ಬಿಜೆಪಿ ಭೀಷ್ಮನಿಗೆ ಜನ್ಮದಿನ, ಶುಭಕೋರಿದ ಶಿಷ್ಯಕೋಟಿ
ನವದೆಹಲಿ(ನ. 08) ಬಿಜೆಪಿ ಹಿರಿಯ ನಾಯಕ ನಾಯಕಎಲ್ ಕೆ ಅಡ್ವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರಯ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಡ್ವಾಣಿ ಅವರ ಬಳಿಯೇ ಕೇಕ್ ಕಟ್ ಮಾಡಿಸಿ ಮೋದಿ ಶುಭ ಹಾರೈಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿದ್ದ ಅಡ್ವಾಣಿ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪಕ್ಷವನ್ನು ಜನರ ಬಳಿಗೆ ಕೊಂಡೊಯ್ದಿದ್ದು ಅಡ್ವಾಣಿ ಎಂದು ಮೋದಿ ವ್ಯಾಖ್ಯಾನ ಮಾಡಿದ್ದಾರೆ.
ವಾಜಪೇಯಿ ಮತ್ತು ಅಡ್ವಾಣಿ ಬಿಜೆಪಿಯ ತತ್ವ ಮತ್ತು ಸಿದ್ಧಾಂತಗಳನ್ನು ದೇಶದ ಮೂಲೆ ಮೂಲೆಗೂ ಮುಟ್ಟಿಸಿದರು.
ಬಿಜೆಪಿಯ ಭೀಷ್ಮ ಎಂದೇ ಅಡ್ವಾಣಿ ದೇಶಕ್ಕೆ ಪರಿಚಿತರು.
ರಾಮಮಂದಿರ ನಿರ್ಮಾಣದ ಹಿಂದೆ ಇರುವ ಅಡ್ವಾಣಿ ಶ್ರಮವನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಅಡ್ವಾಣಿ ಬಿಜೆಪಿಯ ದೀರ್ಘಕಾಲ ಸೇವೆ ಸಲ್ಲಿಸಿದ ಅಧ್ಯಕ್ಷರಾಗಿದ್ದು, ಬಿಜೆಪಿ ರಾಷ್ಟ್ರರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆಯಲು ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಮೋದಿ ಸ್ಮರಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿಂದತೇ ರಾಜ್ಯ ನಾಯಕರು ಅಡ್ವಾಣಿ ಅವರಿಗೆ ಶುಭ ಕೋರಿದ್ದಾರೆ.