IPL 2020: ಈ ಸಲ ಪಕ್ಕಾ RCB ಕಪ್ ಗೆಲ್ಲುತ್ತೆ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದರೂ ಚಾಂಪಿಯನ್ ಪಟ್ಟ ಅಲಂಕರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿತ್ತಾದರೂ ಕೊನೆಯ ಕ್ಷಣದಲ್ಲಿ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.ಆದರೆ ಈ ಬಾರಿಯ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಸಾಕಷ್ಟು ಅಳೆದು ತೂಗಿ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಮೂರು ಕಾರಣಗಳಿಂದಾಗಿ RCB ಈ ಬಾರಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎನಿಸಿದೆ.

<p>1. ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿದ್ದಾರೆ ಬಲಾಢ್ಯ ಯುವಕರ ದಂಡು:</p>
1. ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿದ್ದಾರೆ ಬಲಾಢ್ಯ ಯುವಕರ ದಂಡು:
<p>RCB ಪಡೆಯಲ್ಲಿ ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ ಅವರಂತಹ ಪ್ರತಿಭಾನ್ವಿತ ಆಟಗಾರರ ದಂಡೇ ಇದೆ. </p>
RCB ಪಡೆಯಲ್ಲಿ ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ ಅವರಂತಹ ಪ್ರತಿಭಾನ್ವಿತ ಆಟಗಾರರ ದಂಡೇ ಇದೆ.
<p>ಕರ್ನಾಟಕದ ಪಡಿಕ್ಕಲ್ ಈಗಾಗಲೇ ದೇಸಿ ಟೂರ್ನಿಯಲ್ಲಿ ರನ್ ಮಳೆ ಹರಿಸಿದ್ದಾರೆ. ಜೋಶ್ ಫಿಲಿಫ್ ಬಿಗ್ ಬ್ಯಾಶ್ ಲೀಗ್ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಫಿಂಚ್ ಕೂಡಾ ಫಿಲಿಫ್ ಭವಿಷ್ಯದ ಆಸೀಸ್ ಕ್ರಿಕೆಟಿಗ ಎಂದು ಕೊಂಡಾಡಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಹಾಗೂ ಪವನ್ ದೇಶಪಾಂಡೆ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಬಲ್ಲರು.</p>
ಕರ್ನಾಟಕದ ಪಡಿಕ್ಕಲ್ ಈಗಾಗಲೇ ದೇಸಿ ಟೂರ್ನಿಯಲ್ಲಿ ರನ್ ಮಳೆ ಹರಿಸಿದ್ದಾರೆ. ಜೋಶ್ ಫಿಲಿಫ್ ಬಿಗ್ ಬ್ಯಾಶ್ ಲೀಗ್ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಫಿಂಚ್ ಕೂಡಾ ಫಿಲಿಫ್ ಭವಿಷ್ಯದ ಆಸೀಸ್ ಕ್ರಿಕೆಟಿಗ ಎಂದು ಕೊಂಡಾಡಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಹಾಗೂ ಪವನ್ ದೇಶಪಾಂಡೆ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಬಲ್ಲರು.
<p>2. ಡೆತ್ ಓವರ್ ಸಮಸ್ಯೆ ಕೊನೆಗೂ ಪರಿಹಾರ</p>
2. ಡೆತ್ ಓವರ್ ಸಮಸ್ಯೆ ಕೊನೆಗೂ ಪರಿಹಾರ
<p>ಕಳೆದ ಹಲವು ವರ್ಷಗಳಿಂದ ಎದುರಿಸುತ್ತಿದ್ದ ಪ್ರಮುಖ ಸಮಸ್ಯೆ ಕ್ರಿಸ್ ಮೋರಿಸ್ ಸೇರ್ಪಡೆಯೊಂದಿಗೆ ಬಗೆ ಹರಿದಿದೆ. 10 ಕೋಟಿ ರುಪಾಯಿ ನೀಡಿ ಆಲ್ರೌಂಡರ್ ಮೋರಿಸ್ ಖರೀದಿಸುವ ಮೂಲಕ RCB ಫ್ರಾಂಚೈಸಿ ಮಹತ್ವದ ಹೆಜ್ಜೆಯಿಟ್ಟಿದೆ.</p>
ಕಳೆದ ಹಲವು ವರ್ಷಗಳಿಂದ ಎದುರಿಸುತ್ತಿದ್ದ ಪ್ರಮುಖ ಸಮಸ್ಯೆ ಕ್ರಿಸ್ ಮೋರಿಸ್ ಸೇರ್ಪಡೆಯೊಂದಿಗೆ ಬಗೆ ಹರಿದಿದೆ. 10 ಕೋಟಿ ರುಪಾಯಿ ನೀಡಿ ಆಲ್ರೌಂಡರ್ ಮೋರಿಸ್ ಖರೀದಿಸುವ ಮೂಲಕ RCB ಫ್ರಾಂಚೈಸಿ ಮಹತ್ವದ ಹೆಜ್ಜೆಯಿಟ್ಟಿದೆ.
<p>ಇನ್ನು ಕೇನ್ ರಿಚರ್ಡ್ಸನ್ ಹಾಗೂ ನವದೀಪ್ ಸೈನಿ ಕೂಡಾ ಡೆತ್ ಓವರ್ನಲ್ಲಿ ಮಾರಕ ದಾಳಿ ನಡೆಸಬಲ್ಲರು. ಇವರ ಜತೆ ಉಮೇಶ್ ಯಾದವ್ ಕೂಡಾ ಉತ್ತಮ ಕಾಣಿಕೆ ನೀಡಬಲ್ಲರು. ಹೀಗಾದಲ್ಲಿ ಡೆತ್ ಓವರ್ ಸಮಸ್ಯೆ ಬೆಂಗಳೂರು ತಂಡವನ್ನು ಕಾಡಲಾರದು.</p>
ಇನ್ನು ಕೇನ್ ರಿಚರ್ಡ್ಸನ್ ಹಾಗೂ ನವದೀಪ್ ಸೈನಿ ಕೂಡಾ ಡೆತ್ ಓವರ್ನಲ್ಲಿ ಮಾರಕ ದಾಳಿ ನಡೆಸಬಲ್ಲರು. ಇವರ ಜತೆ ಉಮೇಶ್ ಯಾದವ್ ಕೂಡಾ ಉತ್ತಮ ಕಾಣಿಕೆ ನೀಡಬಲ್ಲರು. ಹೀಗಾದಲ್ಲಿ ಡೆತ್ ಓವರ್ ಸಮಸ್ಯೆ ಬೆಂಗಳೂರು ತಂಡವನ್ನು ಕಾಡಲಾರದು.
<p><strong>3. ಅನುಭವಿ ಹಾಗೂ ಸ್ಫೋಟಕ ಬ್ಯಾಟಿಂಗ್ ಪಡೆ:</strong></p>
3. ಅನುಭವಿ ಹಾಗೂ ಸ್ಫೋಟಕ ಬ್ಯಾಟಿಂಗ್ ಪಡೆ:
<p>ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆ್ಯರೋನ್ ಫಿಂಚ್ ಸೇರ್ಪಡೆಯೊಂದಿಗೆ ಎಬಿಡಿ-ಕೊಹ್ಲಿ ಮೇಲಿದ್ದ ಭಾರ ಕಡಿಮೆಯಾದಂತೆ ಆಗಿದೆ. ಆಸೀಸ್ ನಾಯಕ ಫಿಂಚ್-ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರೆ ಆ ಬಳಿಕ ಆರ್ಸಿಬಿ ಸರಾಗವಾಗಿ ರನ್ ಗಳಿಸಬಹುದು.</p>
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆ್ಯರೋನ್ ಫಿಂಚ್ ಸೇರ್ಪಡೆಯೊಂದಿಗೆ ಎಬಿಡಿ-ಕೊಹ್ಲಿ ಮೇಲಿದ್ದ ಭಾರ ಕಡಿಮೆಯಾದಂತೆ ಆಗಿದೆ. ಆಸೀಸ್ ನಾಯಕ ಫಿಂಚ್-ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರೆ ಆ ಬಳಿಕ ಆರ್ಸಿಬಿ ಸರಾಗವಾಗಿ ರನ್ ಗಳಿಸಬಹುದು.
<p>ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಎಬಿಡಿ, ಮೊಯಿನ್ ಅಲಿ ಹಾಗೂ ಪಾರ್ಥಿವ್ ಪಟೇಲ್ ಅವರಂತಹ ಆಟಗಾರರಿರುವುದು ತಂಡಕ್ಕೆ ಮತ್ತಷ್ಟು ಬಲ ತುಂಬಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಲ ಕಪ್ ಗೆಲ್ಲುವುದು ಕಷ್ಟದ ಮಾತೇನಲ್ಲ.</p>
ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಎಬಿಡಿ, ಮೊಯಿನ್ ಅಲಿ ಹಾಗೂ ಪಾರ್ಥಿವ್ ಪಟೇಲ್ ಅವರಂತಹ ಆಟಗಾರರಿರುವುದು ತಂಡಕ್ಕೆ ಮತ್ತಷ್ಟು ಬಲ ತುಂಬಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಲ ಕಪ್ ಗೆಲ್ಲುವುದು ಕಷ್ಟದ ಮಾತೇನಲ್ಲ.