CSK ತಂಡ ಸೋಲಿನಿಂದ ಹೊರಬರುವುದು ಖಚಿತ, ಅಖಾಡಕ್ಕೆ ಇಬ್ಬರು ಸ್ಟಾರ್ ಪ್ಲೇಯರ್ಸ್!
ಉದ್ಘಟನಾ ಪಂದ್ಯದಲ್ಲಿ ಗೆಲುವು ಸಾಧಿಸಿದ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ಮತ್ತೆರೆಡು ಪಂದ್ಯದಲ್ಲಿ ಸತತ ಸೋಲು ಕಂಡಿದೆ. ಮಧ್ಯಮ ಕ್ರಮಾಂಕದ ವೈಫಲ್ಯ, ದುಬಾರಿ ಬೌಲಿಂಗ್ನಿಂದ ಪಂದ್ಯ ಸೋತಿದೆ. ಸುರೇಶ್ ರೈನಾ ತಂಡಕ್ಕೆ ಕಮ್ಬ್ಯಾಕ್ ಮಾಡುತ್ತಿಲ್ಲ. ಆದರೆ ಮತ್ತಿಬ್ಬರು ಆಟಗಾರರು ಇಂಜುರಿಯಿಂದ ಗುಣಮುಖರಾಗಿದ್ದು, ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್, ನಂತ 2 ಪಂದ್ಯ ಸೋತು ನಿರಾಸೆ ಅನುಭವಿಸಿದೆ.
![article_image2](https://static-ai.asianetnews.com/images/01ejksdwhe8rqr9bxtmg6ebbqn/rayudu--1--jpg_300x171xt.jpg)
ಸಿಎಸ್ಕೆ ತಂಡದ ಮಧ್ಯಮ ಕ್ರಮಾಂದ ಬಲವಾಗಿರುವ ಅಂಬಾಟಿ ರಾಯುಡು ಇಂಜುರಿಯಿಂದ ಗುಣಮುಖರಾಗಿದ್ದು, ಮುಂದಿನ ಪಂದ್ಯಕ್ಕೆ ಲಭ್ಯರಿದ್ದಾರೆ
ರಾಯುಡು ಮಾತ್ರವಲ್ಲ, ಸಿಎಸ್ಕೆ ಆಲ್ರೌಂಡರ್ ಡ್ವೇನ್ ಬ್ರಾವೋ ಕೂಡ ಇಂಜುರಿಯಿಂದ ಗುಣಮುಖರಾಗಿದ್ದಾರೆ. ಇದೀಗ ಇಬ್ಬರು ಸ್ಟಾರ್ ಆಟಗಾರರು ಲಭ್ಯರಾಗಿದ್ದು, ಸಿಎಸ್ಕೆ ತಂಡದ ಸಮತೋಲನದಿಂದ ಕೂಡಿದೆ
ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಹಾಗೂ ಡ್ವೇನ್ ಬ್ರಾವೋ ಚೆನ್ನೈ ತಂಡಕ್ಕೆ ಬಲ ತುಂಬಲಿದ್ದಾರೆ. ಮುಂಬೈ ವಿರುದ್ದದ ಪಂದ್ಯದಲ್ಲಿ ಅಂಬಾಟಿ ರಾಯುಡು ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ.
2 ಮತ್ತು 3ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಸೋಲು ಕಂಡಿದೆ. ಇಷ್ಟೇ ಅಲ್ಲ ಬಲಿಷ್ಠ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಾರಿದೆ.
ಅಂಬಾಟಿ ರಾಯುಡು ಹಾಗೂ ಡ್ವೇನ್ ಬ್ರಾವೋ ಸಂಪೂರ್ಣ ಲಭ್ಯವಾಗಿದ್ದು, ಮುಂದಿನ ಪಂದ್ಯಗಳಿಗೆ ಲಭ್ಯರಿದ್ದಾರೆ ಎಂದು CSK CEO ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ.
ಅಂಬಾಟಿ ರಾಯುಡು ಹಾಗೂ ಡ್ವೇನ್ ಬ್ರಾವೋ ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಬ್ಬರು ಆಟಗಾರರು ಫಿಟ್ ಆಗಿರುವುದು ಚೆನ್ನೈ ತಂಡದ ಆತ್ಮವಿಶ್ವಾಸ ಹೆಚ್ಚಿದೆ ಎಂದು ವಿಶ್ವನಾಥನ್ ಹೇಳಿದ್ದಾರೆ.
ಅಕ್ಟೋಬರ್ 2 ರಂದು ಚೆನ್ನೈ ಸೂಪರ್ ಕಿಂಗ್ಸ್ , ಸನ್ರೈಸರ್ಸ್ಸಹೈದರಾಬಾದ್ ತಂಡವನ್ನು ಎದುರಿಸಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಚೆನ್ನೈ ಮತ್ತಷ್ಟು ಬಲಿಷ್ಠ ತಂಡವನ್ನು ಕಣಕ್ಕಿಳಿಸಲಿದೆ.