MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಭರ್ಜರಿ ಮಳೆ ಸುರಿದಿದ್ದಾಯ್ತು, ಈಗ ಕುಡಿಯುವ ನೀರಲ್ಲಿ ಬ್ಯಾಕ್ಟೀಯಾ ಪತ್ತೆ; ಕಲುಷಿತ ನೀರಿನ ಸಮಸ್ಯೆಗೆ ನಲುಗಿದ ಕೊಪ್ಪ!

ಭರ್ಜರಿ ಮಳೆ ಸುರಿದಿದ್ದಾಯ್ತು, ಈಗ ಕುಡಿಯುವ ನೀರಲ್ಲಿ ಬ್ಯಾಕ್ಟೀಯಾ ಪತ್ತೆ; ಕಲುಷಿತ ನೀರಿನ ಸಮಸ್ಯೆಗೆ ನಲುಗಿದ ಕೊಪ್ಪ!

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಕುಡಿಯುವ ನೀರು ಕಲುಷಿತಗೊಂಡಿದ್ದು, ಜನರ ಆರೋಗ್ಯದಲ್ಲಿ ಆತಂಕ ಮೂಡಿದೆ. ಆರೋಗ್ಯ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಚರಂಡಿ ನೀರು ಕೆರೆಗೆ ಸೇರುತ್ತಿರುವುದೇ ಕಾರಣ ಎನ್ನಲಾಗಿದೆ. ಸ್ಥಳೀಯರು ಪಟ್ಟಣ ಪಂಚಾಯಿತಿ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 Min read
Sathish Kumar KH
Published : May 20 2025, 10:16 AM IST| Updated : May 20 2025, 11:18 AM IST
Share this Photo Gallery
  • FB
  • TW
  • Linkdin
  • Whatsapp
15

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ 20):
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದ ಜನರು ಕುಡಿಯುವ ನೀರೇ ಇದೀಗ ವಿಷವಾಗಿ ಪರಿವರ್ತನೆ ಆಗುತ್ತಿದೆ. ಕುಡಿಯುವ ನೀರಲ್ಲಿ ಬ್ಯಾಕ್ಟೀರಿಯಾ ಪತ್ತೆ ಆಗಿದ್ದರೂ ಪಟ್ಟಣ ಪಂಚಾಯಿತಿಯಿಂದ ಜನರಿಗೆ ಅದೇ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕಲುಷಿತ ನೀರು ಸೇವನೆ ಮಾಡಿ ಜನರು ಆರೋಗ್ಯದ ಸಮಸ್ಯೆ ತುತ್ತಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು  ಇತ್ತ ತಿರುಗಿ ನೋಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. 

25

ಆರೋಗ್ಯ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಪತ್ತೆಯಾದ ಬ್ಯಾಕ್ಟೀರಿಯಾ: 
ಜಿಲ್ಲೆಯ ಕೊಪ್ಪ ತಾಲೂಕ್  ಶುದ್ಧ ವಾತಾವರಣ ಹೊಂದಿರುವ ಮಲೆನಾಡಿನ ಪರಿಸರ ಈಗ ಕಲುಷಿತಗೊಂಡಿದೆ. ಹಳ್ಳಿಗಳಲ್ಲಿ ಶುದ್ಧವಾದ ವಾತಾವರಣವೇ ಇದೆ. ಆದರೆ ಪಟ್ಟಣಗಳಲ್ಲಿ ಎಲ್ಲವೂ ಮಲಿನವಾಗುತ್ತಿದೆ. ನೀರು ಕುಡಿಯಲಾರದಷ್ಟು ಹದಗೆಡುತ್ತಿದೆ. ಕೊಪ್ಪದ ಜನರು ದಿನನಿತ್ಯ ಕುಡಿಯುವ ನೀರಿನಲ್ಲಿ ಜೀವಕ್ಕೆ ಹಾನಿಕಾರಕವಾಗುತ್ತಿದೆ. ಕೊಪ್ಪ ಪಟ್ಟಣಕ್ಕೆ ನೀರು ಪೂರೈಕೆ ಆಗುವ ಹುಚ್ಚಾರಾಯರ ಕೆರೆ ಇದೀಗ ಕಲುಷಿತಗೊಂಡಿದೆ. 4,000ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವೇ ಹುಚ್ಚಾರಾಯರ ಕೆರೆ ಆಗಿದೆ. 

Related Articles

Related image1
Breaking News: ಚಿಕ್ಕಮಗಳೂರು ಕೆಡಿಪಿ ಸಭೆಯಲ್ಲಿ ಸಚಿವ ಜಾರ್ಜ್‌ರಿಂದ ಪತ್ರಕರ್ತರಿಗೆ ಅವಮಾನ!
Related image2
Chikkamagaluru: ದತ್ತಪೀಠ ವಿವಾದ, ಜಿಲ್ಲಾಡಳಿತದ ವಿರುದ್ಧ ಹಿಂದೂ ಕಾರ್ಯಕರ್ತರು ಕೆಂಡ
35

ಆದರೆ, ಇದೀಗ ಹುಚ್ಚರಾಯರ ಕೆರೆ ನೀರಿನಲ್ಲಿ ದುರ್ವಾಸನೆ  ಜೊತೆಗೆ ಕಲುಷಿತಗೊಳ್ಳುತ್ತಿದೆ ಎಂದು ಹಲವರ ಅಭಿಪ್ರಾಯದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷೆ ನಡೆಸಲು ಮುಂದಾಯಿತು. ಈ ವೇಳೆ ನೀರಲ್ಲಿ ಜೀವಕ್ಕೆ ಹಾನಿ ಮಾಡಬಲ್ಲ ಬ್ಯಾಕ್ಲೀರಿಯಾ ಇರುವುದು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ, ಇಲಾಖೆ ದೃಢಪಡಿಸಿದೆ. ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ವರದಿಯಿಂದ ಕೊಪ್ಪ ಜನತೆಗೆ ಶಾಕ್ ನೀಡಿದಂತಾಗಿದೆ.

45

ಕೆರೆಗೆ ಸೇರ್ಪಡೆ ಆಗುತ್ತಿರುವ ಚರಂಡಿ, ಕೊಳಚೆ ನೀರು:
ಕಳೆದ ವರ್ಷ ಬೇಸಿಗೆಯಲ್ಲಿ ಮಳೆ ಬಾರದ ಕಾರಣ ಏಪ್ರಿಲ್, ಮೇನಲ್ಲಿ ತುಂಗಾ ನದಿಯ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಬಾರಿ ಮಳೆಯಾಗುತ್ತಿರುವ ಕಾರಣ ಕೆರೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಕೆರೆಯ ನೀರು ತಳಮಟ್ಟಕ್ಕೆ ಹೋಗಿದೆ ಹಾಗೂ ಮಳೆಯಾದ ಕಾರಣ ಪಕ್ಕದ ಪ್ರದೇಶ, ಚರಂಡಿ ಇತರ ಭಾಗದಿಂದ ಕೊಳಚೆ ಸಹಿತ ಕೆರೆಗೆ ನೀರು ಹರಿದ ಪರಿಣಾಮ ಕಲುಷಿತಗೊಂಡಿದೆ ಎನ್ನುವ ಅಭಿಪ್ರಾಯ ಸ್ಥಳೀಯರು  ವ್ಯಕ್ತಪಡಿಸಿದ್ದಾರೆ. 

55

ಆಡಳಿತ ಮಂಡಳಿ , ಶಾಸಕರ ವಿರುದ್ಧ ಆಕ್ರೋಶ : 
ಕೊಪ್ಪ ಪಟ್ಟಣದ ಜನತೆಗೆ ನೀರುಣಿಸುವ ನೀರು ಮಲಿನಗೊಂಡಿದ್ದು ಸುಮಾರು ಒಂದು ವಾರದಿಂದ ಪಟ್ಟಣಕ್ಕೆ  ಗಬ್ಬು ವಾಸನೆಯ ನೀರನ್ನು ಸರಬರಾಜಾಗುತ್ತಿದ್ದು  ಹಾಗೂ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬ  ಆರೋಗ್ಯ ಇಲಾಖೆಯ ವರದಿ  ಸಾರ್ವಜನಿಕವಾಗಿ ಹರಿದಾಡಿದ್ದು ಅದರ ವಿರುದ್ಧ ಸಾರ್ವಜನಿಕ ವಲಯದಲ್ಲಿ  ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಗಮನಿಸಿದ ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಶೆಟ್ಟಿ  ನೀರು ಶುದ್ಧೀಕರಣ ಘಟಕಕ್ಕೆ ಬೇಟಿ ಕೊಟ್ಟು ಪರಿಶೀಲಿಸಿ ವಾಸ್ತವತೆಯನ್ನು ಅರಿತು ಅವೈಜ್ಞಾನಿಕ ನಿರ್ವಹಣೆಯ ವಿರುದ್ಧ  ಆಕ್ರೋಶ ಹೊರ ಹಾಕಿದ್ದು ಇಂತಹ ದೊಡ್ಡ ಸಮಸ್ಯೆ ಪಟ್ಟಣದಲ್ಲಿ ನಡೆದಿದ್ದರೂ ಕ್ಷೇತ್ರದ ಶಾಸಕರು ಈ ವಿಚಾರವಾಗಿ ಗಮನಹರಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.

ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪಟ್ಟಣದಲ್ಲಿನ ಕುಡಿಯುವ ನೀರಿನ ಮಾಲಿನ್ಯವನ್ನು ವಿಚಾರ ವನ್ನು ಗಂಭೀರವಾಗಿ ಪರಿಗಣಿಸಿಲ್ಲ  ಈ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಆಡಳಿತ ನಡೆಸುವವರ ನಿರ್ಲಕ್ಷ್ಯ ಹೆಚ್ಚಿದೆ. ಸಾರ್ವಜನಿಕರು  ಇಂತಹ ಗಂಭೀರ ವಿಚಾರಗಳನ್ನು ಪ್ರಶ್ನಿಸದಿದ್ದರೆ ಭವಿಷ್ಯ ದಲ್ಲಿ ಭಾರಿ ನಷ್ಟಕ್ಕೆ  ನಾವುಗಳೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಚಿಕ್ಕಮಗಳೂರು
ಕರ್ನಾಟಕ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved