MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಸಲಿಂಗಿ ಮಗ, ಲಿಂಗ ಪರಿವರ್ತನೆ ಮಾಡಲು ಇಡೀ ಕುಟುಂಬವನ್ನು ಹತ್ಯೆಗೈದ!

ಸಲಿಂಗಿ ಮಗ, ಲಿಂಗ ಪರಿವರ್ತನೆ ಮಾಡಲು ಇಡೀ ಕುಟುಂಬವನ್ನು ಹತ್ಯೆಗೈದ!

ರೋಹ್ಟಕ್ ಕುಸ್ತಿಪಟು ಕುಟುಂಬ ಕೊಲೆ ಪ್ರಕರಣದಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ. 8 ದಿನಗಳ ಹಿಂದೆ ಆಗಸ್ಟ್ 27 ರಂದು ತನ್ನ ಸ್ವಂತ ಕುಟುಂಬದ 4 ಜನರನ್ನು ಕೊಲೆ ಮಾಡಿದ ಆರೋಪಿ, ಮಗ ಅಭಿಷೇಕ್ ರಿಮಾಂಡ್ ಇಂದಿಗೆ ಪೂರ್ಣಗೊಳ್ಳುತ್ತಿದೆ. ಆತನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆದರೆ ಆತ ಪೊಲೀಸರ ಮುಂದೆ ಬಹಿರಂಗಪಡಿಸಿದ ಮಾಹಿತಿ ಮಾತ್ರ ಬೆಚ್ಚಿ ಬೀಳಿಸುವಂತಹದ್ದು. ಆರೋಪಿ ಮಗ ಸಲಿಂಗಕಾಮಿಯಾಗಿದ್ದು, ನಾಲ್ಕು ವರ್ಷಗಳ ಕಾಲ ತನ್ನ ಲಿವ್-ಇನ್ ಸಂಗಾತಿಯೊಂದಿಗೆ ಸಂಬಂಧ ಹೊಂದಿದ್ದ. ಇಬ್ಬರ ನಡುವೆ ಸಂಬಂಧವಿತ್ತು. ಆದರೆ ಈ ವಿಚಾರದಲ್ಲಿ ಕುಟುಂಬ ಮಧ್ಯೆ ಬಂದಾಗ ಆತ ತನ್ನ ತಾಯಿ, ಸಹೋದರಿ, ತಂದೆ ಮತ್ತು ಅಜ್ಜಿಯನ್ನು ಕೊಂದಿದ್ದಾನೆ.

2 Min read
Author : Suvarna News
Published : Sep 06 2021, 05:20 PM IST
Share this Photo Gallery
  • FB
  • TW
  • Linkdin
  • Whatsapp
16
Crime

Crime

ಆರೋಪಿ ಅಭಿಷೇಕ್ ಅಲಿಯಾಸ್ ಮೋನುಗೆ ಕೇವಲ 20 ವರ್ಷ

ರೋಹ್ಟಕ್ ಪೊಲೀಸ್ ಕಸ್ಟಡಿಯ ಕೊನೆಯ ದಿನವಾದ ಭಾನುವಾರ, ಅಭಿಷೇಕ್ ಘಟನೆಯ ಸಂಪೂರ್ಣ ವಿವರ ನೀಡಿದ್ದಾನೆ. ತನ್ನ ಕುಟುಂಬ ಸದಸ್ಯರನ್ನು ಕೊಂದಿದ್ದು ಯಾಕೆ? ಎಂಬುವುದನ್ನು ತಿಳಿಸಿದ್ದಾನೆ. ತಾನು ತನ್ನ ಪುರುಷ ಪ್ರೇಮಿಯೊಂದಿಗೆ ಇರಲು ತನ್ನ ಲಿಂಗ ಬದಲಾಯಿಸಲು ಬಯಸಿದ್ದರೆ. ಇಂಟರ್ನೆಟ್‌ನಲ್ಲಿ ಇಂತಹ ಚಿಕಿತ್ಸಾಲಯಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರೆ, ಮಾತ್ರವಲ್ಲ, ಲಿಂಗ ಬದಲಾಯಿಸಲು ವಿದೇಶದಲ್ಲಿರುವ ತನ್ನ ಸ್ನೇಹಿತನೊಂದಿಗೆ ಓಡಿಹೋಗಲು ಯೋಜನೆ ರೂಪಿಸಿದ್ದ. ಇಬ್ಬರೂ ಮದುವೆಯಾಗಲು ಬಯಸಿದ್ದರು, ಇಬ್ಬರೂ ಒಟ್ಟಿಗೆ ಬದುಕಲು ಮತ್ತು ಸಾಯುವ ಪ್ರತಿಜ್ಞೆ ಮಾಡಿದ್ದರು.

26

ಆರೋಪಿ ಅಭಿಷೇಕ್ ಲಿಂಗ ಬದಲಿಸಲು ಮತ್ತು ಮದುವೆಯಾಗಲು ಯೋಜಿಸಿದ್ದ. ಆದರೆ ಅವರ ಕುಟುಂಬ ಸದಸ್ಯರು ಇದನ್ನು ವಿರೋಧಿಸಿದ್ದರು. ಇದಷ್ಟೇ ಅಲ್ಲದೇ, ಆರೋಪಿಗಳು ಹಲವು ದಿನದಿಂದ ಸುಮಾರು 5 ಲಕ್ಷ ರೂಪಾಯಿ ಕೊಡುವಂತೆ ಕುಟುಂಬ ಮಂದಿಗೆ ಬೇಡಿಕೆ ಇಟ್ಟಿದ್ದರು. ಆದರೆ ತಂದೆ ಕೊಡಲು ನಿರಾಕರಿಸಿದ್ದರು. ಇದರ ನಂತರ ಆರೋಪಿಗಳು ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಕೊಲ್ಲಲು ಭೀಕರ ಸಂಚು ರೂಪಿಸಿದ್ದರು.

36

ಇದಷ್ಟೇ ಅಲ್ಲ, ಆರೋಪಿ ಮತ್ತು ಆತನ ಸಂಗಾತಿ ಕಾರ್ತಿಕ್ ಲತ್ವಾಲ್ ಇಬ್ಬರ ಅನೈತಿಕ ವಿಡಿಯೋಗಳು ಕೂಡ ವೈರಲ್ ಆಗಿವೆ. ತನಿಖೆ ವೇಳೆ ತಮ್ಮಿಬ್ಬರ ಸ್ನೇಹ ನಾಲ್ಕು ವರ್ಷ ಹಳೆಯದ್ದು, ದೆಹಲಿಯಲ್ಲಿ ಕ್ಯಾಬಿನ್ ಕ್ರೂ ಅಧ್ಯಯನದ ವೇಳೆ ಪರಸ್ಪರ ಪರಿಚಯವಾಗಿತ್ತು ಎಂದಿದ್ದಾರೆ. ಇಬ್ಬರೂ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು, ಅವರ ನಡುವೆ ಗಂಡ ಮತ್ತು ಹೆಂಡತಿಯಂತಹ ಸಂಬಂಧವಿತ್ತು ಎಂದೂ ಬಾಯ್ಬಿಟ್ಟಿದ್ದಾರೆ.

46

ಎಲ್ಲರನ್ನೂ ಗುಂಡು ಹಾರಿಸಿ ಕೊಂದ ಮಗ

ಕುಟುಂಬ ಸದಸ್ಯರನ್ನು ಕೊಲ್ಲುವ ಯೋಜನೆ ರೂಪಿಸಲು ಕ್ರೈಂ ಸೀರೀಸ್ ನೊಡುತ್ತಿದ್ದೆ. ಅವಕಾಶವನ್ನು ನೋಡಿ, ಆಗಸ್ಟ್ 27 ರಂದು, ತಾಯಿ ಬಬ್ಲಿ, ಸಹೋದರಿ ತಮನ್ನಾ, ತಂದೆ ಪ್ರದೀಪ್ ಅಲಿಯಾಸ್ ಬಬ್ಲು ಪೆಹೆಲ್ವಾನ್ ಮತ್ತು ಅಜ್ಜಿ ರೋಶ್ನಿ ಅವರ ತಲೆಗೆ ಗುಂಡು ಹಾರಿಸಿದೆ. ದರೋಡೆ ಮಾಡಲು ಬಂದವರು ಕೊಲೆ ಮಾಡಿದ್ದಾರೆಂಬ ಅನುಮಾನ ಹುಟ್ಟಿಕೊಳ್ಳಲು ಎಲ್ಲರ ಮೈಮೇಲಿದ್ದ ಆಭರಣ ತೆಗೆದೆವು ಎಂದಿದ್ದಾರೆ. ಇನ್ನು ಅಪರಾಧ ಕೃತ್ಯವೆಸಗಿದ ಬಳಿಕ ಆರೋಪಿ ಸ್ಥಳದಿಂದ ಓಡಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಸದ್ಯ ಅಲ್ಲಿನ ಸಿಸಿಟಿವಿ ಪೊಲೀಸರ ಕೈಯಲ್ಲಿದೆ. ಅದರ ಆಧಾರದ ಮೇಲೆ ಪೊಲೀಸರು ಇಡೀ ಪ್ರಕರಣವನ್ನು ಬೇಧಿಸಿದ್ದಾರೆ. 
 

56

ಹತ್ಯೆ ನಡೆಸಿ ಹೋಟೆಲ್‌ಗೆ ಬಂದಿದ್ದ

ಅಚ್ಚರಿ ಎಂದರೆ ತನ್ನ ಇಡೀ ಕುಟುಂಬವನ್ನು ಯಾರಿಗಾಗಿ ಅಭಿಷೇಕ್ ಕೊಂದಿದ್ದನೋ, ಆ ತನ್ನ ಪುರುಷ ಪ್ರೇಮಿಗೆ ಘಟನೆಯ ಬಗ್ಗೆ ಏನೂ ತಿಳಿಸಿರಲಿಲ್ಲ. ಈ ಕೊಲೆಗಳ ಬಗ್ಗೆ ಆರೋಪಿ ತನ್ನ ಸಹಚರನಿಗೆ ಏನನ್ನೂ ಹೇಳಿಲ್ಲ. ಪ್ರಸ್ತುತ ಪೊಲೀಸರು ಇಡೀ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ. ಈ ಹತ್ಯೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

66

ವಿಚಾರಣೆಯ ಸಮಯದಲ್ಲಿ, ಆರೋಪಿ ತನ್ನ ಕುಟುಂಬ ಸದಸ್ಯರನ್ನು ಕೊಂದಿರುವುದಕ್ಕೆ ತನಗೆ ಯಾವುದೇ ವಿಷಾದವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ನನಗೆ ಬೇಕಾಗಿರುವುದು ನನ್ನ ಜೀವನ, ನಾನು ಅವನ ಬಳಿಗೆ ಹೋಗಬೇಕು, ಅವನು ನನ್ನ ಜೀವನ ಎಂದಿದ್ದಾನೆ. ಪೋಲಿಸರು ಅವನನ್ನು ಥಳಿಸಿದರೂ ಆತ ಕಣ್ಣೀರು ಹಾಕಿಲ್ಲ. ಆದರೆ ತನ್ನ ಗೆಳೆಯನನ್ನು ನೆನಪಿಸಿಕೊಂಡು ಆತ ಬೇಕೆಂದು ಕನವರಿಸುತ್ತಿರುತ್ತಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಚಿನ್ನ- ಬೆಳ್ಳಿಯ ಬೆಲೆ ಬಗ್ಗೆ ಸಚಿವೆ ನಿರ್ಮಲಾರಿಂದ ಭರ್ಜರಿ ಗುಡ್ ನ್ಯೂಸ್ : ಆತಂಕ ಪಡಬೇಡಿ
Recommended image2
ಕೈ ಬನಿಯನ್‌ ಪ್ರೊಟೆಸ್ಟ್‌ನಿಂದ ಇಂಡಿಯಾ ಕೂಟದಲ್ಲಿ ಒಡಕು!
Recommended image3
ದೇಶದ ಮೊದಲ ಉಗ್ರ ವಿರೋಧಿ ನೀತಿ ಪ್ರಹಾರ್‌ ಬಿಡುಗಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved