ಮದುವೆಯಾದ ಎರಡೇ ತಾಸಿನಲ್ಲಿ ಮುರಿದು ಬಿತ್ತು ಏಳು ಜನ್ಮದ ನಂಟು, ಹೊರಟೇ ಹೋದಳು ವಧು!
ಮದುವೆಯಾಗಿ ಕೇವಲ ಎರಡೇ ತಾಸಾಗಿತ್ತು. ವಧು ಗಂಡನ ಮನೆಗೆ ತೆರಳಲು ಕಾರಿನಲ್ಲಿ ಕುಳಿತು ಹಳ್ಳಿಯ ಗಡಿಯಲ್ಲಿ ತನ್ನ ಗಂಡನಿಗಾಗಿ ಕಾಯುತ್ತಿದ್ದಳು. ಆದರೆ ಟಷ್ರಲ್ಲೇ ಆಕೆಗೆ ಸುದ್ದಿಯೊಂದು ಸಿಕ್ಕಿದ್ದು, ಇದಾದ ಬಳಿಕ ಅವರ ಮದುವೆಯೇ ಮುರಿದು ಬಿದ್ದಿದೆ. ಹಲವಾರು ಗಂಟೆ ಪಂಚಾಯತಿ ನಡೆದರೂ ಯಾವುದೇ ಪ್ರಯೋಜನ ಆಗಲಿಲ್ಲ. ಅಂತಿಮವಾಗಿ ಪೊಲೀಸರ ಸಮ್ಮುಖದಲ್ಲಿ ವರನ ಕಡೆಯವರು ವಧುವಿನ ಎಲ್ಲಾ ವಸ್ತುಗಳನ್ನು ಹಿಂತಿರುಗಿಸಿದ್ದಾರೆ. ಈ ಮೂಲಕ ವಧುವಿಲ್ಲದೇ ಗಂಡಿನ ಕಡೆಯವರು ತೆರಳಿದ್ದಾರೆ. ಇದು ಗೋರಖ್ಪುರದ ಹೆಮ್ಚಾಪರ್ನಲ್ಲಿ ನಡೆದಿದೆ.

<p>ಹೆಮ್ಚಾಪರ್ನ ಭುವಾಲ್ ನಿಶಾದ್ ಮನೆಗೆ ಹೈದರ್ಗಂಜ್ನಿಂದ ಮದುವೆ ದಿಬ್ಬಣ ಬಂದಿತ್ತು. ಮದುವೆಯೂ ಅದ್ಧೂರಿಯಾಗಿ ನಡೆದಿತ್ತು ಬೆಳಗ್ಗೆ ವಧು ತನ್ನ ಗಂಡನ ಮನೆಗೆ ತೆರಳಲು ಸಜ್ಜಾಗಿದ್ದಳು.</p>
ಹೆಮ್ಚಾಪರ್ನ ಭುವಾಲ್ ನಿಶಾದ್ ಮನೆಗೆ ಹೈದರ್ಗಂಜ್ನಿಂದ ಮದುವೆ ದಿಬ್ಬಣ ಬಂದಿತ್ತು. ಮದುವೆಯೂ ಅದ್ಧೂರಿಯಾಗಿ ನಡೆದಿತ್ತು ಬೆಳಗ್ಗೆ ವಧು ತನ್ನ ಗಂಡನ ಮನೆಗೆ ತೆರಳಲು ಸಜ್ಜಾಗಿದ್ದಳು.
<p>ಹೀಗಿರುವಾಗ ವಧು ಹಳ್ಳಿಯ ಹೊರಗೆ ತೋಟವೊಂದರಲ್ಲಿ ಕಾರಿನಲ್ಲಿ ಕುಳಿತು ತನ್ನ ಗಂಡನಿಗಾಗಿ ಕಾಯುತ್ತಿದ್ದಳು. ಆದರೆ ಅತ್ತ ವರ ಪರ್ಛನ್ ಹೆಸರಿನ ಒಂದು ಶಾಸ್ತ್ರದಲ್ಲಿ ಭಾಗಿಯಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾನೆ. ಇದಾದ ಬಳಿಕ ಪರಿಸ್ಥಿತು ಬಿಗಡಾಯಿಸಿದೆ.</p>
ಹೀಗಿರುವಾಗ ವಧು ಹಳ್ಳಿಯ ಹೊರಗೆ ತೋಟವೊಂದರಲ್ಲಿ ಕಾರಿನಲ್ಲಿ ಕುಳಿತು ತನ್ನ ಗಂಡನಿಗಾಗಿ ಕಾಯುತ್ತಿದ್ದಳು. ಆದರೆ ಅತ್ತ ವರ ಪರ್ಛನ್ ಹೆಸರಿನ ಒಂದು ಶಾಸ್ತ್ರದಲ್ಲಿ ಭಾಗಿಯಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾನೆ. ಇದಾದ ಬಳಿಕ ಪರಿಸ್ಥಿತು ಬಿಗಡಾಯಿಸಿದೆ.
<p><br />ಯುವತಿ ಕಡೆಯವರು ಹುಡುಗನಿಗೆ ಆರೋಗ್ಯ ಸಮಸ್ಯೆ ಇದೆ ಎಂಬ ಅನುಮಾನದ ಮೇರೆಗೆ ಆಕೆಯನ್ನು ಕಳುಹಿಸಿಕೊಡಲು ಹಿಂದೇಟು ಹಾಕಿದ್ದಾರೆ. ಹೀಗಿರುವಾಗ ಜಗಳವೇರ್ಪಟ್ಟಿದ್ದು, ಯುವತಿ ಕಡೆಯವರು ಹುಡುಗನ ಬಳಿ ತಾವು ಕೊಟ್ಟ ಎಲ್ಲಾ ಸಾಮಾಗ್ರಿಗಳನ್ನು ಹಿಂತಿರುಗಿಸುವಂತೆ ಬೇಡಿಕೆ ಇಟ್ಟಿದ್ದಾರೆ.</p>
ಯುವತಿ ಕಡೆಯವರು ಹುಡುಗನಿಗೆ ಆರೋಗ್ಯ ಸಮಸ್ಯೆ ಇದೆ ಎಂಬ ಅನುಮಾನದ ಮೇರೆಗೆ ಆಕೆಯನ್ನು ಕಳುಹಿಸಿಕೊಡಲು ಹಿಂದೇಟು ಹಾಕಿದ್ದಾರೆ. ಹೀಗಿರುವಾಗ ಜಗಳವೇರ್ಪಟ್ಟಿದ್ದು, ಯುವತಿ ಕಡೆಯವರು ಹುಡುಗನ ಬಳಿ ತಾವು ಕೊಟ್ಟ ಎಲ್ಲಾ ಸಾಮಾಗ್ರಿಗಳನ್ನು ಹಿಂತಿರುಗಿಸುವಂತೆ ಬೇಡಿಕೆ ಇಟ್ಟಿದ್ದಾರೆ.
<p>ಇದಾದ ಬಳಿಕ ನಡೆದ ರಾಜಿ ಸಂಧಾನದ ವೇಳೆಡ ವರನ ಕಡೆಯವರು ವೈದ್ಯಕೀಯ ಪರೀಕ್ಷೆ ಬೇಕಾದರೂ ನಡೆಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ವಧುವಿನ ಕಡೆಯವರು ಇದ್ಯಾವುದಕ್ಕೂ ಸಿದ್ಧರಿರಲಿಲ್ಲ.</p>
ಇದಾದ ಬಳಿಕ ನಡೆದ ರಾಜಿ ಸಂಧಾನದ ವೇಳೆಡ ವರನ ಕಡೆಯವರು ವೈದ್ಯಕೀಯ ಪರೀಕ್ಷೆ ಬೇಕಾದರೂ ನಡೆಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ವಧುವಿನ ಕಡೆಯವರು ಇದ್ಯಾವುದಕ್ಕೂ ಸಿದ್ಧರಿರಲಿಲ್ಲ.
<p>ಘಟನೆಯ ಮಾಹಿತಿ ಪಡೆದು ಪೊಲೀಸರೂ ಸ್ಥಳಕ್ಕಾಗಮಿಸಿದ್ದದಾರೆ. ಆದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಯುವ ಯುವತಿ ಇಬ್ಬರೂ ಸಂಬಂಧ ಮುರಿದುಕೊಂಡಿದ್ದಾರೆ.</p>
ಘಟನೆಯ ಮಾಹಿತಿ ಪಡೆದು ಪೊಲೀಸರೂ ಸ್ಥಳಕ್ಕಾಗಮಿಸಿದ್ದದಾರೆ. ಆದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಯುವ ಯುವತಿ ಇಬ್ಬರೂ ಸಂಬಂಧ ಮುರಿದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ