1500 ಕಿ.ಮೀ. ದೂರ ನಡೆದು ಬಂದ ವ್ಯಕ್ತಿ ಕ್ವಾರಂಟೈನಲ್ಲಿ ಸಾವು!
ಕೊರೋನಾ ವೈರಸ್ ಲಾಕ್ಡೌನ್ ಕಾರಣದಿಂದ ದುಡಿಮೆ ಇಲ್ಲದೆ ಕಂಗೆಟ್ಟು ಮುಂಬೈನಿಂದ ಉತ್ತರ ಪ್ರದೇಶದ ಶ್ರಾವಸ್ತಿಗೆ 15 ದಿನಗಳ ಕಾಲ ನಡೆದೇ ಸಾಗಿದ್ದ ಇನ್ಸಾಫ್ ಆಲಿ ಎಂಬಾತ ತನ್ನೂರು ತಲುಪಿ ಕ್ವಾರಂಟೈನ್ಗೆ ದಾಖಲಾದ ದಿನವೇ ಆಯಾಸ ಮತ್ತು ನಿರ್ಜಲೀಕರಣದಿಂದ ಮೃತಪಟ್ಟದಾರುಣ ಘಟನೆ ನಡೆದಿದೆ.
ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಕಳೆದೊಂದು ತಿಂಗಳಿನಿಂದ ಲಾಕ್ಡೌನ್ ಹೇರಲಾಗಿದೆ.
ಹೀಗಿರುವಾಗ ಅನೇಕ ಮಂದಿ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.
ಅತ್ತ ಹಣವಿಲ್ಲದೆ, ಇತ್ತ ಹಸಿವು ತಾಳಲಾರದೆ ಕಾರ್ಮಿಕರು ಕಂಗಾಲಾಗಿದ್ದಾರೆ.
ಹೀಗಾಗಿ ಬೇರೆ ದಾರಿ ಕಾಣದ ಮಂದಿ ತಮ್ಮ ಊರಿನತ್ತ ಪಯಣ ಬೆಳೆಸಿದ್ದಾರೆ.
ಸಾರಿಗೆ ವ್ಯವಸ್ಥೆ ಇಲ್ಲದೇ, ಕಾಲ್ನಡಿಗೆಯಲ್ಲೇ ಕಿಲೋ ಮೀಟರ್ಗಟ್ಟಲೇ ನಡೆದುಕೊಂಡೇ ತಮ್ಮ ಮನೆಯತ್ತ ತೆರಳುತ್ತಿದ್ದಾರೆ.
ಕೊರೋನಾ ವೈರಸ್ ಲಾಕ್ಡೌನ್ ಕಾರಣದಿಂದ ದುಡಿಮೆ ಇಲ್ಲದೆ ಕಂಗೆಟ್ಟು ಮುಂಬೈನಿಂದ ಉತ್ತರ ಪ್ರದೇಶದ ಶ್ರಾವಸ್ತಿಗೆ 15 ದಿನಗಳ ಕಾಲ ನಡೆದೇ ಸಾಗಿದ್ದ ಇನ್ಸಾಫ್ ಆಲಿ ಎಂಬಾತ ತನ್ನೂರು ತಲುಪಿ ಕ್ವಾರಂಟೈನ್ಗೆ ದಾಖಲಾದ ದಿನವೇ ಆಯಾಸ ಮತ್ತು ನಿರ್ಜಲೀಕರಣದಿಂದ ಮೃತಪಟ್ಟದಾರುಣ ಘಟನೆ ನಡೆದಿದೆ.
They were started walking to 400 and 800 kilometers home with burden on head, child in lap and without food or water.
ಮುಂಬೈನ ವಾಸೈನಲ್ಲಿ ಕಾರ್ಮಿಕನಾಗಿದ್ದ ಆಲಿ, ಲಾಕ್ಡೌನ್ ಕಾರಣದಿಂದ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಸುಮಾರು 1500 ಕಿ.ಮೀ. ದೂರವನ್ನು ಸರಿಯಾಗಿ ಅನ್ನ ನೀರೂ ಸೇವಿಸದೆ ನಡೆದೇ ಸೋಮವಾರ ತಲುಪಿದ್ದಾನೆ.
ಸ್ವಗ್ರಾಮಕ್ಕೆ ತಲುಪುತ್ತಿದ್ದಂತೆಯೇ ಕಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ.
ಆದರೆ ಕೆಲವೇ ಗಂಟೆಗಳಲ್ಲಿ ಆಯಾಸದಿಂದ ಬಳಲಿ ಆಲಿ ಮೃತಪಟ್ಟಿದ್ದಾನೆ.
ಕೊರೋನಾ ವೈರಸ್ ಪರೀಕ್ಷೆಯ ಫಲಿತಾಂಶ ಬಂದ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.