MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ವಂಚನೆ ಪ್ರಕರಣ, ಈಗ ಹುಬ್ಬಳ್ಳಿ ಜನರಿಗೆ ಶಿವಾನಂದನದ್ದೇ ಚಿಂತೆ!

ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ವಂಚನೆ ಪ್ರಕರಣ, ಈಗ ಹುಬ್ಬಳ್ಳಿ ಜನರಿಗೆ ಶಿವಾನಂದನದ್ದೇ ಚಿಂತೆ!

ಬಹುಕೋಟಿ ಹಗರಣದಲ್ಲಿ ಬಂಧಿತನಾದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ, ಹುಟ್ಟೂರು ಹುಬ್ಬಳ್ಳಿಯೊಂದಿಗೂ ನಂಟು ಹೊಂದಿದ್ದ. ಈತನ ಆ್ಯಪ್‌ನಲ್ಲಿ ಹುಬ್ಬಳ್ಳಿಯವರೂ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಐಡಿ ತನಿಖೆ ಹುಬ್ಬಳ್ಳಿಯತ್ತ ಮುಖ ಮಾಡುವ ಸಾಧ್ಯತೆ ಇದೆ.

2 Min read
Author : Gowthami K
Published : May 20 2026, 06:56 PM IST
Share this Photo Gallery
  • FB
  • TW
  • Linkdin
  • Whatsapp
15
ಅತ್ತ ನೀಲಣ್ಣವರ ಬಂಧನ: ಇತ್ತ ಹುಬ್ಬಳ್ಳಿಯಲ್ಲಿ ಕಾವೇರಿದ ಚರ್ಚೆ
Image Credit : Asianet News

ಅತ್ತ ನೀಲಣ್ಣವರ ಬಂಧನ: ಇತ್ತ ಹುಬ್ಬಳ್ಳಿಯಲ್ಲಿ ಕಾವೇರಿದ ಚರ್ಚೆ

ಹುಬ್ಬಳ್ಳಿ: ಬಹುಕೋಟಿ ಹಗರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿರುವ ಶಿವಂ ಅಸೋಸಿಯೇಟ್ಸ್‌ನ ಮಾಲೀಕ ಶಿವಾನಂದ ನೀಲಣ್ಣವರ ಊರು ಬಿಟ್ಟಿದ್ದರೂ ಹುಬ್ಬಳ್ಳಿಯಲ್ಲಿನ ನಂಟು ಬಿಟ್ಟಿರಲಿಲ್ಲ. ಆಗಾಗ ಹುಬ್ಬಳ್ಳಿಗೂ ಬರುತ್ತಿದ್ದ. ಹೀಗಾಗಿ ಹುಬ್ಬಳ್ಳಿಗರಿಂದಲೂ ತನ್ನ ಆ್ಯಪ್‌ ಮೂಲಕ ಹೂಡಿಕೆ ಮಾಡಿಸಿದ್ದು, ದುಡ್ಡು ಕಳೆದುಕೊಂಡವರಲ್ಲಿ ಇಲ್ಲೂ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪ್ರಕರಣ ಕೈಗತ್ತಿಕೊಂಡಿರುವ ಸಿಐಡಿ ಪೊಲೀಸರು ತನಿಖೆಗಾಗಿ ಹುಬ್ಬಳ್ಳಿಯತ್ತ ಮುಖ ಮಾಡುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred
25
ಬೆಳಗಾವಿಲ್ಲಿದ್ದರೂ ಹುಟ್ಟಿದ ಊರಿನೊಂದಿಗೂ ಭಾರೀ ನಂಟು
Image Credit : Asianet News

ಬೆಳಗಾವಿಲ್ಲಿದ್ದರೂ ಹುಟ್ಟಿದ ಊರಿನೊಂದಿಗೂ ಭಾರೀ ನಂಟು

ಶಿವಾನಂದ ನೀಲಣ್ಣವರ ಇಲ್ಲಿನ ಉಣಕಲ್‌ ದುರ್ಗದ ಓಣಿಯವ. ಇಲ್ಲೇ ಐಸ್ಕ್ರಿಂ ಮಾರುತ್ತಿದ್ದ. ಈತನ ತಂದೆ ತೀರಿದ ಬಳಿಕ ಈತನ ಸಹೋದರನಿಗೆ ಹೆಸ್ಕಾಂನಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಸಿಕ್ಕಿದ್ದು, ಇಡೀ ಕುಟುಂಬ ಬೆಳಗಾವಿಗೆ ಹೋಗಿ ಸೆಟ್ಲ್‌ ಆಗಿದೆ. ಆದರೆ, ಅಲ್ಲಿಗೆ ಹೋಗಿ ನೆಲೆಸಿದ್ದರೂ ಕೂಡ ಹುಬ್ಬಳ್ಳಿಯೊಂದಿಗಿನ ನಂಟು ಮಾತ್ರ ಬಿಟ್ಟಿರಲಿಲ್ಲ.

Related Articles

Related image1
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್‌ನಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ಕರವೇ ಜಿಲ್ಲಾಧ್ಯಕ್ಷಗೆ ಸಿಐಡಿ ನೋಟಿಸ್‌!
Related image2
ಶಿವಂ ಅಸೋಸಿಯೇಟ್ಸ್ ₹4,500 ಕೋಟಿ ಹಗರಣ, ಕೋರ್ಟ್‌ನಲ್ಲಿ ಕಣ್ಣೀರು, ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿ ಶಿಫ್ಟ್!
35
ದೇಗುಲಕ್ಕೂ ದೇಣಿಗೆ
Image Credit : Asianet News

ದೇಗುಲಕ್ಕೂ ದೇಣಿಗೆ

ನೀಲಣ್ಣವರ ಎಂಬ ಅಡ್ರೆಸ್‌ ಹೊಂದಿರುವ ಮನೆತನಗಳು ನಗರದಲ್ಲಿ ಸಾಕಷ್ಟಿವೆ. ಕೆಲವೊಂದಿಷ್ಟು ಜನ ಅವರ ದೂರದ ಸಂಬಂಧಿಕರಿದ್ದಾರೆ. ಹೀಗಾಗಿ ಸಂಬಂಧಿಕರ ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಕ್ರಮ ಅಥವಾ ಅಶುಭ ಕಾರ್ಯಕ್ರಮಕ್ಕೆ ಶಿವಾನಂದ ಹುಬ್ಬಳ್ಳಿಗೆ ಬರುತ್ತಿದ್ದನಂತೆ. ಆಗಾಗ ಬರುತ್ತಿದ್ದ ಶಿವಾನಂದ ಉಣಕಲ್‌ನ ದೇವಸ್ಥಾನವೊಂದರ ಜಾತ್ರಾ ಮಹೋತ್ಸವಕ್ಕೆ ಇತ್ತೀಚಿಗೆ ದೇಣಿಗೆ ಕೂಡ ನೀಡಿದ್ದನಂತೆ. ಜಾತ್ರಾ ಮಹೋತ್ಸವದಲ್ಲೂ ಭಾಗವಹಿಸಿದ್ದನೆಂದು ಮೂಲಗಳು ತಿಳಿಸುತ್ತವೆ.

45
ಚರ್ಚೆ ಏನಾಗುತ್ತಿದೆ?
Image Credit : Asianet News

ಚರ್ಚೆ ಏನಾಗುತ್ತಿದೆ?

ಸದ್ಯ ಈತ 35 ಸಾವಿರ ಜನರಿಂದ ₹ 4500 ಕೋಟಿ ಹೂಡಿಕೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರಿಯುತ್ತಿದ್ದಂತೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯುಂಟು. ಅದರಲ್ಲಿ ಹುಬ್ಬಳ್ಳಿಯವರು ಹೂಡಿಕೆ ಮಾಡಿದ್ದಾರೆಯೇ? ಮಾಡಿದ್ದರೆ ಎಷ್ಟು ಜನ ಮಾಡಿರಬಹುದು? ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ, ಹೂಡಿಕೆ ಮಾಡಿದವರು ತಾವೇ ಹೂಡಿಕೆ ಮಾಡಿದ್ದೇವೆ ಎಂದು ಈ ವರೆಗೂ ಬಂದು ಹೇಳಿಕೊಳ್ಳುತ್ತಿಲ್ಲ. ಇದಕ್ಕೆ ಭಯವೂ ಕಾರಣವಿರಬಹುದು ಎಂಬ ವಿಶ್ಲೇಷಣೆ ಕೂಡ ಕೇಳಿ ಬರುತ್ತಿದೆ. ಈ ಕಾರಣದಿಂದ ತನಿಖೆಗಾಗಿ ಸಿಐಡಿ ಪೊಲೀಸರು ಹುಬ್ಬಳ್ಳಿಗೂ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಘಟನೆ ನಡೆದರೂ ಅದರಷ್ಟೇ ಚರ್ಚೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದಂತೂ ಸತ್ಯ.

55
ಕರೆಗಳ ಸುರಿಮಳೆ!
Image Credit : Asianet News

ಕರೆಗಳ ಸುರಿಮಳೆ!

ಅತ್ತ ನೀಲಣ್ಣವರ ಬಂಧನವಾಗುತ್ತಿದ್ದಂತೆ ಇತ್ತ ಇಲ್ಲಿನ ಈ ಹೆಸರಿನವರಿಗೆ ಮೊಬೈಲ್‌ ಕರೆಗಳ ಸುರಿಮಳೆಯೇ ಬರುತ್ತಿದೆ. ಬೆಳಗಾವಿಯಲ್ಲಿ ಬಂಧನವಾಗಿದೆಯೆಲ್ಲ ಅವರು ನಿಮ್ಮ ಸಂಬಂಧಿಕರಾಕಾ? ನಿಮ್ಮ ಅಡ್ರೆಸ್‌ ಸೇಮ್‌ ಟು ಸೇಮ್‌ ಐತಲಾ ಅದಕ್ಕೆ ಕೇಳಿದೆ.. ಎಂಬೆಲ್ಲ ಪ್ರಶ್ನೆಗಳ ಸುರಿಮಳೆ ಆಗುತ್ತಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಳಗಾವಿ
ಹುಬ್ಬಳ್ಳಿ
ಕರ್ನಾಟಕ ಸುದ್ದಿ
ಹಗರಣ
ವಂಚನೆ

Latest Videos
Recommended Stories
Recommended image1
ಜಿಬಿಎ ಚುನಾವಣೆಗೆ ಆ.31 ಸುಪ್ರೀಂ ಕೋರ್ಟ್ ಅಂತಿಮ ಗಡುವು: ರಾಜ್ಯ ಸರ್ಕಾರಕ್ಕೆ 'ನೋ ಮೋರ್' ಎಕ್ಸ್‌ಟೆನ್ಷನ್!
Recommended image2
ಗಂಗಾವತಿ ನ್ಯಾಯಾಲಯದಲ್ಲಿ ದುರಂತ: 25 ವರ್ಷದ ಯುವ ವಕೀಲ ಹೃದಯಾಘಾತದಿಂದ ಸಾವು!
Recommended image3
ಬಿಡದಿ ಟೌನ್‌ಶಿಪ್ ಬಗ್ಗೆ ದೇವೇಗೌಡರು ರಾಹುಲ್ ಗಾಂಧಿಗೆ ಯಾಕೆ ಪತ್ರ ಬರೀತಾರೆ? ಅವರು ಮೋದಿಗೆ ಪತ್ರ ಬರೆಯಬೇಕು:ಡಿಕೆಶಿ
Related Stories
Recommended image1
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್‌ನಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ಕರವೇ ಜಿಲ್ಲಾಧ್ಯಕ್ಷಗೆ ಸಿಐಡಿ ನೋಟಿಸ್‌!
Recommended image2
ಶಿವಂ ಅಸೋಸಿಯೇಟ್ಸ್ ₹4,500 ಕೋಟಿ ಹಗರಣ, ಕೋರ್ಟ್‌ನಲ್ಲಿ ಕಣ್ಣೀರು, ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿ ಶಿಫ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved