ಹೊರಬಿದ್ದ ಧೋನಿಪಡೆ; ಸಿಎಸ್ಕೆಗೆ ಮಾರಕವಾದ 10 ಅಂಶ!
ಅಬುದಾಬಿ(ಅ. 25) ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ 2020ರ ಐಪಿಎಲ್ ನಲ್ಲಿ ತನ್ನ ಯಾತ್ರೆಯನ್ನು ಕೊನೆ ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ದ ರಾಜಸ್ಥಾನ ರಾಯಲ್ಸ್ ಗೆಲ್ಲುವುದರೊಂದಿಗೆ ಸಿಎಸ್ಕೆ ಎಲ್ಲ ಬಾಗಿಲುಗಳು ಬಂದ್ ಆಗಿವೆ.
ಐಪಿಎಲ್ ನ ಅತಿ ಯಶಸ್ವಿ ತಂಡ ಈ ಬಾರಿ ಪ್ಲೇಅಪ್ ಪ್ರವೇಶ ಮಾಡಲು ಸಾಧ್ಯವಾಗಿಲ್ಲ.
ಸಿಎಸ್ಕೆ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ ಶಾಕ್ ಕೊಟ್ಟಿತ್ತು.
ಸುರೇಶ್ ರೈನಾ ಅನುಪಸ್ಥಿತಿ ತಂಡಕ್ಕೆ ಬಲುವಾಗಿ ಕಾಡಿತು.
ತಂಡದಲ್ಲಿ ಹೊಂದಾಣಿಕೆ ಕಂಡು ಬರಲೇ ಇಲ್ಲ.
ಮಹೆಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಸಿಎಸ್ಕೆ ನಾಯಕರಾಗಿ ಮರಳಿದ್ದರು.
ಆಲ್ ರೌಂಡರ್ ರವೀಂದ್ರ ಜಡೇಜಾ ಸ್ಫೋಟಿಸಲೇ ಇಲ್ಲ.
ಕಳದೆ ಸಾರಿ ಸಿಎಸ್ಕೆ ರನ್ನರ್ ಅಪ್ ಆಗಿತ್ತು
ಡುಪ್ಲೆಸಿ ಒಂದು ಕಡೆ ಅಬ್ಬರಿಸುತ್ತ ಇದ್ದರೂ ಅನೇಕ ಗೆಲ್ಲಬೇಕಾದ ಪಂದ್ಯ ಕೈಚೆಲ್ಲಿತು.
ಮೊದಲಿಗೆ ಹಿರಿಯರಿಗೆ ಅವಕಾಶ ಕೊಟ್ಟ ಧೋನಿ ಕೊನೆಯ ಪಂದ್ಯದ ವೇಳೆಗೆ ಹುಡುಗರಿಗೆ ಮಣೆ ಹಾಕಿದರು.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಹಂತಕ್ಕೆ ಪ್ರವೇಶಿಸದೆ ಹೊರನಡೆಯುತ್ತಿದೆ.
ಬೌಲಿಂಗ್ ವಿಭಾಗ ಸಹ ಧೋನಿ ಹೇಳದಂತೆ ಕಾರ್ಯನಿರ್ವಹಿಸಲೇ ಇಲ್ಲ.
ಸ್ಯಾಮ್ ಕರನ್ ಅಬ್ಬರಿಸಿದರೂ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ.
ಅನುಭವಿಗಳ ದಂಡೇ ಇದ್ದರೂ ದುಬೈ ಮತ್ತು ಶಾರ್ಜಾದಲ್ಲಿ ಧೋನಿ ಪಡೆಗೆ ಅದೃಷ್ಟ ಕೈಗೂಡಲಿಲ್ಲ.
ಮಹೇಂದ್ರ ಸಿಂಗ್ ಧೋನಿ ಮುಂದಿನ ಆವೃತ್ತಿ ಆಡುತ್ತಾರೋ ಇಲ್ಲವೋ ಗೊತ್ತಿಲ್ಲ.. ಆದರೆ ಈ ಸಾರಿ ಟ್ರೋಫಿಯೊಂದಿಗೆ ಅವರನ್ನು ಬಿಳ್ಕೋಡಲು ಸಿಎಸ್ಕೆ ಬಳಿ ಸಾಧ್ಯವಾಗಲಿಲ್ಲ.
ಈ ಹಿಂದಿನ 12 ಆವೃತ್ತಿಗಳಲ್ಲಿ 10 ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ ಪಾಲ್ಗೊಂಡಿದ್ದು ಈ ಎಲ್ಲಾ ಆವೃತ್ತಿಯಲ್ಲೂ ಪ್ಲೇ ಆಫ್ ಹಂತ ಪ್ರವೇಶ ಮಾಡಿತ್ತು.
ಈ ಬಾರಿಯ ಕೊನೆಯ ಸ್ಥಾನದಿಂದಲಾದರೂ ಇನ್ನುಳಿದ ಪಂದ್ಯ ಗೆದ್ದು ಪಾರಾಗುತ್ತದೆಯಾ ನೋಡಬೇಕು.
ಸಿಎಸ್ಕೆಗೆ ಪಂದ್ಯಾವಳಿಯಲ್ಲಿ ಇನ್ನು ಎರಡು ಪಂದ್ಯಗಳಿವೆ