ಶ್ರೀರಾಮ ಅಯೋಧ್ಯೆಗೆ ಬರುವ ಮುನ್ನ ದಕ್ಷಿಣದ ಧರ್ಮಕ್ಷೇತ್ರಗಳಲ್ಲಿ ಮೋದಿಗೆ ಭವ್ಯ ಸ್ವಾಗತ!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ತಮಿಳುನಾಡಿನಲ್ಲಿ ಶನಿವಾರ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು. ಅವರಿಗೆ ತಮಿಳುನಾಡಿನಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ.
ತಮಿಳುನಾಡಿನ ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಪ್ರಧಾನಿ ಮೋದಿ ಅವರಿಗೆ ವೃದ್ಧ ಮಹಿಳೆಯೊಬ್ಬರು ತಮ್ಮ ಮನೆಯಿಂದಲೇ ಕೈ ಬೀಸುತ್ತಿರುವ ದೃಶ್ಯ.
![article_image2](https://static-ai.asianetnews.com/images/01hmk3fw9sd6ssbpg7mtkptawc/whatsapp-image-2024-01-20-at-2-22-39-pm--1-_300x338xt.jpg)
ತಮಿಳುನಾಡಿನ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಬೀಸಿ ಭರ್ಜರಿ ಸ್ವಾಗತ ನೀಡಿದ ಮಹಿಳೆಯರು.
ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಭಾಗಿಯಾಗುವ ನಿಟ್ಟಿನಲ್ಲಿ ಅನುಷ್ಟಾನದಲ್ಲಿರುವ ಪ್ರಧಾನಿ ಮೋದಿಗೆ ಮಹಿಳೆಯ ಸ್ವಾಗತ
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಕಂಬ ರಾಮಾಯಣಂ ಎಂದೂ ಕರೆಯಲ್ಪಡುವ ರಾಮಾವತಾರಂ ತಮಿಳು ಮಹಾಕಾವ್ಯದ ಪದ್ಯಗಳನ್ನು ಆಲಿಸಿದರು
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನದ ಆನೆಯಿಂದ ಆಶೀರ್ವಾದ ಪಡೆದುಕೊಂಡರು.
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ. ಇದೇ ದೇವಸ್ಥಾನದಲ್ಲಿ ಮೋದಿ ಕಂಬ ರಾಮಾಯಣವನ್ನು ಆಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನದ ಮಾರ್ಗದಲ್ಲಿ ಸಾಗುತ್ತಿದ್ದಂತೆ, ಅಕ್ಕಪಕ್ಕದಲ್ಲಿ ಅವರನ್ನು ನೋಡಲು ಜಮಾಯಿಸಿದ್ದ ಜನರು.
ಪ್ರಧಾನಿ ನರೇಂದ್ರ ಮೋದಿ ಅವರು ಸಾಗುತ್ತಿದ್ದಂತೆ ಅಕ್ಕಪಕ್ಕದಲ್ಲಿ ಜಮಾಯಿಸಿದ್ದ ಮಕ್ಕಳು ಹೂಗಳನ್ನು ಎಸೆದು ಭರ್ಜರಿ ಸ್ವಾಗತ ಕೋರಿದರು.
ತಿರುಚನಾಪಳ್ಳಿಯ ಶ್ರೀ ರಂಗನಾಥ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಸಾಗುವ ವೇಳೆ ಅವರನ್ನು ನೋಡಲು ಉತ್ಸಾಹದಿಂದ ನಿಂತಿದ್ದ ಮಹಿಳೆಯರು
ತನ್ನ ಮೊಮ್ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೋರಿಸುತ್ತಿರುವ ವೃದ್ಧ. ಈ ದೈಶ್ಯ ಕಂಡಿದ್ದು ತಮಿಳುನಾಡಿನಲ್ಲಿ.