MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ತಿರುಪತಿ ಲಡ್ಡು ತಯಾರಿಗೆ 68 ಲಕ್ಷ ಕೆಜಿ ನಕಲಿ ತುಪ್ಪ; 250 ಕೋಟಿ ಗೋಲ್ಮಾಲ್: CBI ತನಿಖೆಯ ಸತ್ಯ

ತಿರುಪತಿ ಲಡ್ಡು ತಯಾರಿಗೆ 68 ಲಕ್ಷ ಕೆಜಿ ನಕಲಿ ತುಪ್ಪ; 250 ಕೋಟಿ ಗೋಲ್ಮಾಲ್: CBI ತನಿಖೆಯ ಸತ್ಯ

ತಿರುಮಲ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ನಕಲಿ ತುಪ್ಪ ಬಳಸಿದ ಪ್ರಕರಣದಲ್ಲಿ ಸಿಬಿಐ ಅಂತಿಮ ಆರೋಪಪಟ್ಟಿ ಸಲ್ಲಿಸಿದೆ. ಈ 250 ಕೋಟಿ ರೂ. ಹಗರಣದಲ್ಲಿ ಟಿಟಿಡಿ ಸಿಬ್ಬಂದಿ ಸೇರಿದಂತೆ 36 ಮಂದಿ ಭಾಗಿಯಾಗಿದ್ದು, 5 ವರ್ಷಗಳಲ್ಲಿ 68 ಲಕ್ಷ ಕೆ.ಜಿ ನಕಲಿ ತುಪ್ಪ ಪೂರೈಕೆಯಾಗಿದೆ.

2 Min read
Author : Kannadaprabha News
Published : Jan 25 2026, 08:49 AM IST
Share this Photo Gallery
  • FB
  • TW
  • Linkdin
  • Whatsapp
16
ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತುಪ್ಪ
Image Credit : social media

ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತುಪ್ಪ

ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿ ತುಪ್ಪ ಬಳಸಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ, ಅಂತಿಮ ಆರೋಪಪಟ್ಟಿಯನ್ನು ನೆಲ್ಲೂರಿನ ಎಸಿಬಿ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ.

26
ಕಲಬೆರಕೆ ದಂಧೆಯಲ್ಲಿ 250 ಕೋಟಿ ರು. ವ್ಯವಹಾರ
Image Credit : National Geographic/Youtube

ಕಲಬೆರಕೆ ದಂಧೆಯಲ್ಲಿ 250 ಕೋಟಿ ರು. ವ್ಯವಹಾರ

15 ತಿಂಗಳುಗಳ ಕಾಲ 12 ರಾಜ್ಯಗಳಲ್ಲಿ ನಡೆದ ತನಿಖೆ ಬಳಿಕ ತಯಾರಿಸಲಾಗುವ ಚಾರ್ಜ್‌ಶೀಟ್‌ನಲ್ಲಿ, ‘5 ವರ್ಷ ದೇವಸ್ಥಾನಕ್ಕೆ 68 ಲಕ್ಷ ಕೆ.ಜಿ.ಯಷ್ಟು ನಕಲಿ ತುಪ್ಪವನ್ನು ಪೂರೈಸಲಾಗಿದೆ. ಈ ಕಲಬೆರಕೆ ದಂಧೆಯಲ್ಲಿ 250 ಕೋಟಿ ರು. ವ್ಯವಹಾರ ನಡೆದಿದೆ. ಈ ಹಗರಣದಲ್ಲಿ ಟಿಟಿಡಿಯ ಉದ್ಯೋಗಿಗಳು, ತುಪ್ಪ ಪೂರೈಕೆದಾರರು ಸೇರಿದಂತೆ 36 ಜನರು ಭಾಗಿಯಾಗಿದ್ದಾರೆ. 

Related Articles

Related image1
ತಿರುಪತಿ ಲಡ್ಡು ವಿವಾದ: ಪ್ರಸಾದ ಗುಣಮಟ್ಟಕ್ಕಾಗಿ ಅತ್ಯಾಧುನಿಕ ಫುಡ್ ಲ್ಯಾಬ್, ಭಕ್ತರ ವಿಶ್ವಾಸಕ್ಕೆ ಹೊಸ ಬಲ
Related image2
ದಿನಾ ಈ ಲಡ್ಡು ತಿಂದ್ರೆ ಕುದುರೆಯಂತೆ ಶಕ್ತಿ ಬರುತ್ತೆ, ರೆಸಿಪಿನೂ ಹತ್ತೇ ನಿಮಿಷದಲ್ಲಿ ರೆಡಿ ಮಾಡ್ಬೋದು!
36
ಭೋಲೇ ಬಾಬಾ ಆರ್ಗ್ಯಾನಿಕ್‌ ಡೈರಿ
Image Credit : National Geographic/Youtube

ಭೋಲೇ ಬಾಬಾ ಆರ್ಗ್ಯಾನಿಕ್‌ ಡೈರಿ

ನಕಲಿ ತುಪ್ಪ ಪೂರೈಸಿದ್ದ ಉತ್ತರಾಖಂಡದ ಭೋಲೇ ಬಾಬಾ ಆರ್ಗ್ಯಾನಿಕ್‌ ಡೈರಿಯ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್‌ ಪ್ರಕರಣದ ಪ್ರಮುಖ ಆರೋಪಿಗಳು’ ಎಂದು ಉಲ್ಲೇಖಿಸಲಾಗಿದೆ.

46
ದಾರಿ ತಪ್ಪಿಸಲು ರಾಸಾಯನಿಕ
Image Credit : National Geographic/Youtube

ದಾರಿ ತಪ್ಪಿಸಲು ರಾಸಾಯನಿಕ

ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡದ ವರದಿಯ ಪ್ರಕಾರ, ತಾಳೆ ಎಣ್ಣೆ, ತಾಳೆ ಹಣ್ಣಿನ ಬೀಜದ ಎಣ್ಣೆ ಮತ್ತು ಪಾಮೋಲಿನ್‌ ಬಳಸಿ ನಕಲಿ ತುಪ್ಪವನ್ನು ತಯಾರಿಸಲಾಗುತ್ತಿತ್ತು. ಪ್ರಯಾಗೋಲಯದಲ್ಲಿ ಇದು ಪತ್ತೆಯಾಗದಂತೆ ತಡೆಯಲು ಬೆಟಾ ಕ್ಯಾರೋಟಿನ್, ಅಸಿಟಿಕ್ ಆ್ಯಸಿಡ್‌ ಎಸ್ಟರ್, ತುಪ್ಪದ ಘಮವನ್ನು ಸೇರಿಸಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: 46 ವರ್ಷಗಳ ಹಿಂದೆ ತಿರುಮಲದ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇಂದಿಗೂ ಸಿಕ್ಕಿಲ್ಲ ಉತ್ತರ

56
ಏನಿದು ತುಪ್ಪದ ಗೋಲ್ಮಾಲ್‌?
Image Credit : National Geographic/Youtube

ಏನಿದು ತುಪ್ಪದ ಗೋಲ್ಮಾಲ್‌?

ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರ ಅವಧಿಯಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ತುಪ್ಪ ಬಳಸಿ ತಿರುಪತಿ ಲಡ್ಡುಗಳನ್ನು ತಯಾರಿಸಲಾಗಿತ್ತು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 2024ರ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು. 

ಇದು ದೇಶವ್ಯಾಪಿ ಆಕ್ರೋಶ ಹಾಗೂ ರಾಜಕೀಯ ಸಮರಕ್ಕೆ ಕಾರಣವಾಗಿತ್ತು. ಆಂಧ್ರಪ್ರದೇಶ ಸರ್ಕಾರ ರಚಿಸಿದ ಎಸ್‌ಐಟಿ ಇದರ ತನಿಖೆ ಆರಂಭಿಸಿತ್ತಾದರೂ, ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ನೇತೃತ್ವದಲ್ಲಿ 5 ಸದಸ್ಯರ ತಂಡ ರಚಿಸಲಾಗಿತ್ತು.

ಇದನ್ನೂ ಓದಿ: 5 ವರ್ಷದಲ್ಲಿ ತಿರುಪತಿಯಲ್ಲಿ 20 ಕೋಟಿ ಕಲಬೆರಕೆ ಲಡ್ಡು ವಿತರಣೆ: ಟಿಟಿಡಿ ಅಧ್ಯಕ್ಷರಿಂದ ಸ್ಫೋಟಕ ಮಾಹಿತಿ

66
ಮತ್ತೆ ಕರ್ನಾಟಕದ ನಂದಿನಿಗೆ ಶರಣು
Image Credit : Getty

ಮತ್ತೆ ಕರ್ನಾಟಕದ ನಂದಿನಿಗೆ ಶರಣು

ಈ ಹಿಂದೆ ಕರ್ನಾಟಕದ ನಂದಿನಿ ತುಪ್ಪ ದುಬಾರಿ ಎಂಬ ಕಾರಣಕ್ಕೆ ಟಿಟಿಡಿ ತುಪ್ಪ ಆಮದು ನಿಲ್ಲಿಸಿತ್ತು. ಆದರೆ ಹಗರಣ ಬೆಳಕಿಗೆ ಬಂದ ಬಳಿಕ ಮತ್ತೆ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಸಲ್ಲಿಸಿತ್ತು.

ಇದನ್ನೂ ಓದಿ: ತಿರುಪತಿ: 2025ರಲ್ಲಿ 13.52 ಕೋಟಿ ಲಡ್ಡು ಸೇಲ್‌

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ತಿರುಮಲ ತಿರುಪತಿ ದೇವಸ್ಥಾನಂ
ತಿರುಪತಿ

Latest Videos
Recommended Stories
Recommended image1
ಪಾಂಡವಪುರ: ತೊಣ್ಣೂರು ಕೆರೆಯಲ್ಲಿ ಮೀನು ಹಿಡಿಯಲು ಪರವಾನಿಗೆ ನೀಡುವಂತೆ ಮೀನುಗಾರರ ಒತ್ತಾಯ
Recommended image2
ಕಡಬ: ತಂದೆಗೆ ಚಾಕುವಿನಿಂದ ಇರಿದು ಬಳಿಕ ಗುಂಡಿಕ್ಕಿಕೊಂಡ ಬಾಲಕ: ಮಂಗಳೂರಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ
Recommended image3
ನಂಬುವುದು ಹೇಗೆ ಸಾಧ್ಯ? ಅವರಿಬ್ಬರಿಂದಲೇ ರಕ್ಷಣೆ: ಶಾಸಕ ಜನಾರ್ದನ್ ರೆಡ್ಡಿಗಂಭೀರ ಆರೋಪ
Related Stories
Recommended image1
ತಿರುಪತಿ ಲಡ್ಡು ವಿವಾದ: ಪ್ರಸಾದ ಗುಣಮಟ್ಟಕ್ಕಾಗಿ ಅತ್ಯಾಧುನಿಕ ಫುಡ್ ಲ್ಯಾಬ್, ಭಕ್ತರ ವಿಶ್ವಾಸಕ್ಕೆ ಹೊಸ ಬಲ
Recommended image2
ದಿನಾ ಈ ಲಡ್ಡು ತಿಂದ್ರೆ ಕುದುರೆಯಂತೆ ಶಕ್ತಿ ಬರುತ್ತೆ, ರೆಸಿಪಿನೂ ಹತ್ತೇ ನಿಮಿಷದಲ್ಲಿ ರೆಡಿ ಮಾಡ್ಬೋದು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved