- Home
- Karnataka Districts
- ತಿರುಪತಿ ಲಡ್ಡು ತಯಾರಿಗೆ 68 ಲಕ್ಷ ಕೆಜಿ ನಕಲಿ ತುಪ್ಪ; 250 ಕೋಟಿ ಗೋಲ್ಮಾಲ್: CBI ತನಿಖೆಯ ಸತ್ಯ
ತಿರುಪತಿ ಲಡ್ಡು ತಯಾರಿಗೆ 68 ಲಕ್ಷ ಕೆಜಿ ನಕಲಿ ತುಪ್ಪ; 250 ಕೋಟಿ ಗೋಲ್ಮಾಲ್: CBI ತನಿಖೆಯ ಸತ್ಯ
ತಿರುಮಲ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ನಕಲಿ ತುಪ್ಪ ಬಳಸಿದ ಪ್ರಕರಣದಲ್ಲಿ ಸಿಬಿಐ ಅಂತಿಮ ಆರೋಪಪಟ್ಟಿ ಸಲ್ಲಿಸಿದೆ. ಈ 250 ಕೋಟಿ ರೂ. ಹಗರಣದಲ್ಲಿ ಟಿಟಿಡಿ ಸಿಬ್ಬಂದಿ ಸೇರಿದಂತೆ 36 ಮಂದಿ ಭಾಗಿಯಾಗಿದ್ದು, 5 ವರ್ಷಗಳಲ್ಲಿ 68 ಲಕ್ಷ ಕೆ.ಜಿ ನಕಲಿ ತುಪ್ಪ ಪೂರೈಕೆಯಾಗಿದೆ.

ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತುಪ್ಪ
ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿ ತುಪ್ಪ ಬಳಸಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ, ಅಂತಿಮ ಆರೋಪಪಟ್ಟಿಯನ್ನು ನೆಲ್ಲೂರಿನ ಎಸಿಬಿ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ.
ಕಲಬೆರಕೆ ದಂಧೆಯಲ್ಲಿ 250 ಕೋಟಿ ರು. ವ್ಯವಹಾರ
15 ತಿಂಗಳುಗಳ ಕಾಲ 12 ರಾಜ್ಯಗಳಲ್ಲಿ ನಡೆದ ತನಿಖೆ ಬಳಿಕ ತಯಾರಿಸಲಾಗುವ ಚಾರ್ಜ್ಶೀಟ್ನಲ್ಲಿ, ‘5 ವರ್ಷ ದೇವಸ್ಥಾನಕ್ಕೆ 68 ಲಕ್ಷ ಕೆ.ಜಿ.ಯಷ್ಟು ನಕಲಿ ತುಪ್ಪವನ್ನು ಪೂರೈಸಲಾಗಿದೆ. ಈ ಕಲಬೆರಕೆ ದಂಧೆಯಲ್ಲಿ 250 ಕೋಟಿ ರು. ವ್ಯವಹಾರ ನಡೆದಿದೆ. ಈ ಹಗರಣದಲ್ಲಿ ಟಿಟಿಡಿಯ ಉದ್ಯೋಗಿಗಳು, ತುಪ್ಪ ಪೂರೈಕೆದಾರರು ಸೇರಿದಂತೆ 36 ಜನರು ಭಾಗಿಯಾಗಿದ್ದಾರೆ.
ಭೋಲೇ ಬಾಬಾ ಆರ್ಗ್ಯಾನಿಕ್ ಡೈರಿ
ನಕಲಿ ತುಪ್ಪ ಪೂರೈಸಿದ್ದ ಉತ್ತರಾಖಂಡದ ಭೋಲೇ ಬಾಬಾ ಆರ್ಗ್ಯಾನಿಕ್ ಡೈರಿಯ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ಪ್ರಕರಣದ ಪ್ರಮುಖ ಆರೋಪಿಗಳು’ ಎಂದು ಉಲ್ಲೇಖಿಸಲಾಗಿದೆ.
ದಾರಿ ತಪ್ಪಿಸಲು ರಾಸಾಯನಿಕ
ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡದ ವರದಿಯ ಪ್ರಕಾರ, ತಾಳೆ ಎಣ್ಣೆ, ತಾಳೆ ಹಣ್ಣಿನ ಬೀಜದ ಎಣ್ಣೆ ಮತ್ತು ಪಾಮೋಲಿನ್ ಬಳಸಿ ನಕಲಿ ತುಪ್ಪವನ್ನು ತಯಾರಿಸಲಾಗುತ್ತಿತ್ತು. ಪ್ರಯಾಗೋಲಯದಲ್ಲಿ ಇದು ಪತ್ತೆಯಾಗದಂತೆ ತಡೆಯಲು ಬೆಟಾ ಕ್ಯಾರೋಟಿನ್, ಅಸಿಟಿಕ್ ಆ್ಯಸಿಡ್ ಎಸ್ಟರ್, ತುಪ್ಪದ ಘಮವನ್ನು ಸೇರಿಸಲಾಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: 46 ವರ್ಷಗಳ ಹಿಂದೆ ತಿರುಮಲದ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇಂದಿಗೂ ಸಿಕ್ಕಿಲ್ಲ ಉತ್ತರ
ಏನಿದು ತುಪ್ಪದ ಗೋಲ್ಮಾಲ್?
ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಅವಧಿಯಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ತುಪ್ಪ ಬಳಸಿ ತಿರುಪತಿ ಲಡ್ಡುಗಳನ್ನು ತಯಾರಿಸಲಾಗಿತ್ತು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 2024ರ ಸೆಪ್ಟೆಂಬರ್ನಲ್ಲಿ ಆರೋಪಿಸಿದ್ದರು.
ಇದು ದೇಶವ್ಯಾಪಿ ಆಕ್ರೋಶ ಹಾಗೂ ರಾಜಕೀಯ ಸಮರಕ್ಕೆ ಕಾರಣವಾಗಿತ್ತು. ಆಂಧ್ರಪ್ರದೇಶ ಸರ್ಕಾರ ರಚಿಸಿದ ಎಸ್ಐಟಿ ಇದರ ತನಿಖೆ ಆರಂಭಿಸಿತ್ತಾದರೂ, ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ನೇತೃತ್ವದಲ್ಲಿ 5 ಸದಸ್ಯರ ತಂಡ ರಚಿಸಲಾಗಿತ್ತು.
ಇದನ್ನೂ ಓದಿ: 5 ವರ್ಷದಲ್ಲಿ ತಿರುಪತಿಯಲ್ಲಿ 20 ಕೋಟಿ ಕಲಬೆರಕೆ ಲಡ್ಡು ವಿತರಣೆ: ಟಿಟಿಡಿ ಅಧ್ಯಕ್ಷರಿಂದ ಸ್ಫೋಟಕ ಮಾಹಿತಿ
ಮತ್ತೆ ಕರ್ನಾಟಕದ ನಂದಿನಿಗೆ ಶರಣು
ಈ ಹಿಂದೆ ಕರ್ನಾಟಕದ ನಂದಿನಿ ತುಪ್ಪ ದುಬಾರಿ ಎಂಬ ಕಾರಣಕ್ಕೆ ಟಿಟಿಡಿ ತುಪ್ಪ ಆಮದು ನಿಲ್ಲಿಸಿತ್ತು. ಆದರೆ ಹಗರಣ ಬೆಳಕಿಗೆ ಬಂದ ಬಳಿಕ ಮತ್ತೆ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಸಲ್ಲಿಸಿತ್ತು.
ಇದನ್ನೂ ಓದಿ: ತಿರುಪತಿ: 2025ರಲ್ಲಿ 13.52 ಕೋಟಿ ಲಡ್ಡು ಸೇಲ್
