MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕನ್ನಡಿಗರ ತೆರಿಗೆ ಹಣದಲ್ಲಿ 'ಪೆರಿಯಾರ್' ಭವನ: ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಬೆದರಿ ಹೆಸರು ಬದಲಿಸಿದ ಜಿಬಿಎ!

ಕನ್ನಡಿಗರ ತೆರಿಗೆ ಹಣದಲ್ಲಿ 'ಪೆರಿಯಾರ್' ಭವನ: ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಬೆದರಿ ಹೆಸರು ಬದಲಿಸಿದ ಜಿಬಿಎ!

ಬೆಂಗಳೂರಿನಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಿದ ಸಮುದಾಯ ಭವನಕ್ಕೆ ತಮಿಳು ನಾಯಕ ಪೆರಿಯಾರ್ ಹೆಸರಿಟ್ಟಿದ್ದು ತೀವ್ರ ವಿವಾದಕ್ಕೆ ಕಾರಣವಾಯಿತು. ಕನ್ನಡಪರ ಸಂಘಟನೆಗಳ ಹೋರಾಟ ಮತ್ತು ಒತ್ತಡದ ನಂತರ, ಜಿಬಿಎ ಆಡಳಿತವು ಭವನಕ್ಕೆ 'ಇಂದಿರಾ ಗಾಂಧಿ ಕನ್ವೆನ್ಷನ್ ಹಾಲ್' ಎಂದು ಮರುನಾಮಕರಣ ಮಾಡಿದೆ.

2 Min read
Author : Sathish Kumar KH
Published : Jul 28 2026, 03:42 PM IST
Share this Photo Gallery
  • FB
  • TW
  • Linkdin
  • Whatsapp
15
ಕನ್ನಡಿಗರ ತೆರಿಗೆ ಹಣದಲ್ಲಿ ಪೆರಿಯಾರ್ ಪ್ರಚಾರ
Image Credit : Asianet News

ಕನ್ನಡಿಗರ ತೆರಿಗೆ ಹಣದಲ್ಲಿ ಪೆರಿಯಾರ್ ಪ್ರಚಾರ

ಬೆಂಗಳೂರು (ಜು.28): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ (Taxpayers Money) ನಿರ್ಮಿಸಲಾದ ಸಮುದಾಯ ಭವನವೊಂದಕ್ಕೆ ತಮಿಳುನಾಡಿನ ನಾಯಕ ಪೆರಿಯಾರ್ ಹೆಸರು ಇಟ್ಟಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕನ್ನಡಪರ ಸಂಘಟನೆಗಳ ತೀವ್ರ ಹೋರಾಟ, ಸ್ಥಳೀಯ ತಮಿಳಿಗರ ನಡುವಿನ ತೀವ್ರ ವಾಗ್ವಾದ ಹಾಗೂ ಪೊಲೀಸರ ಮಧ್ಯಪ್ರವೇಶದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಮಣಿದಿದ್ದು, ಭವನದ ಹೆಸರನ್ನು ಮರುನಾಮಕರಣ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಏನಿದು 'ಪೆರಿಯಾರ್ ಭವನ' ವಿವಾದ?
Image Credit : Asianet News

ಏನಿದು 'ಪೆರಿಯಾರ್ ಭವನ' ವಿವಾದ?

ಬೆಂಗಳೂರಿನ ಶಿವಾಜಿನಗರ (Shivajinagar) ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಂ.ವಿ. ಗಾರ್ಡನ್‌ನಲ್ಲಿ (M.V. Garden) ಜಿಬಿಎ ಅನುದಾನದಲ್ಲಿ ಹೊಸ ಸಮುದಾಯ ಭವನವೊಂದನ್ನು ನಿರ್ಮಿಸಲಾಗಿತ್ತು. ಆದರೆ, ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಿದ ಈ ಭವನಕ್ಕೆ ತಮಿಳುನಾಡಿನ ಚಳವಳಿಗಾರ ಪೆರಿಯಾರ್ ಇ.ವಿ. ರಾಮಸಾಮಿ ಅವರ ಹೆಸರನ್ನು ಇಟ್ಟು 'ಪೆರಿಯಾರ್ ಕನ್ವೆನ್ಷನ್ ಹಾಲ್' (Periyar Convention Hall) ಎಂದು ನಾಮಕರಣ ಮಾಡಲಾಗಿತ್ತು. ಇದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.

Related Articles

Related image1
ಬಿಎಂಟಿಸಿ ಬಸ್ ಜಾಹೀರಾತು ಹರಿದುಹಾಕಿದ ಕನ್ನಡಪರ ಹೋರಾಟಗಾರರು; ಗುಟ್ಕಾ ಪ್ರದರ್ಶನಕ್ಕೆ ಆಕ್ರೋಶ!
Related image2
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌! ಸ್ವಪಕ್ಷೀಯರ ಕೇಸ್‌ ಹಿಂಪಡೆವ ಸರ್ಕಾರಕ್ಕೆ ಕನ್ನಡಪರ ಹೋರಾಟಗಾರರು ನೆನಪಾಗುತ್ತಿಲ್ಲವೇಕೆ?
35
ಕರ್ನಾಟಕದ ಮಹನೀಯರ ಹೆಸರಿಡಲು ಆಗ್ರಹ:
Image Credit : Asianet News

ಕರ್ನಾಟಕದ ಮಹನೀಯರ ಹೆಸರಿಡಲು ಆಗ್ರಹ:

'ಕನ್ನಡಿಗರ ದುಡ್ಡಿನಲ್ಲಿ ನಿರ್ಮಿಸಿದ ಭವನಕ್ಕೆ ತಮಿಳುನಾಡಿನ ನಾಯಕರ ಹೆಸರಿಡುವುದು ಎಷ್ಟು ಸರಿ? ಪೆರಿಯಾರ್ ಬದಲು ಕರ್ನಾಟಕದ ಸಾಹಿತಿಗಳು, ಕ್ರಾಂತಿಕಾರಿಗಳು ಅಥವಾ ಮಹನೀಯರ ಹೆಸರನ್ನು ಇಡಬೇಕು' ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಮುಖಂಡರು ಜಿಬಿಎ ಮುಖ್ಯ ಆಯುಕ್ತರನ್ನು (GBA Chief Commissioner) ಭೇಟಿಯಾಗಿ ಅಧಿಕೃತ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಹೆಸರು ಬದಲಾವಣೆ ಮಾಡಲು ತಕ್ಷಣಕ್ಕೆ ಮುಂದಾಗಲಿಲ್ಲ.

45
ಸ್ಥಳದಲ್ಲಿ ಪ್ರತ್ಯಕ್ಷ ಗಲಾಟೆ: ಪೊಲೀಸರ ಎಂಟ್ರಿ!
Image Credit : Asianet News

ಸ್ಥಳದಲ್ಲಿ ಪ್ರತ್ಯಕ್ಷ ಗಲಾಟೆ: ಪೊಲೀಸರ ಎಂಟ್ರಿ!

ಜಿಬಿಎ ಅಧಿಕಾರಿಗಳು ಹೆಸರು ಬದಲಿಸದ ಹಿನ್ನೆಲೆಯಲ್ಲಿ, ಇಂದು 'ಕನ್ನಡಿಗರ ರಕ್ಷಣಾ ವೇದಿಕೆ'ಯ (Kannadigara Rakshana Vedike) ಕಾರ್ಯಕರ್ತರು ಎಂ.ವಿ. ಗಾರ್ಡನ್‌ನ ಭವನದ ಬಳಿ ನೆರೆದು ಭಾರಿ ಪ್ರತಿಭಟನೆ (Protest) ನಡೆಸಿದರು. ಈ ವೇಳೆ ಸ್ಥಳೀಯ ತಮಿಳು ಮುಖಂಡರು ಹಾಗೂ ಕನ್ನಡಪರ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆದು ವಾತಾವರಣ ಕಾವೇರಿತು. ಘಟನಾ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು (Bengaluru Police), ಗಲಾಟೆ ನಿಲ್ಲಿಸಿ ಎಲ್ಲರನ್ನೂ ಸ್ಥಳದಿಂದ ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

55
ಒತ್ತಡಕ್ಕೆ ಮಣಿದ ಜಿಬಿಎ: ಹೊಸ ಹೆಸರು ಘೋಷಣೆ!
Image Credit : Asianet News

ಒತ್ತಡಕ್ಕೆ ಮಣಿದ ಜಿಬಿಎ: ಹೊಸ ಹೆಸರು ಘೋಷಣೆ!

ಕನ್ನಡಪರ ಸಂಘಟನೆಗಳ ತೀವ್ರ ಪ್ರತಿಭಟನೆ ಹಾಗೂ ಗಲಾಟೆಯ ತೀವ್ರತೆಯನ್ನು ಅರಿತ ಜಿಬಿಎ ಆಡಳಿತ ಮಂಡಳಿ, ಕೊನೆಗೂ ಕನ್ನಡ ಕಾರ್ಯಕರ್ತರ ಒತ್ತಾಯಕ್ಕೆ ಮಣಿದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು 'ಪೆರಿಯಾರ್ ಕನ್ವೆನ್ಷನ್ ಹಾಲ್' ಹೆಸರನ್ನು ತೆರವುಗೊಳಿಸಿ, ಅದರ ಬದಲಾಗಿ 'ಇಂದಿರಾ ಗಾಂಧಿ ಕನ್ವೆನ್ಷನ್ ಹಾಲ್' (Indira Gandhi Convention Hall) ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಶೀರ್ಷಿಕೆ ಸಮರಕ್ಕೆ ತೆರೆ ಬಿದ್ದಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಬೆಂಗಳೂರು ನಗರ
ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಬಿಬಿಎಂಪಿ
Latest Videos
Recommended Stories
Recommended image1
ಗದಗ ಜಿಲ್ಲೆ ಜನರಿಗೆ ಜಲಸಂಕಟ: ಒಂದು ಹನಿ ನೀರಿಲ್ಲದಂತೆ ಬತ್ತಿ ಹೋದ 237 ಕೊಳವೆಬಾವಿಗಳು!
Recommended image2
ಬಿಡದಿಯಲ್ಲಿ 'ದೆಹಲಿ ಮಾದರಿ' GEN Z ಹೋರಾಟ? ಭೂಮಿ ಉಳಿಸಲು ರೈತ ಮಕ್ಕಳು ಮಾಸ್ಟರ್ ಪ್ಲಾನ್
Recommended image3
Kannadiga sticker: ಬಿಎಂಟಿಸಿ ಬಸ್ ಮೇಲಿದ್ದ 'ಕನ್ನಡಿಗ' ಸ್ಟಿಕರ್ ತೆಗೆಸಿದ ಮ್ಯಾನೇಜರ್!
Related Stories
Recommended image1
ಬಿಎಂಟಿಸಿ ಬಸ್ ಜಾಹೀರಾತು ಹರಿದುಹಾಕಿದ ಕನ್ನಡಪರ ಹೋರಾಟಗಾರರು; ಗುಟ್ಕಾ ಪ್ರದರ್ಶನಕ್ಕೆ ಆಕ್ರೋಶ!
Recommended image2
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌! ಸ್ವಪಕ್ಷೀಯರ ಕೇಸ್‌ ಹಿಂಪಡೆವ ಸರ್ಕಾರಕ್ಕೆ ಕನ್ನಡಪರ ಹೋರಾಟಗಾರರು ನೆನಪಾಗುತ್ತಿಲ್ಲವೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved