ಲಕ್ಷದೀಪ ಸಂಭ್ರಮ: ದೀಪಾಲಂಕಾರದಲ್ಲಿ ಜಗಮಗಿಸಿದ ಧರ್ಮಸ್ಥಳ
ನಾಡಿನ ಪವಿತ್ರ ಕ್ಷೇತ್ರ, ಚತುರ್ದಾನ ಶ್ರೇಷ್ಠ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯತ್ತಿರುವ ದೀಪೋತ್ಸವವನ್ನು ಸಾವಿರಾರು ಮಂದಿ ಸಾಕ್ಷೀಕರಿಸಿದ್ದಾರೆ.
ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ.
ನಾಡಿನ ಪವಿತ್ರ ಕ್ಷೇತ್ರ, ಚತುರ್ದಾನ ಶ್ರೇಷ್ಠ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯತ್ತಿರುವ ದೀಪೋತ್ಸವವನ್ನು ಸಾವಿರಾರು ಮಂದಿ ಸಾಕ್ಷೀಕರಿಸಿದ್ದಾರೆ.
ಲಕ್ಷ ದೀಪೋತ್ಸವ ಪ್ರಯುಕ್ತ ಸಾವಿರಾರು ಸ್ವಚ್ಛ ಸೇನಾನಿಗಳು ಕ್ಷೇತ್ರದಲ್ಲಿ ಪಾವಿತ್ರ್ಯತೆ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.
ಲಕ್ಷ ದೀಪೋತ್ಸವ ಸಂಭ್ರಮ ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಕಡೆಗಳಿಂದ ಬರುವ ಭಕ್ತರನ್ನು ಕರೆತರಲು ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನ, ರಸ್ತೆಗಳು, ವಸತಿ ಗೃಹ ಸೇರಿದಂತೆ ರಸ್ತೆಗಳು, ಸುತ್ತಮುತ್ತಲಿನ ಕಟ್ಟಡಗಳು ವಿದ್ಯುದ್ದೀಪಗಳಿಂದ ಅಲಂಕಾರಗೊಂಡು, ಸಾಲು ಸಾಲು ವಿಭಿನ್ನ ಮಳಿಗೆಗಳಿಂದ ಜನಾಕರ್ಷಣೆಯಿಂದ ಕೂಡಿವೆ.
ಸಹಸ್ರಾರು ಭಕ್ತರು ಲಕ್ಷದೀಪೋತ್ಸವದ ಅದ್ಭುತ ಘಳಿಗೆಗೆ ಸಾಕ್ಷಿಯಾದರು.
ದೀಪಾಲಂಕಾರದ ಜೊತೆ ಹೂವಿನ ಅಲಂಕಾರವೂ ಅತ್ಯಾಕರ್ಷಕವಾಗಿ ಕಾಣುತ್ತಿತ್ತು.
ಅರ್ಚಕರ ತಂಡ ಲಕ್ಷ ದೀಪೋತ್ಸವ ಪೂಜಾ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು.
ದೇಳದ ಸುತ್ತಲೂ ದೀಪಾಲಂಕಾರ ಕಣ್ಮನ ಸೆಳೆಯುವಂತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ದೇವರನ್ನು ಹೊತ್ತು ಸಾಗುವ ವೈಭವದ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.