MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಸಾಲದ ಹಣ ವಾಪಸ್ ಕೊಟ್ಟಿಲ್ಲವೆಂದು ಜೀವಂತ ಸುಡಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ!

ಸಾಲದ ಹಣ ವಾಪಸ್ ಕೊಟ್ಟಿಲ್ಲವೆಂದು ಜೀವಂತ ಸುಡಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ!

ಬೆಂಗಳೂರಿನಲ್ಲಿ ಕೇವಲ 5 ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನಿಂದ ವ್ಯಕ್ತಿಯೊಬ್ಬ ಪರಿಚಿತರ ಮನೆಯವರನ್ನು ಜೀವಂತವಾಗಿ ಸುಡಲು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿದ್ದಾನೆ. ಮುಂದೇನಾಯ್ತು ನೀವೇ ನೋಡಿ…

2 Min read
Sathish Kumar KH
Published : Jul 11 2025, 05:54 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Asianet News

ಬೆಂಗಳೂರು (ಜು. 11): ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬರು ಪರಿಚಿತರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ. ಆರೋಪಿಯನ್ನು ಸ್ಥಳೀಯ ಪೊಲೀಸರು ತಕ್ಷಣ ಪತ್ತೆಹಚ್ಚಿ ಬಂಧಿಸಿದ್ದಾರೆ.

28
Image Credit : Asianet News

ಘಟನೆ ವಿವರ:

ಜುಲೈ 1 ರಂದು ಸಂಜೆ 5.30ರ ವೇಳೆಗೆ ವಿವೇಕನಗರದ ನಿವಾಸಿ ವೆಂಕಟರಮಣಿ ಹಾಗೂ ಅವರ ಪುತ್ರ ಸತೀಶ್ ವಾಸವಿರುವ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನೆಯೊಳಗಿದ್ದವರು ತಕ್ಷಣವೇ ಕೆಳಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Related Articles

Related image1
ಮಂಗಳೂರು: ದಿನಸಿ ಸಾಲ ಕೇಳಿದ್ದಕ್ಕೆ ಅಂಗಡಿಗೆ ಬೆಂಕಿ ಹಚ್ಚಿದ ವ್ಯಕ್ತಿ!
Related image2
ಆಲೂಗಡ್ಡೆ ಕರಿ ಮಾಡಲು ಅಡುಗೆಮನೆಗೆ ಹೋದ ಹುಡುಗರು ಇಡೀ ಕೋಣೆಗೇ ಬೆಂಕಿ ಹಚ್ಚೋದಾ?
38
Image Credit : Asianet News

ಆರೋಪಿ ಪತ್ತೆ ಹಚ್ಚಿರುವ ಪೊಲೀಸರು, ಈ ಕೃತ್ಯವನ್ನು ಸುಬ್ರಮಣಿ ಎಂಬಾತ ಎಸಗಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ. ಪಾರ್ವತಿ, ತನ್ನ ಮಗಳು ಮಹಾಲಕ್ಷ್ಮಿಯ ಮದುವೆಗೆ ಸತೀಶ್ ತಾಯಿ ವೆಂಕಟರಮಣಿಯಿಂದ ಸುಮಾರು 5 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣವನ್ನು ಸುಮಾರು 7-8 ವರ್ಷಗಳಾಗಿದ್ದರೂ ಹಿಂತಿರುಗಿಸಿಲ್ಲ. ಅನೇಕ ಬಾರಿ ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡಿದರೂ ವಾಪಸ್ ಕೊಟ್ಟಿರಲಿಲ್ಲ.

48
Image Credit : Asianet News

ಇತ್ತೀಚೆಗಿನ ಮದುವೆ ಕಾರ್ಯಕ್ರಮವೊಂದರಲ್ಲಿ ವೆಂಕಟರಮಣಿ ಹಾಗೂ ಪಾರ್ವತಿ ಮುಖಾಮುಖಿಯಾಗಿದ್ದು, ಮತ್ತೊಮ್ಮೆ ಸಾಲದ ಬಗ್ಗೆ ಮಾತು ನಡೆದಿದೆ. ಈ ಬಗ್ಗೆ ತಮ್ಮ ಸುಬ್ರಮಣಿಗೆ ತಿಳಿಸಿದ್ದ ಪಾರ್ವತಿಯ ಮಾತು ಆತನಿಗೆ ಕೋಪಕ್ಕೆ ಕಾರಣವಾಗಿದ್ದು, ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

58
Image Credit : Asianet News

ಮನೆಯಲ್ಲಿದ್ದವರು ಜಸ್ಟ್ ಸೇಫ್:

ಬೆಂಕಿ ಹಚ್ಚಿದಾಗ ಮನೆಗೆಲ್ಲಾ ಹೊಗೆ ತುಂಬಿ, ಸತೀಶ್ ತಾಯಿ ವೆಂಕಟರಮಣಿ ಹಾಗೂ ಸಹೋದರ ಮೋಹನ್ ದಾಸ್ ಒಳಗೇ ಇದ್ದರು. ಗಲಾಟೆ ಕೇಳಿದ ಸ್ಥಳೀಯರು ಮನೆಯಿಂದ ಹೊರಗೆ ಬರುವಂತೆ ಕೂಗಿಕೊಂಡಿದ್ದಾರೆ. ಈ ಕೂಗಾಟದಿಂದ ಎಚ್ಚೆತ್ತುಕೊಂಡ ಕುಟುಂಬಸ್ಥರು ತಕ್ಷಣವೇ ಮನೆ ಬಿಟ್ಟು ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

68
Image Credit : Asianet News

ಬೆಂಕಿಯಿಂದ ಮನೆಯ ಮುಂಭಾಗ ಮತ್ತು ಕಿಟಕಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆಯ ಕುರಿತು ಸತೀಶ್ ಅವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದರು. ಸಿಸಿಟಿವಿ ಕ್ಯಾಮೆರಾ ನೋಡಿ ಆರೋಪಿ ಪತ್ತೆ ಮಾಡಿದ್ದರು. ಆದರೆ, ಆತನನ್ನು ಬಂಧಿಸಲು ಮುಂದಾದಾಗ ತಲೆಮರೆಸಿಕೊಂಡಿದ್ದನು.

78
Image Credit : Asianet News

ಪೊಲೀಸರ ಕಾರ್ಯಾಚರಣೆ:

ಈ ಪ್ರಕರಣದ ತನಿಖೆ ಕೈಗೊಂಡಿದ್ದ ವಿವೇಕನಗರ ಠಾಣೆಯ ಪೊಲೀಸರು ಹಾಗೂ ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಅಕ್ಷಯ್ ಎಂ ಹಾಕೆ ಅವರು, ಆರೋಪಿಯ ಪತ್ತೆಗಾಗಿ ಹೊರ ರಾಜ್ಯಗಳವರೆಗೂ ಹುಡುಕಾಟ ನಡೆಸಿದರು. ಜುಲೈ 9ರಂದು ಈಜಿಪುರ ನಿವಾಸಿಯಾದ ಸುಬ್ರಮಣಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ. ಹಣಕಾಸಿನ ವಿಚಾರದಿಂದಾಗಿ ಬೆಂಕಿಹಚ್ಚುವಂತಹ ಕ್ರೂರ ಕೃತ್ಯ ಎಸಗಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ.

88
Image Credit : Asianet News

ಒಬ್ಬ ಮಹಿಳೆಯ ಸಾಲದ ವಿಷಯ ಆಕೆಯ ತಮ್ಮನ ಕ್ರೌರ್ಯಕ್ಕೆ ಕಾರಣವಾದ ಘಟನೆ, ಬೆಂಗಳೂರಿನ ಹೃದಯ ಭಾಗವನ್ನೇ ಬೆಚ್ಚಿಬೀಳಿಸಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನ್ಯಾಯಕ್ಕಾಗಿ ಕಾನೂನು ಕ್ರಮಕೈಗೊಂಡಿದ್ದು, ಪೊಲೀಸರು ಕೂಡಾ ಚುರುಕಿನಿಂದ ಕಾರ್ಯನಿರ್ವಹಿಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಅಗ್ನಿ ಅವಘಡ
ಕ್ರೈಮ್ ನ್ಯೂಸ್
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved