ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಗ್ಗೆ ನಿಮಗೆ ತಿಳಿಯದ ಸತ್ಯಗಳಿವು!
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ 71 ನೇ ಜನ್ಮದಿನದ ಪ್ರಯುಕ್ತ ಧರ್ಮಸ್ಥಳದಲ್ಲಿ ಇಂದು ಸಂತಸ, ಸಂಭ್ರಮ ದ್ವಿಗುಣಗೊಂಡಿದೆ. ವೀರೆಂದ್ರ ಹೆಗ್ಗಡೆಯವರು ಹೆಸರಿಗೆ ತಕ್ಕಂತೆ ಧರ್ಮವನ್ನು ಎತ್ತಿ ಹಿಡಿಯುವ ಮಹಾನ್ ವ್ಯಕ್ತಿ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರ ಹಾಗೂ ಅವರ ಕುಟುಂಬದ ಫೋಟೋಗಳು ಹಾಗೂ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.
ವೀರೇಂದ್ರ ಹೆಗ್ಗಡೆ ಅವರು ಬಂಟ್ವಾಳದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ.
ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ.
ಅಕ್ಟೋಬರ್ 24 ರಂದು ಧರ್ಮಾಧಿಕಾರಿಯಾಗಿ ನೇಮಕಗೊಂಡರು
20 ನೇ ವಯಸ್ಸಿಗೆ ಧರ್ಮಾಧಿಕಾರಿಯಾಗಿ ಪಟ್ಟಾಭಿಷಕ್ತರಾದರು.
ಧರ್ಮಸ್ಥಳದಲ್ಲಿ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದ ಹೆಗ್ಗಳಿಕೆ ಇವರದ್ದು.
ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
'ಮಂಜುವಾಣಿ' ಎಂಬ ಮಾಸಿಕ ಪತ್ರಿಕೆಗೆ ಬರೆಯುತ್ತಾರೆ. ಅದರಲ್ಲಿ ಜೀವನಾನುಭವಗಳ ಬಗ್ಗೆ ಬರೆಯುತ್ತಾರೆ.
ಪತ್ರಿ ವರ್ಷವೂ 10,000 ಕ್ಕೂ ಹೆಚ್ಚು ಜನರಿಗೆ ಉಚಿತ ವಿವಾಹ ಮಾಡಿಸುತ್ತಾರೆ.
1 ಲಕ್ಷಕ್ಕೂ ಹೆಚ್ಚು ಕುಟುಂಗಳಿಗೆ ವ್ಯವಸಾಯ, ಮನೆ, ಮಹಿಳಾ ನೌಕರಿ ಮತ್ತು ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾರೆ.
ವೀರೇಂದ್ರ ಹೆಗ್ಗಡೆಯವರ ತುಂಬು ಕುಟುಂಬವಿದು