MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಡ್ರೋನ್ ಕ್ಯಾಮೆರಾ ಕಣ್ಣಿಗೂ ಬೀಳದ ಕಾಡಾನೆಗಳಿಗೆ ಸಿಂಹ ಸ್ವಪ್ನವಾದ ನಾಯಿಗಳು; ಅರಣ್ಯ ಇಲಾಖೆಗೆ ರೋಸಿ-ಸಿಂಧು ಫೇವರೇಟ್!

ಡ್ರೋನ್ ಕ್ಯಾಮೆರಾ ಕಣ್ಣಿಗೂ ಬೀಳದ ಕಾಡಾನೆಗಳಿಗೆ ಸಿಂಹ ಸ್ವಪ್ನವಾದ ನಾಯಿಗಳು; ಅರಣ್ಯ ಇಲಾಖೆಗೆ ರೋಸಿ-ಸಿಂಧು ಫೇವರೇಟ್!

ಚಿಕ್ಕಮಗಳೂರಿನಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ 'ರೋಸಿ' ಮತ್ತು 'ಸಿಂಧು' ಎಂಬ ಎರಡು ವಿಶೇಷ ತರಬೇತಿ ಪಡೆದ ಶ್ವಾನಗಳನ್ನು ಬಳಸುತ್ತಿದೆ. ಡ್ರೋನ್‌ಗಳು ವಿಫಲವಾದ ದಟ್ಟಾರಣ್ಯ ಪ್ರದೇಶಗಳಲ್ಲಿಯೂ ಈ ಶ್ವಾನಗಳು ತಮ್ಮ ವಾಸನಾ ಶಕ್ತಿಯಿಂದ ಆನೆಗಳನ್ನು ಪತ್ತೆಹಚ್ಚುತ್ತಿವೆ.

2 Min read
Author : Sathish Kumar KH
Published : Feb 25 2026, 03:24 PM IST
Share this Photo Gallery
  • FB
  • TW
  • Linkdin
  • Whatsapp
15
ಅವರೇ ರೋಸಿ ಮತ್ತು ಸಿಂಧು!
Image Credit : Asianet News

ಅವರೇ ರೋಸಿ ಮತ್ತು ಸಿಂಧು!

ಚಿಕ್ಕಮಗಳೂರು (ಫೆ.25): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ದಟ್ಟ ಅರಣ್ಯ ಮತ್ತು ಕಾಫಿ ತೋಟಗಳ ನಡುವೆ ಅಡಗಿ ಕುಳಿತು ರೈತರ ಮೇಲೆ ದಾಳಿ ಮಾಡುವ ಒಂಟಿ ಸಲಗಗಳನ್ನು ಪತ್ತೆ ಹಚ್ಚುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೈಟೆಕ್ ಡ್ರೋನ್ ಕ್ಯಾಮೆರಾಗಳೂ ಕೂಡ ಸೋಲೊಪ್ಪಿಕೊಳ್ಳದ ಸಮಯದಲ್ಲಿ ಈಗ ಇಬ್ಬರು 'ಮಹಿಳಾ ಅತಿಥಿಗಳು' ಎಂಟ್ರಿ ಕೊಟ್ಟಿದ್ದಾರೆ. ಅವರೇ ರೋಸಿ ಮತ್ತು ಸಿಂಧು!

25
ಯಾರು ಈ ರೋಸಿ ಮತ್ತು ಸಿಂಧು?
Image Credit : Asianet News

ಯಾರು ಈ ರೋಸಿ ಮತ್ತು ಸಿಂಧು?

ಇವರು ಅಂತಿಂಥವರಲ್ಲ, ಅರಣ್ಯ ಇಲಾಖೆಯ ಹೆಮ್ಮೆಯ 'ಟ್ರಾಕರ್ ಡಾಗ್ಸ್' (Tracker Dogs). ಬೆಲ್ಜಿಯಂ ಮಲೆನೈ (Belgian Malinois) ತಳಿಯ ಎರಡು ವರ್ಷದ ಈ ಹೆಣ್ಣು ಶ್ವಾನಗಳು ಈಗ ಕಾಡಾನೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿವೆ. ಎಂತಹ ದೈತ್ಯ ಒಂಟಿ ಸಲಗವಾಗಲಿ ಅಥವಾ ಹಿಂಡಿನಿಂದ ಬೇರ್ಪಟ್ಟ ಆನೆಗಳಾಗಲಿ, ಇವುಗಳ ಮುಂದೆ ಆಟ ನಡೆಯಲ್ಲ.

Related Articles

Related image1
ಚಿಕ್ಕಮಗಳೂರು: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಾನೆ ಮಿಸ್ಸಿಂಗ್! ಅಧಿಕಾರಿಗಳಿಗೆ ಜ್ವರ ಬರೋದೊಂದೇ ಬಾಕಿ
Related image2
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿ, ರಣಾಂಗಣವಾದ ಕಡಬಗೆರೆ, ಕಲ್ಲು ತೂರಾಟ, ಲಾಠಿ ಚಾರ್ಜ್‌!
35
ಪತ್ತೆ ಹಚ್ಚುವಿಕೆಯಲ್ಲಿ ಇವೇ ಕಿಲಾಡಿ:
Image Credit : Asianet News

ಪತ್ತೆ ಹಚ್ಚುವಿಕೆಯಲ್ಲಿ ಇವೇ ಕಿಲಾಡಿ:

ಸಾಮಾನ್ಯವಾಗಿ ಅರಣ್ಯ ಇಲಾಖೆಯು ಆನೆಗಳ ಚಲನವಲನ ತಿಳಿಯಲು ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತದೆ. ಆದರೆ ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಂತಹ ಪ್ರದೇಶಗಳಲ್ಲಿ ಅರಣ್ಯ ಮತ್ತು ಕಾಫಿ ತೋಟಗಳು ಎಷ್ಟು ದಟ್ಟವಾಗಿವೆ ಎಂದರೆ, ಡ್ರೋನ್ ಕಣ್ಣಿಗೂ ಆನೆಗಳು ಬೀಳುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ರೋಸಿ ಮತ್ತು ಸಿಂಧು ತಮ್ಮ ಅಪ್ರತಿಮ ವಾಸನಾ ಶಕ್ತಿಯ ಮೂಲಕ ಆನೆಗಳಿರುವ ನಿಖರ ಜಾಗವನ್ನು ಪತ್ತೆ ಹಚ್ಚುತ್ತಿವೆ. ಆನೆಗಳ ಮೂತ್ರದ ವಾಸನೆ ಮತ್ತು ಹೆಜ್ಜೆ ಗುರುತುಗಳನ್ನು ಆಧರಿಸಿ, ಆನೆಗಳು ಅರ್ಧದಿಂದ ಒಂದು ಕಿಲೋಮೀಟರ್ ದೂರದಲ್ಲಿರುವಾಗಲೇ ಇವು ಸುಳಿವು ನೀಡುತ್ತವೆ.

45
ಬಂಡೀಪುರದಲ್ಲಿ ಕಠಿಣ ತರಬೇತಿ
Image Credit : Asianet News

ಬಂಡೀಪುರದಲ್ಲಿ ಕಠಿಣ ತರಬೇತಿ

ಈ ಶ್ವಾನಗಳಿಗೆ ಬಂಡೀಪುರದಲ್ಲಿ ಅಮೃತ್ ಎಂಬುವವರಿಂದ ವಿಶೇಷ ತರಬೇತಿ ನೀಡಲಾಗಿದೆ. ಬೆಲ್ಜಿಯಂ ಮಲೆನೈ ತಳಿಯ ನಾಯಿಗಳು ತಮ್ಮ ಚಾಣಾಕ್ಷತನ ಮತ್ತು ಶಿಸ್ತಿಗೆ ಜಗತ್ಪ್ರಸಿದ್ಧ. ಇದೇ ಕಾರಣಕ್ಕೆ ಕಾಡಾನೆಗಳ ಚಲನವಲನ ಪತ್ತೆ ಹಚ್ಚುವ ಜವಾಬ್ದಾರಿಯನ್ನು ಇವುಗಳಿಗೆ ನೀಡಲಾಗಿದೆ. ಮತ್ತಾವರ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಮೂರು ಕಾಡಾನೆಗಳನ್ನು ಪತ್ತೆ ಹಚ್ಚಲು ಈ ಶ್ವಾನಗಳು ನೀಡಿದ ಮಾಹಿತಿ ಅರಣ್ಯ ಸಿಬ್ಬಂದಿಗೆ ದೊಡ್ಡ ಮಟ್ಟದ ಸಹಕಾರ ನೀಡಿದೆ.

55
ರೈತರಿಗೆ ಮತ್ತು ಅರಣ್ಯ ಇಲಾಖೆಗೆ ಹೊಸ ಭರವಸೆ:
Image Credit : Asianet News

ರೈತರಿಗೆ ಮತ್ತು ಅರಣ್ಯ ಇಲಾಖೆಗೆ ಹೊಸ ಭರವಸೆ:

ಕಾಫಿನಾಡಿನಲ್ಲಿ ಕಾಡಾನೆ ದಾಳಿಯಿಂದಾಗಿ ಜನಸಾಮಾನ್ಯರು ಪ್ರಾಣ ಕಳೆದುಕೊಳ್ಳುತ್ತಿರುವುದು ನಿರಂತರ ವರದಿಯಾಗುತ್ತಿದೆ. ಕಾಡಂಚಿನ ಗ್ರಾಮಸ್ಥರು ತೋಟಕ್ಕೆ ಹೋಗಲು ಭಯಪಡುತ್ತಿದ್ದರು. ಆದರೆ ಈಗ ರೋಸಿ ಮತ್ತು ಸಿಂಧು ಎಂಬ 'ಟ್ರಾಕರ್' ಶ್ವಾನಗಳ ಸಹಾಯದಿಂದ ಆನೆಗಳು ಎಲ್ಲಿವೆ ಎಂಬುದು ಮುಂಚಿತವಾಗಿಯೇ ತಿಳಿಯುತ್ತಿದೆ. ಇದರಿಂದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಮತ್ತು ಆನೆಗಳನ್ನು ಕಾಡಿಗಟ್ಟಲು ಸಾಧ್ಯವಾಗುತ್ತಿದೆ.

ಒಟ್ಟಾರೆಯಾಗಿ, ತಂತ್ರಜ್ಞಾನದ ಡ್ರೋನ್ ಕ್ಯಾಮೆರಾಗಳು ವಿಫಲವಾದ ಜಾಗದಲ್ಲಿ ಈ ಶ್ವಾನಗಳು ಯಶಸ್ಸು ಸಾಧಿಸುತ್ತಿರುವುದು ಪ್ರಕೃತಿಯ ವಿಸ್ಮಯವೇ ಸರಿ. ರೋಸಿ ಮತ್ತು ಸಿಂಧು ಈಗ ಕಾಫಿನಾಡಿನ ರೈತರ ಮತ್ತು ಅರಣ್ಯ ರಕ್ಷಕರ ನಿಜವಾದ 'ಆಪತ್ಬಾಧವರು'.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಚಿಕ್ಕಮಗಳೂರು
ಆನೆಗಳು

Latest Videos
Recommended Stories
Recommended image1
Now Playing
ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
Recommended image2
Chikkamgaluru: ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಪಿಡಿಓ ನಂಜುಂಡಮ್ಮ
Recommended image3
ಬೆಂಗಳೂರು ಟ್ರಾಫಿಕ್ ಪೊಲೀಸರಿಂದಲೇ ಕ್ಷಮೆ ಕೇಳಿಸಿದ ಮಹಿಳೆ! ಸರ್ಕಾರಿ ಡ್ಯೂಟಿ ಮಾಡಿದ್ದೇ ತಪ್ಪಾಯ್ತಾ?
Related Stories
Recommended image1
ಚಿಕ್ಕಮಗಳೂರು: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಾನೆ ಮಿಸ್ಸಿಂಗ್! ಅಧಿಕಾರಿಗಳಿಗೆ ಜ್ವರ ಬರೋದೊಂದೇ ಬಾಕಿ
Recommended image2
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿ, ರಣಾಂಗಣವಾದ ಕಡಬಗೆರೆ, ಕಲ್ಲು ತೂರಾಟ, ಲಾಠಿ ಚಾರ್ಜ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved