MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಸಿಎಂ ಯೋಗಿ ಆದಿತ್ಯನಾಥ್ ರೀತಿ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕಿ ಅಳುವಂತೆ ಮಾಡಿದ ಯುವಕ: ವೀಡಿಯೋ

ಸಿಎಂ ಯೋಗಿ ಆದಿತ್ಯನಾಥ್ ರೀತಿ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕಿ ಅಳುವಂತೆ ಮಾಡಿದ ಯುವಕ: ವೀಡಿಯೋ

ಮಿಮಿಕ್ರಿ ಕಲಾವಿದರೊಬ್ಬರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಧ್ವನಿ ನಕಲು ಮಾಡಿ ಕರ್ತವ್ಯಲೋಪ ಎಸಗಿದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡಿದ್ದು,  ಈ ಘಟನೆಯ ಆಡಿಯೋ ವೈರಲ್ ಆಗಿದೆ.

3 Min read
Anusha Kb
Published : Dec 29 2025, 04:27 PM IST
Share this Photo Gallery
  • FB
  • TW
  • Linkdin
  • Whatsapp
18
ಯೋಗಿ ಆದಿತ್ಯನಾಥ್ ಧ್ವನಿ ಮಿಮಿಕ್ರಿ ಮಾಡಿದ ಯುವಕ
Image Credit : X@myogioffice

ಯೋಗಿ ಆದಿತ್ಯನಾಥ್ ಧ್ವನಿ ಮಿಮಿಕ್ರಿ ಮಾಡಿದ ಯುವಕ

ಮಿಮಿಕ್ರಿ ಕಲಾವಿದನೋರ್ವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಧ್ವನಿಯನ್ನೇ ನಕಲಿ ಮಾಡಿ ಮಾತನಾಡಿ, ತಪ್ಪು ಮಾಡಿದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದ್ದು, ಈ ಘಟನೆಯ ವೀಡಿಯೋ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಯುವಕ ತನ್ನ ಈ ಕಲಾ ಪ್ರತಿಭೆಯನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಸಿಎಂ ಯೋಗಿ ಆದಿತ್ಯನಾಥ್ ಅವರ ಧ್ವನಿಯನ್ನೇ ನಕಲು ಮಾಡಿದ ಯುವಕ ಸರ್ಕಾರಿ ಶಿಕ್ಷಕಿಗೆ ಹೇಳಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ...

28
ಶಾಲೆಗೆ ತಡವಾಗಿ ಬರುತ್ತಿದ್ದ ಶಿಕ್ಷಕಿಗೆ ಕ್ಲಾಸ್
Image Credit : Asianet News

ಶಾಲೆಗೆ ತಡವಾಗಿ ಬರುತ್ತಿದ್ದ ಶಿಕ್ಷಕಿಗೆ ಕ್ಲಾಸ್

ವೀಡಿಯೋದ ಆರಂಭದಲ್ಲಿ ಕರೆ ಸ್ವೀಕರಿಸಿದ ಮಹಿಳೆ ಯಾರು ಮಾತನಾಡುವುದು ಎಂದು ಕೇಳುತ್ತಾರೆ. ಈ ವೇಳೆ ಯುವಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಆ ಯುವಕ ತಾನು ಮುಖ್ಯಮಂತ್ರಿ ಎನ್ನುತ್ತಿದ್ದಂತೆ ಆ ಬದಿಯಿಂದ ಮಾತನಾಡುತ್ತಿದ್ದ ಶಿಕ್ಷಕಿ, ನಡುಗುವ ಸ್ವರದಿಂದಲೇ ನನ್ನಿಂದ ತಪ್ಪಾಯ್ತು ಸರ್ ಕ್ಷಮಿಸಿ ಬಿಡಿ ಎಂದು ಗೋಗರೆಯಲು ಶುರು ಮಾಡುತ್ತಾರೆ.

Related Articles

Related image1
ಹತ್ತು ಕೆಜಿ ಅಕ್ಕಿ ಬೇಕಾ, ಬೇಡಾವಾ: ಸಿದ್ದರಾಮಯ್ಯ ಸ್ಟೈಲ್‌ನಲ್ಲಿ ಮಿಮಿಕ್ರಿ ಮಾಡಿದ ಕೇಂದ್ರ ಸಚಿವ ಜೋಶಿ
Related image2
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಿಮಿಕ್ರಿ ಆರ್ಟಿಸ್ಟ್‌, ವಾಯ್ಸ್‌ ಮಿಮಿಕ್‌ ಮಾಡಿದ್ದಕ್ಕೆ ಜೈಲಿಗೂ ಹೋಗಿ ಬಂದ್ರು!
38
ಕ್ಷಮೆ ಕೇಳಿದ ಶಿಕ್ಷಕಿ
Image Credit : Asianet News

ಕ್ಷಮೆ ಕೇಳಿದ ಶಿಕ್ಷಕಿ

ಆಕೆಯ ಮಾತಿಗೆ ಪ್ರತಿಕ್ರಿಯಿಸಿದ ಯುವಕ ಹೌದು ತಪ್ಪು ನಿಮ್ಮಿಂದ ತುಂಬಾನೇ ಆಗಿದೆ ಎಂದು ಆ ಶಿಕ್ಷಕಿಯನ್ನು ಮತ್ತಷ್ಟು ಹೆದರಿಸಿದ್ದಾನೆ. ಅದಕ್ಕೆ ಆ ಶಿಕ್ಷಕಿ ಇಲ್ಲ, ಸರ್ ನನ್ನಿಂದ ದೊಡ್ಡ ತಪ್ಪಾಯ್ತು ದಯವಿಟ್ಟು ಕ್ಷಮಿಸಿ ಬಿಡಿ ನನ್ನನ್ನು ಎಂದು ಅಳುವುದಕ್ಕೆ ಶುರು ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಮಾತನಾಡುವ ಯುವಕ ನಾನು ನಿವೊಬ್ಬರು ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಮಾತನ್ನು ಕೇಳುತ್ತಿದ್ದೇನೆ. ಆದರೆ ನೀವು ಗಡಿ ಮೀರಿದ್ದೀರಿ ಎಂದು ಮತ್ತಷ್ಟು ಭಯಪಡಿಸಿದ್ದಾರೆ.

48
ಯುವಕನ ಈ ವೀಡಿಯೋ ಭಾರಿ ವೈರಲ್
Image Credit : Asianet News

ಯುವಕನ ಈ ವೀಡಿಯೋ ಭಾರಿ ವೈರಲ್

ಅದಕ್ಕೆ ಆ ಕಡೆಯಿಂದ ಮಾತನಾಡಿದ ಶಿಕ್ಷಕಿ, ನನಗೆ ತಿಳಿದಿರಲಿಲ್ಲ, ಸರ್ ಸರ್ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಸರ್ ಎಂದು ಗೋಗರೆಯಲು ಶುರು ಮಾಡುತ್ತಾರೆ. ಈಗ ಆ ಯುವಕ ನಿಮಗೇನಾಯ್ತು ಎಂದು ಕೇಳಿದಾಗ ಸ್ವಲ್ಪ ತಪ್ಪಾಯ್ತು ನನ್ನಿಂದ ಎಂದು ಆ ಮಹಿಳೆ ಹೇಳುತ್ತಾರೆ. ನಿಮ್ಮಂತಹ ಜನರ ಕಾರಣದಿಂದಾಗಿ ನಮ್ಮ ಮಕ್ಕಳಿಗೆ ಸರಿಯಾಗಿ ಓದುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿಮಗೆ ಮಕ್ಕಳ ಭವಿಷ್ಯದ ಬಗ್ಗೆ ಅರಿವಿಲ್ಲ. ಆದರೆ ನೀವು ಸ್ಯಾಲರಿ ಹೇಗೆ ತೆಗೆದುಕೊಳ್ಳುತ್ತಿರಿ ಎಂದರೆ ನೀವು ಬಹಳ ದೊಡ್ಡ ಅಧಿಕಾರಿ ಆಗಿದ್ದೀರಿ ಎಂಬಷ್ಟು ಸ್ಯಾಲರಿ ಪಡೆಯುತ್ತೀರಿ. ಯಾಕೆ ಹೀಗೆ ನಿಮ್ಮನ್ನು ನೀವು ಏನೆಂದು ತಿಳಿದಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಆ ಮಹಿಳೆ ಸರ್ ಸಾರಿ ಸಾರಿ ಎಂದು ಮತ್ತೆ ಕ್ಷಮೆ ಕೇಳುತ್ತಾರೆ.

58
ಯೋಗಿ ಆದಿತ್ಯನಾಥ್ ರೀತಿಯೇ ಧ್ವನಿ
Image Credit : Asianet News

ಯೋಗಿ ಆದಿತ್ಯನಾಥ್ ರೀತಿಯೇ ಧ್ವನಿ

ನೀವು ಈ ರೀತಿ ಎಲ್ಲಾ ಮಾಡುತ್ತೀರಿ, ಆದರೆ ನಾವು ಜನರಿಂದ ಮಾತು ಕೇಳಬೇಕು, ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಹೀಗೆಲ್ಲಾ ಆಗುತ್ತಿದೆ ಎಂದು ಜನರು ನಮಗೆ ಕೇಳುತ್ತಿದ್ದಾರೆ ಎಂದು ಆ ಯುವಕ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ, ಮತ್ತೆ ಸರ್ ನನ್ನಿಂದ ತುಂಬಾ ದೊಡ್ಡ ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಕೇಳುತ್ತಾರೆ. ಈ ವೇಳೆ ಯುವಕ ಸರಿ ನೀವಿನ್ನು ಅಳಬೇಡಿ ನಿಮ್ಮನ್ನು ಓರ್ವ ಮಹಿಳೆ ಎಂದು ಸುಮ್ಮನೆ ಬಿಟ್ಟಿದ್ದೇನೆ.

68
ಯೋಗಿ ಆದಿತ್ಯನಾಥ್ ರೀತಿ ಅವಾಜ್
Image Credit : Asianet News

ಯೋಗಿ ಆದಿತ್ಯನಾಥ್ ರೀತಿ ಅವಾಜ್

ನೀವು ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಿ. ಆದರೆ ನಮಗೆ ಪುರುಷರು ಮಹಿಳೆಯರು ಎಲ್ಲರೂ ಒಂದೇ. ಇನ್ನೊಂದು ಬಾರಿ ಹೀಗೆ ಆದರೆ ನಾನು ನಿಮ್ಮನ್ನು ಪುರುಷನೋ ಮಹಿಳೆಯೋ ಎಂದು ನೋಡುವುದಿಲ್ಲ. ಇಂದಿನಿಂದ ನೀವು ಮುಂಜಾನೆ 8 ಗಂಟೆಗೂ ಮೊದಲು ಶಾಲೆಗೆ ಬರಬೇಕು, 8 ಗಂಟೆಗಿಂತ ಒಂದು ನಿಮಿಷ ತಡವಾದರೂ ನೀವು ನಾನು ಏಕೆ ಹೀಗೆ ಮಾಡಿದೆ ಎಂದು ಜೀವನಪೂರ್ತಿ ನೆನಪು ಮಾಡಿಕೊಳ್ಳುವಂತೆ ಮಾಡಿಸುತ್ತೇನೆ. ಈ ಮಾತನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳಿ ಎಂದು ಹೇಳುತ್ತಾರೆ.

78
ಜೈಶ್ರೀರಾಮ್ ಎಂದು ಕರೆ ಕಡಿತಗೊಳಿಸಿದ ಯುವಕ
Image Credit : Gemini AI

ಜೈಶ್ರೀರಾಮ್ ಎಂದು ಕರೆ ಕಡಿತಗೊಳಿಸಿದ ಯುವಕ

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ ನಾನು ಸಮಯಕ್ಕೆ ಸರಿಯಾಗಿ ಬರುವೆ, ಸಮಯಕ್ಕೆ ಸರಿಯಾಗಿ ಹೋಗುವೆ, ಇನ್ನು ಮುಂದೆ ಅಂತಹ ತಪ್ಪನ್ನು ಮಾಡವುದಿಲ್ಲ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮತ್ತೆ ಕ್ಷಮೆ ಕೇಳಿದ್ದಾರೆ. ಸರಿ ಫೋನ್ ಇಡಿ ಜೈಶ್ರೀರಾಮ್ ಎಂದು ಆ ಯುವಕ ಹೇಳಿದ್ದು, ಮಹಿಳೆಯೂ ಜೈಶ್ರೀರಾಮ್ ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಯುವಕನ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

88
ರಾಹುಲ್ ಯಾದವ್ ಎಂಬ ಯುವಕನಿಂದ ಮಿಮಿಕ್ರಿ
Image Credit : Google

ರಾಹುಲ್ ಯಾದವ್ ಎಂಬ ಯುವಕನಿಂದ ಮಿಮಿಕ್ರಿ

ರಾಹುಲ್ ಯಾದವ್ ಎಂಬುವವರು ಈ ಮಿಮಿಕ್ರಿ ಮಾಡಿದ್ದು, ಈ ಯುವಕ ತಮ್ಮ ಮಿಮಿಕ್ರಿ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಯುವಕ ಒಳ್ಳೆಯ ಕಾರ್ಯಕ್ಕೆ ತಮ್ಮ ಮಿಮಿಕ್ರಿ ಮಾಡಿದ್ದಾರೆ. ಆಧುನಿಕ ಕಾಲದಲ್ಲಿ ಹೀಗೆಯೇ ಸಮಾಜ ಸೇವೆ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ಸ್ಟೋರಿ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ...

 
 
 
 
View this post on Instagram
 
 
 
 
 
 
 
 
 
 
 

A post shared by Rahul Show (@rahul_yadav17_)

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ

Latest Videos
Recommended Stories
Recommended image1
ಹಳದಿ ಬೋರ್ಡ್ ಇದೆ, ಟ್ರೈನ್ ಬರುತ್ತೆ, ಆದ್ರೆ ಹೆಸರಿಲ್ಲ! ಇದು ಭಾರತದ ಅನಾಮಧೇಯ ರೈಲು ನಿಲ್ದಾಣದ ಕಥೆ!
Recommended image2
ಅಪಘಾತದಲ್ಲಿ ಎಲೆಕ್ಷನ್ ಕಮಿಷನರ್ ತಂದೆಗೆ ಗಂಭೀರ ಗಾಯ, ಒಡಿಶಾ BLO ಸಭೆ ರದ್ದುಗೊಳಿಸಿ ದೆಹಲಿಗೆ ವಾಪಸ್
Recommended image3
ಹೊತ್ತಿ ಉರಿದ ಚಲಿಸುತ್ತಿದ್ದ ರೈಲಿನ ಬೋಗಿ, ಟಾಟಾ ನಗರ ಟ್ರೈನ್ ದುರಂತದಲ್ಲಿ ಬೆಂದು ಹೋದ ಪ್ರಯಾಣಿಕ
Related Stories
Recommended image1
ಹತ್ತು ಕೆಜಿ ಅಕ್ಕಿ ಬೇಕಾ, ಬೇಡಾವಾ: ಸಿದ್ದರಾಮಯ್ಯ ಸ್ಟೈಲ್‌ನಲ್ಲಿ ಮಿಮಿಕ್ರಿ ಮಾಡಿದ ಕೇಂದ್ರ ಸಚಿವ ಜೋಶಿ
Recommended image2
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಿಮಿಕ್ರಿ ಆರ್ಟಿಸ್ಟ್‌, ವಾಯ್ಸ್‌ ಮಿಮಿಕ್‌ ಮಾಡಿದ್ದಕ್ಕೆ ಜೈಲಿಗೂ ಹೋಗಿ ಬಂದ್ರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved