MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Kalaburagi Sharana Basaveshwara Matha: 5ರ ಬಾಲಕಗೆ ಶರಣ ಬಸವ ಪೀಠದ ಪಟ್ಟಾಧಿಕಾರ

Kalaburagi Sharana Basaveshwara Matha: 5ರ ಬಾಲಕಗೆ ಶರಣ ಬಸವ ಪೀಠದ ಪಟ್ಟಾಧಿಕಾರ

ಕಲಬುರಗಿ(ಫೆ.08):  ಶರಣ ಬಸವೇಶ್ವರ ದಾಸೋಹ ಪೀಠದ(Sharana Basaveshwara Matha) ಅತಿ ಕಿರಿಯ ಪೀಠಾಧಿಪತಿ ಎಂದೇ ಹೆಸರಾಗಿರುವ 5 ವರ್ಷದ ಬಾಲಕ ಚಿ.ದೊಡ್ಡಪ್ಪ ಅಪ್ಪಾಜಿಗೆ(Doddappa Appalji) ಸಂಸ್ಥಾನದ 8ನೇ ಪೀಠಾಧಿಪತಿಗಳಾಗಿರುವ ಡಾ. ಶರಣಬಸವಪ್ಪ ಅಪ್ಪ(Dr Sharanabasappa Appa) ಅವರು ಸೋಮವಾರ ಮಧಾಹ್ನ 1ಕ್ಕೆ ನೆರವೇರಿದ ಧಾರ್ಮಿಕ ಸಮಾರಂಭದಲ್ಲಿ ಪಟ್ಟಾಧಿಕಾರ ಹಸ್ತಾಂತರಿಸಿದರು.

1 Min read
Kannadaprabha News | Asianet News
Published : Feb 08 2022, 12:44 PM IST
Share this Photo Gallery
  • FB
  • TW
  • Linkdin
  • Whatsapp
16

ಈ ಪ್ರಕ್ರಿಯೆಯೊಂದಿಗೆ 2 ಶತಮಾನಗಳಿಂದಲೂ ಈ ನೆಲದ ದಾಸೋಹ ಪರಿಕಲ್ಪನೆಯ ಸನ್ನಿಧಾನ ಎಂದೇ ಹೆಸರಾಗಿರುವ ಶರಣಬಸವೇಶ್ವರ ಸಂಸ್ಥಾನದಲ್ಲಿ ನವ ಯುಗಕ್ಕೆ ಮುನ್ನುಡಿ ಬರೆಯಲಾಯಿತು. 

26

ದಾಸೋಹ ಮಹಾಮನೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು 9ನೇ ಪೀಠಾಧಿಪತಿಯಾಗಿರುವ(Successor) ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಗೆ ಹಿರಿಯ ಗುರುಗಳ ಸಮ್ಮುಖದಲ್ಲಿ ದಾಸೋಹ ಮಹಾಮನೆಯ ಸಂಪೂರ್ಣ ಜವಾಬ್ದಾರಿಯನ್ನು ಧಾರ್ಮಿಕ ವಿಧಿ-ವಿಧಾನಗಳನ್ನು ಈಡೇರಿಸುವ ಅಧಿಕಾರ ಅನುಗ್ರಹಿಸಿದರು.

36

2017ರ ನ.1ರಂದು ಜನಿಸಿದ ದೊಡ್ಡಪ್ಪ ಅಪ್ಪಾಜಿ ಅವರು 200 ವರ್ಷಗಳ ಹಿಂದೆ ಸ್ಥಾಪಿಸಿದ ಶರಣ ಬಸವೇಶ್ವರ ಸಂಸ್ಥಾನದ ಎಲ್ಲಾ ಪೀಠಾಧಿಪತಿಗಳಲ್ಲಿ ಅತ್ಯಂತ ಕಿರಿಯ ಪೀಠಾಧಿಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 

46

ನನ್ನ ಮಗ ಚಿರಂಜೀವಿ ದೊಡ್ಡಪ್ಪ ಅಪ್ಪನವರನ್ನು ಶರಣಬಸವೇಶ್ವರ ಸಂಸ್ಥಾನಕ್ಕೆ ನನ್ನ ಉತ್ತರಾಧಿಕಾರಿ ಎಂದು ಘೋಷಿಸುತ್ತೇನೆ’ ಎಂದು ತಿಳಿಸಿದ ಡಾ. ಶರಣಬಸವಪ್ಪ ಅಪ್ಪಾಜಿ

56

ಬೀದರ್‌(Bidar) ಜಿಲ್ಲೆಯ ಹಾರಕೂಡದ ಸಂಸ್ಥಾನ ಹಿರೇಮಠದ ಡಾ.ಚೆನ್ನವೀರ ಶಿವಾಚಾರ್ಯರು ದೊಡ್ಡಪ್ಪ ಅಪ್ಪಾಜಿಗೆ ಔಪಚಾರಿಕವಾಗಿ ಅಧಿಕಾರ ಹಸ್ತಾಂತರದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. 

66

ಬಳಿಕ ಲಿಂಗದೀಕ್ಷೆ ನೀಡಿದರು. 9ನೇ ಪೀಠಾಧಿಪತಿಗಳಿಗೆ ಪ್ರಸಾದ ಬಟ್ಟಲು, ಲಿಂಗ ಸಜ್ಜಿಕೆ (19ನೇ ಶತಮಾನದ ಶರಣಬಸವೇಶ್ವರರು ಬಳಸಿದ ಬೆಳ್ಳಿಯ ತಟ್ಟೆ ಮತ್ತು ಆತ್ಮಲಿಂಗ) ಹಸ್ತಾಂತರಿಸಿ ಧಾರ್ಮಿಕ ವಿಧಿವಿಧಾನಗಳು ಮತ್ತು ಪೂಜೆಗಳನ್ನು ನಡೆಸುವ ಅಧಿಕಾರವನ್ನು ನೂತನ ಪೀಠಾಧಿಪತಿಗಳಿಗೆ ಹಸ್ತಾಂತರಿಸಿದರು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಕಲಬುರಗಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved