MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Bengaluru Power Cut: ಬೆಂಗಳೂರಿನಲ್ಲಿ ಮೇ 31ರವರೆಗೆ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ನೋಡಿಕೊಳ್ಳಿ

Bengaluru Power Cut: ಬೆಂಗಳೂರಿನಲ್ಲಿ ಮೇ 31ರವರೆಗೆ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ನೋಡಿಕೊಳ್ಳಿ

ಬೆಸ್ಕಾಂ ನಿರ್ವಹಣೆ ಕಾರ್ಯಗಳಿಂದಾಗಿ ಮೇ 31ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಹೊಸಕೋಟೆ ಮತ್ತು ವಿಜಯಪುರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಈ ವ್ಯತ್ಯಯ ಉಂಟಾಗಲಿದ್ದು, ಬೆಸ್ಕಾಂ ಮಿತ್ರ ಆಪ್ ಮೂಲಕ ದೂರು ನೀಡಬಹುದು.

2 Min read
Gowthami K
Published : May 30 2025, 03:52 PM IST| Updated : May 30 2025, 04:07 PM IST
Share this Photo Gallery
  • FB
  • TW
  • Linkdin
  • Whatsapp
14
Image Credit : our own

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ಮೇ 31ರವರೆಗೆ ನಗರದ ಹಲವಾರು ಪ್ರಮುಖ ಭಾಗಗಳಲ್ಲಿ ನಿಗದಿತವಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ಇದಕ್ಕೆ ಹೊಸಕೋಟೆಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಹಾಗೂ ವಿಜಯಪುರದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಯೋಜನೆಗಳು ಕಾರಣವಾಗಿವೆ ಎಂದು ಬೆಸ್ಕಾಂ ತಿಳಿಸಿದೆ.

24
Image Credit : our own

ಈ ಸಮಯದಲ್ಲಿ ದೂರವಾಣಿ ವಿನಿಮಯ ಕೇಂದ್ರ, ಕೋರ್ಟ್ ಏರಿಯಾ, ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರದೇಶ, ಡಿಗ್ರಿ ಕಾಲೇಜು ರಸ್ತೆ, ಮಜ್ಜಿಗೆ ಕುಂಟಿ, ಕಠ್ಮಂಡು ಲೇಔಟ್, ತ್ಯಾಗರಾಜ ಲೇಔಟ್, ದೊಡ್ಡಗಟ್ಟಿಗಾನ ರಸ್ತೆ, ನಂದಶ್ರೀ ಪ್ರದೇಶ, ಹಿಂದೂ ಸ್ಮಶಾನ, ಕಣ್ಣೂರಹಳ್ಳಿ ರಸ್ತೆ, ಸೋಮಸುಂದರ್ ಲೇಔಟ್, ಅನ್ನಪೂರ್ಣೇಶ್ವರಿ ನಗರ, ಮಿಲನ್ ಕಲ್ಯಾಣ ಮಂಟಪ ವಲಯಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ನಿರೀಕ್ಷೆಯಿದ್ದು, ನಿವಾಸಿಗಳು ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಮುಂಚಿತವಾಗಿ ಚಾರ್ಜ್‌ಮಾಡಿ, ಲಿಫ್ಟ್‌ಗಳ ಬಳಕೆಯನ್ನು ತಕ್ಕಮಟ್ಟಿಗೆ ನಿರ್ಬಂಧಿಸಿ, ವ್ಯಾಪಾರ ಅಥವಾ ದೂರಸ್ಥ ಕೆಲಸಗಳಿಗೆ ಪರ್ಯಾಯ ಯೋಜನೆಗಳನ್ನು ರೂಪಿಸಬೇಕು ಮತ್ತು ವಿದ್ಯುತ್ ಕಳೆದುಹೋದರೆ 'ಬೆಸ್ಕಾಂ ಮಿತ್ರ' ಮೊಬೈಲ್ ಅಪ್ಲಿಕೇಶನ್‌ ಮುಖಾಂತರ ದೂರು ನೀಡಬಹುದು.

34
Image Credit : our own

ಇನ್ನು ಮೇ 30 ಪ್ರದೇಶವಾರು ವಿದ್ಯುತ್ ಕಡಿತದ ವೇಳಾಪಟ್ಟಿ ಇಂತಿದೆ. ಹಿಂದೂ ಸ್ಮಶಾನ ಪ್ರದೇಶ, ಕಣ್ಣೂರು ಹಳ್ಳಿ ರಸ್ತೆ, ಸೋಮಸುಂದರ್ ಲೇಔಟ್, ಅನ್ನಪೂರ್ಣೇಶ್ವರಿ ನಗರ, ಮಿಲನ್ ಕಲ್ಯಾಣ ಮಂಟಪ ಪ್ರದೇಶ (ಹೊಸಕೋಟೆ). ವಿಜಯಪುರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ.

44
Image Credit : our own

ಒಂದು ವೇಳೆ ಘೋಷಿಸದ ನಿಮ್ಮ ಏರಿಯಾಗಳಲ್ಲಿ ವಿದ್ಯುತ್ ಕಡಿತ ಮಾಡಿದರೆ, ನೀವು ಅದನ್ನು ಸುಲಭವಾಗಿ ತಿಳಿಸಬಹುದು. ಅದಕ್ಕಾಗಿ ಬೆಸ್ಕಾಂ ಮಿತ್ರ ಮೊಬೈಲ್ ಆಪ್ (ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡರಲ್ಲೂ ಲಭ್ಯವಿದೆ) ಬಳಸಬಹುದು ಅಥವಾ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಬಹುದು. ಕರೆ ಮಾಡುವಾಗ ನಿಮ್ಮ ಮೀಟರ್ ಸಂಖ್ಯೆ ಅಥವಾ ಖಾತೆ ಐಡಿ ಸಿದ್ಧವಾಗಿರಲಿ. ಬೆಸ್ಕಾಂ ಬೆಂಗಳೂರಿನಲ್ಲಿ ವಿದ್ಯುತ್ ವ್ಯವಸ್ಥೆ ಉತ್ತಮಗೊಳಿಸಲು ಕೆಲಸ ಮಾಡುತ್ತಿರುವುದರಿಂದ, ಕೆಲ ದಿನಗಳ ಕಾಲ ಅಯಾಯ ಪ್ರದೇಶಕ್ಕೆ ತಕ್ಕಂತೆ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಬೆಂಗಳೂರು ನಗರ
ಬೆಸ್ಕಾಂ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved