ರೈತರ ಮಾತುಕತೆಗೂ ಮುನ್ನ ಅಮಿತ್ ಶಾ ಜೊತೆಗೆ ಸಚಿವರ ತುರ್ತು ಸಭೆ; ಮಹತ್ವದ ನಿರ್ಧಾರ!
ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರ ಜೊತೆಗಿನ ಮಾತುಕತೆ ಆಹ್ವಾನ ಒಪ್ಪಿಕೊಂಡಿದ್ದಾರೆ. ನಾಳೆ 2 ಗಂಟೆಗೆ ಕೇಂದ್ರ ಸರ್ಕಾರ ರೈತರ ಜೊತೆ ಮಾತುಕತೆ ನಡೆಸಲಿದೆ. ಇದಕ್ಕೂ ಮುನ್ನ ಕೇಂದ್ರ ಕೃಷಿ ಸಚಿವ ಹಾಗೂ ರೈಲು ಸಚಿವ ದಿಢೀರ್ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳು ಕಳೆದಿದೆ. ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ.
ಕೇಂದ್ರ ಸರ್ಕಾರ ನೀಡಿದ 6ನೇ ಸುತ್ತಿನ ಮಾತುಕತೆಗೆ ರೈತರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ನಾಳೆ(ಡಿ.30) ರ 2 ಗಂಟೆಗೆ ಕೇಂದ್ರ ಸರ್ಕಾರ ಹಾಗೂ ರೈತರು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ರೈತರ ಮಾತುಕತೆಗೂ ಮುನ್ನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರೈಲ್ವೇ ಸಚಿವ ಪಿಯೂಷ್ ಗೋಯಲ್ ದಿಢೀರ್ ಆಗಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ.
ಅಮಿತ್ ಶಾ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ನರೇಂದ್ರ ಸಿಂಗ್ ತೋಮರ್ ಹಾಗೂ ಪಿಯೋಷ್ ಗೋಯಲ್ ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿ ರೈತರ ಜೊತೆ ಮಾತುಕತೆ ನಡೆಸಲಿದ್ದಾರೆ.
ರೈತರ ಬೇಡಿಕೆ, ಸರ್ಕಾರದ ನಿಲುವು ಹಾಗೂ ತಿದ್ದುಪಡಿ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ. ಅಮಿತ್ ಶಾ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
40 ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಜೊತೆ ಮುಕ್ತ ಮಾತುಕತೆಗೆ ತಯಾರಾಗಿದೆ. ಆದರೆ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾ ನಿರತ ರೈತರ ನಡುವಿನ 5 ಸುತ್ತಿನ ಮಾತುಕತಗಳು ವಿಫಲವಾಗಿದೆ. ರೈತರು ಪಟ್ಟು ಸಡಿಸಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಮಾತುಕತೆ ವಿಫಲವಾಗಿದೆ
ಪಂಜಾಬ್, ಹರ್ಯಾಣದಿಂದ ಆಗಮಿಸಿದ ರೈತರು ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನವೆಂಬರ್ 26 ರಿಂದ ಪ್ರತಿಭಟನೆ ಆರಂಭವಾಗಿದ್ದು, ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ.
ಪ್ರತಿಭಟನೆ ನಡೆಸುವೆ ಪ್ರಧಾನಿ ಮೋದಿ ರೈತರ ಜೊತೆಗಿನ ವರ್ಚುವಲ್ ಸಭೆಗಳಲ್ಲಿ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದ್ದರು. ಆದರೆ ರೈತರ ಗೊಂದಲ ಹೆಚ್ಚಾಯಿತೇ ಹೊರತು, ಕಡಿಮೆಯಾಗಿಲ್ಲ.