MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಗಾಂಧಿ ಬಜಾರ್‌ನಲ್ಲಿ ಜೆಸಿಬಿ ಘರ್ಜನೆ: ಬೀದಿ ಬದಿಯಲ್ಲಿದ್ದ ಬಡವರ ಗೂಡಂಗಡಿಗಳು ನೆಲಸಮ!

ಬೆಂಗಳೂರು ಗಾಂಧಿ ಬಜಾರ್‌ನಲ್ಲಿ ಜೆಸಿಬಿ ಘರ್ಜನೆ: ಬೀದಿ ಬದಿಯಲ್ಲಿದ್ದ ಬಡವರ ಗೂಡಂಗಡಿಗಳು ನೆಲಸಮ!

ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದ್ದ ಹಲವು ಅಂಗಡಿಗಳನ್ನು ಪಾಲಿಕೆ ತೆರವುಗೊಳಿಸಿದೆ. ಜೆಸಿಬಿಗಳ ಮೂಲಕ ನಡೆದ ಈ ಕಾರ್ಯಾಚರಣೆಯಲ್ಲಿ ಅನಧಿಕೃತ ಮಳಿಗೆಗಳನ್ನು ನೆಲಸಮ ಮಾಡಲಾಗಿದ್ದು, ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದ್ದೇ ಈ ಕ್ರಮಕ್ಕೆ ಕಾರಣವಾಗಿದೆ.

2 Min read
Sathish Kumar KH
Published : Dec 03 2025, 04:04 PM IST
Share this Photo Gallery
  • FB
  • TW
  • Linkdin
  • Whatsapp
18
ಜೆಸಿಬಿಗಳ ಮೂಲಕ ನೆಲಸಮ
Image Credit : Asianet News

ಜೆಸಿಬಿಗಳ ಮೂಲಕ ನೆಲಸಮ

ಬೆಂಗಳೂರು (ಡಿ.03): ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದ ಗಾಂಧಿ ಬಜಾರ್‌ನಲ್ಲಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದ ಹಲವು ಅಂಗಡಿಗಳನ್ನು ಇಂದು ತೆರವುಗೊಳಿಸಲಾಯಿತು. ಹತ್ತಾರು ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸುತ್ತಿದ್ದ ಬಡ ವ್ಯಾಪಾರಿಗಳ ಅಂಗಡಿಗಳು ಜೆಸಿಬಿಗಳ ಮೂಲಕ ನೆಲಸಮವಾಗಿದ್ದು, ಪಾಲಿಕೆಯ ಈ ಕ್ರಮಕ್ಕೆ ಕೆಲ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

28
ಚಿಕ್ಕಪೇಟೆ ವಿಭಾಗದಲ್ಲಿ ಕಾರ್ಯಾಚರಣೆ
Image Credit : Asianet News

ಚಿಕ್ಕಪೇಟೆ ವಿಭಾಗದಲ್ಲಿ ಕಾರ್ಯಾಚರಣೆ

ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೊಳನ್ ಸೂಚನೆ ಮೇರೆಗೆ, ಚಿಕ್ಕಪೇಟೆ ವಿಭಾಗದಲ್ಲಿ ಈ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಚಿಕ್ಕಪೇಟೆ ಕಾರ್ಯಪಾಲಕ ಅಭಿಯಂತರರಾದ ಪ್ರದೀಪ್ ಕುಮಾರ್ ನೇತೃತ್ವದ ತಂಡವು ಇಂದು (ಡಿ.03) ಬೆಳಿಗ್ಗೆಯಿಂದಲೇ ಈ ಕಾರ್ಯವನ್ನು ಕೈಗೊಂಡಿತು.

Related Articles

Related image1
ಬೆಂಗಳೂರು ಏರ್‌ಪೋರ್ಟ್, ಶಾಪಿಂಗ್ ಮಾಲ್‌ಗಳಿಗೆ 'ಜೈಷ್-ಇ-ಮೊಹಮ್ಮದ್' ಹೆಸರಲ್ಲಿ ಬಾಂಬ್ ಬೆದರಿಕೆ ಇ-ಮೇಲ್
Related image2
ಫೇಕ್‌ ಬೆಸ್ಕಾಂ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ 14.60 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ!
38
ಸೂಚಿಸಿದ ಜಾಗ ಬಿಟ್ಟು ಅನಧಿಕೃತ ವ್ಯಾಪಾರ
Image Credit : Asianet News

ಸೂಚಿಸಿದ ಜಾಗ ಬಿಟ್ಟು ಅನಧಿಕೃತ ವ್ಯಾಪಾರ

ಪಾಲಿಕೆ ಅಧಿಕಾರಿಗಳ ಪ್ರಕಾರ, ಗಾಂಧಿ ಬಜಾರ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 120 ಮಳಿಗೆಗಳಿಗೆ ಮೊದಲೇ ಸ್ಥಳವನ್ನು ಗುರುತಿಸಿ, ಆ ನಿಗದಿಪಡಿಸಿದ ಜಾಗದಲ್ಲಿಯೇ ವ್ಯಾಪಾರ ಮಾಡಲು ಸೂಚಿಸಲಾಗಿತ್ತು. ಆದರೆ, ಹಲವು ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ನಿಗದಿಪಡಿಸಿದ ಸ್ಥಳವನ್ನು ಬಿಟ್ಟು, ರಸ್ತೆಯ ಮೇಲೆ ಮತ್ತು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ವ್ಯಾಪಾರ ಮುಂದುವರೆಸಿದ್ದರು.

48
ನೊಟೀಸ್ ಕೊಟ್ಟರೂ ಕಿವಿಗೊಡದ ವ್ಯಾಪಾರಿಗಳು
Image Credit : Asianet News

ನೊಟೀಸ್ ಕೊಟ್ಟರೂ ಕಿವಿಗೊಡದ ವ್ಯಾಪಾರಿಗಳು

ಇದರಿಂದಾಗಿ ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಒತ್ತುವರಿ ತೆರವುಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ವ್ಯಾಪಾರಿಗಳು ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಇಂದು ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

58
2 ಜೆಸಿಬಿಗಳು, 7 ಟ್ರ್ಯಾಕ್ಟರ್‌ಗಳು, 3 ಲಾರಿಗಳು
Image Credit : Asianet News

2 ಜೆಸಿಬಿಗಳು, 7 ಟ್ರ್ಯಾಕ್ಟರ್‌ಗಳು, 3 ಲಾರಿಗಳು

ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಮುಕ್ತಗೊಳಿಸುವ ಉದ್ದೇಶದಿಂದ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಬಳಸಲಾಯಿತು. ತೆರವು ಕಾರ್ಯಾಚರಣೆಯ ವೇಳೆ 2 ಜೆಸಿಬಿಗಳು, 7 ಟ್ರ್ಯಾಕ್ಟರ್‌ಗಳು, 3 ಲಾರಿಗಳು ಮತ್ತು 40ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಯಿತು.

68
5 ಶಾಪ್‌ಗಳು ನೆಲಸಮ: ಭಾರೀ ಕಾರ್ಯಾಚರಣೆ
Image Credit : Asianet News

5 ಶಾಪ್‌ಗಳು ನೆಲಸಮ: ಭಾರೀ ಕಾರ್ಯಾಚರಣೆ

ನಿಗದಿಪಡಿಸಿರುವ ಜಾಗಕ್ಕಿಂತ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಸ್ಥಳಗಳು ಹಾಗೂ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದ 5 ಶಾಪ್‌ಗಳು ಸೇರಿದಂತೆ ಹಲವು ಅನಧಿಕೃತ ಒತ್ತುವರಿಗಳನ್ನು ಈ ಸಂದರ್ಭದಲ್ಲಿ ನೆಲಸಮಗೊಳಿಸಿ ತೆರವು ಮಾಡಲಾಯಿತು.

78
ಕಠಿಣ ಕಾನೂನು ಕ್ರಮದ ಎಚ್ಚರಿಕೆ
Image Credit : Asianet News

ಕಠಿಣ ಕಾನೂನು ಕ್ರಮದ ಎಚ್ಚರಿಕೆ

ಕಾರ್ಯಾಚರಣೆಯ ನಂತರ, ಪಾಲಿಕೆಯು ಬೀದಿ ಬದಿ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ವ್ಯಾಪಾರಿಗಳು ಕೇವಲ ನಿಗದಿಪಡಿಸಿರುವ ಜಾಗದಲ್ಲಿಯೇ ವ್ಯಾಪಾರ ಮಾಡಬೇಕು. ಅದನ್ನು ಹೊರತುಪಡಿಸಿ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

88
ಪಾದಚಾರಿ ಮಾರ್ಗ ಸುಗಮ
Image Credit : Asianet News

ಪಾದಚಾರಿ ಮಾರ್ಗ ಸುಗಮ

ಈ ಕಾರ್ಯಾಚರಣೆಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಪ್ರದೀಪ್ ಕುಮಾರ್ ಅವರ ಜೊತೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಾದ ಕೃಷ್ಣಕುಮಾರ್, ರಾಮೇಗೌಡ ಮತ್ತು ಮಾರ್ಷಲ್​ಗಳು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಪಾದಚಾರಿ ಮಾರ್ಗವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಇಂತಹ ಕಠಿಣ ಕ್ರಮಗಳನ್ನು ಮುಂದುವರೆಸಲಿದೆ ಎನ್ನಲಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಕರ್ನಾಟಕ ಸುದ್ದಿ
ಬೆಂಗಳೂರು ಮಹಾನಗರ
ಬಿಬಿಎಂಪಿ

Latest Videos
Recommended Stories
Recommended image1
ನಾನೇ 24 ಲಕ್ಷ ರೂ ಕೊಟ್ಟು ಖರೀದಿಸಿದ್ದೇನೆ, ದುಬಾರಿ ಕಾರ್ಟಿಯರ್ ವಾಚ್ ಟೀಕೆಗೆ ಡಿಕೆಶಿ ಸ್ಪಷ್ಟನೆ
Recommended image2
ಶ್ರೀರಂಗಪಟ್ಟಣ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ; ಜಾಮಿಯಾ ಮಸೀದಿ ನಮ್ಮದೆಂದು ನುಗ್ಗಲು ಯತ್ನ!
Recommended image3
ದಾಲ್ಮಿಯಾ ಸಿಮೆಂಟ್ ಕಾರ್ಖಾನೆ ದುರಂತ: ಓರ್ವ ಸಾವು ಹಲವರಿಗೆ ಗಂಭೀರ ಗಾಯ, ಕಾರ್ಮಿಕರಿಂದ ಕಲ್ಲು ತೂರಾಟ
Related Stories
Recommended image1
ಬೆಂಗಳೂರು ಏರ್‌ಪೋರ್ಟ್, ಶಾಪಿಂಗ್ ಮಾಲ್‌ಗಳಿಗೆ 'ಜೈಷ್-ಇ-ಮೊಹಮ್ಮದ್' ಹೆಸರಲ್ಲಿ ಬಾಂಬ್ ಬೆದರಿಕೆ ಇ-ಮೇಲ್
Recommended image2
ಫೇಕ್‌ ಬೆಸ್ಕಾಂ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ 14.60 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved