?' ಎನ್ನುವುದು ಬಿಜೆಪಿ ಏಜೆಂಟ್‌ಗಳನ್ನೇ ಕಾಡುತ್ತಿರುವ ಯಕ್ಷಪ್ರಶ್ನೆ.

56
ಆಮಿಷದ ಆರೋಪಕ್ಕೆ ದೇವರ ಸನ್ನಿಧಿಯಲ್ಲಿ ಉತ್ತರ
Image Credit : Asianet News

ಆಮಿಷದ ಆರೋಪಕ್ಕೆ ದೇವರ ಸನ್ನಿಧಿಯಲ್ಲಿ ಉತ್ತರ

ಮರುಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಏಜೆಂಟ್‌ಗಳು ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ ಅಥವಾ ಆಮಿಷಕ್ಕೆ ಒಳಗಾಗಿದ್ದಾರೆ ಎಂಬ ಸುಳ್ಳು ಅಪಪ್ರಚಾರ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಸತೀಶ್ ಮತ್ತು ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತಾವು ನಿರಪರಾಧಿಗಳು ಮತ್ತು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಎಂದು ತೋರಿಸಲು ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ್ದಾರೆ.

66
ಸಮಗ್ರ ತನಿಖೆಗೆ ಆಗ್ರಹ
Image Credit : Asianet News

ಸಮಗ್ರ ತನಿಖೆಗೆ ಆಗ್ರಹ

'ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ. ಈ ಇಡೀ ಮರುಎಣಿಕೆ ಪ್ರಕ್ರಿಯೆಯಲ್ಲಿ ಏನೋ ನಡೆದಿದೆ ಎಂಬ ಸಂಶಯ ನಮಗೂ ಇದೆ' ಎಂದು ಹೇಳಿರುವ ಸತೀಶ್, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮರುಎಣಿಕೆಯ ನಂತರ ಜೀವರಾಜ್ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ, ಅಂದಿನ ಬಿಜೆಪಿ ಏಜೆಂಟ್‌ಗಳ ಈ ಹೇಳಿಕೆಗಳು ಪ್ರಕರಣಕ್ಕೆ ತಿರುವು ನೀಡಿವೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಚಿಕ್ಕಮಗಳೂರು
ಕರ್ನಾಟಕ ರಾಜಕೀಯ
ರಾಜಕೀಯ ಸುದ್ದಿ

Latest Videos
Recommended Stories
Recommended image1
ಕೆಪಿಎಸ್‌ಸಿ ಹಗರಣ: ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!
Recommended image2
Bengaluru: 'ಕರೆದಾಗ ಎಲ್ಲಾ ರೂಮಿಗೆ ಬರ್ಬೇಕು', ಕ್ಲಾಸ್‌ಮೆಟ್ ಕಿರುಕುಳಕ್ಕೆ ನೊಂದು ಕೆರೆಗೆ ಹಾರಿದ ಯುವತಿ
Recommended image3
ಗಿಡ್ಡ, ದಪ್ಪ, ಕಪ್ಪು ಶರ್ಟ್; ಕಾಫಿ ಬಿಲ್‌ನಲ್ಲಿ ಬಾಡಿ ಶೇಮಿಂಗ್ ನೋಡಿ ಬೆಂಗಳೂರು ಯುವಕ ಶಾಕ್, ಕೆಫೆಯಿಂದ ಕ್ಷಮೆ
Related Stories
Recommended image1
ಶೃಂಗೇರಿ ಕ್ಷೇತ್ರದಲ್ಲಿ ಅಂಚೆ‌ ಮತ ಮರು ಎಣಿಕೆ ವಿವಾದ: ಆಣೆ-ಪ್ರಮಾಣ-ಪ್ರಾರ್ಥನೆ ರಾಜಕೀಯ ಶುರು
Recommended image2
ಶೃಂಗೇರಿ ಕ್ಷೇತ್ರದ ಮತ ಮರು ಎಣಿಕೆ, 2023ರಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಈಗ ಗೆಲುವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved