ಸೇಲ್ಫಿ ನೆಪದಲ್ಲಿ ಪುಂಡರಿಂದ ಕಿರುಕುಳ, ಮಹಾಕುಂಭಮೇಳ ತೊರೆದ ಮೊನಾಲಿಸಾ! ನಡೆದಿದ್ದೇನು?
ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಮಾಲೆ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶದ ಇಂದೋರ್ ಮೂಲದ ಮಹಿಳೆ ತನ್ನ ಆಕರ್ಷಕ ಕಣ್ಣುಗಳಿಂದ ಜಗತ್ತಿನಾದ್ಯಂತ ಗಮನ ಸೆಳೆದಿದ್ದರು. ಬಡವಳಾಗಿದ್ದರೂ ಸೌಂದರ್ಯದಲ್ಲಿ ಲಿಯೊನಾರ್ಡೊ ಡಾ ವಿನ್ಸಿ ಅವರ ಪ್ರಸಿದ್ಧ ಚಿತ್ರ ಮೊನಾಲಿಸಾಳನ್ನ ಮೀರಿಸುವಂತಹ ಸೌಂದರ್ಯ ಹೊಂದಿದ್ದಾಳೆಂದು, ಅವಳ ಕಣ್ಣು ಐಶ್ಚರ್ಯ ರೈಗೆ ಪೈಪೋಟಿ ನೀಡುವಂತಿದೆ ಎಂದು ಹೊಗಳಿ ಅವಳನ್ನು ರಾತ್ರಿಬೆಳಗಾಗುವುದರೊಳಗೆ ಫೇಮಸ್ ಮಾಡಿದ್ದು ಗೊತ್ತೇ ಇದೆ. ಆದರೆ ಸದ್ಯದ ಅವಳ ಪರಿಸ್ತಿತಿ ಯಾರಿಗೂ ಬೇಡ ಎನ್ನುವಂತಾಗಿದೆ. ಕಾರಣ ಇಲ್ಲಿದೆ ನೋಡಿ.

ಕುಂಭಮೇಳಕ್ಕೆ ತೆರಳಿದ್ದ ವಿಡಿಯೋ ಕ್ರಿಯೆಟರ್ ಒಬ್ಬ ಮಾಲೆ ಮಾರುವ ಹುಡುಗಿಯ ಬಗ್ಗೆ ವೀಡಿಯೊವನ್ನು ಹಂಚಿಕೊಂಡ ನಂತರ ಸೋಷಿಯಲ್ ಮೀಡಿಯಾ ಮೂಲಕ ಕೋಟ್ಯಂತರ ಜನರನ್ನ ಸೆಳೆದವಳ ಮೊನಾಲಿಸಾ. ಯಾವಾಗ ಮೊನಾಲಿಸಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆದಳೋ ಅಲ್ಲಿಂದ ಕುಂಭಮೇಳಕ್ಕೆ ಹೋದವರೆಲ್ಲ ಪುಣ್ಯ ಸ್ನಾನ ಮಾಡಿದ್ರೋ ಇಲ್ವೋ ಇವಳನ್ನು ಹುಡುಕಿ ಹೊರಟರು. ತನ್ನ ಪಾಡಿಗೆ ತಾನು ಮಾಲೆ ಮಾರುತ್ತಿದ್ದ ಮೊನಾಲಿಸಾಳಿಗೆ ಸೇಲ್ಫಿ ತೆಗೆಸಿಕೊಳ್ಳು ಯುವಕರ ದಂಡೇ ಮುಗಿಬಿಳಲು ಶುರುಮಾಡಿತು.
ಇದೀಗ ಸೆಲ್ಫಿ ತೆಗೆಸಿಕೊಳ್ಳುವ ನೆಪದಲ್ಲಿ ಮೊನಾಲಿಸಾಗೆ ಯುವಕ ಗುಂಪೊಂದು ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಯಿಂದ ಬೇಸತ್ತ ಮೊನಾಲಿಸಾ ಪ್ರಯಾಗರಾಜ್ ಕುಂಭಮೇಳ ತೊರೆಯುವಂತೆ ಮಾಡಿದೆ. ಅಂಗ್ಲಮಾಧ್ಯಮವೊಂದರ ವರದಿಯ ಪ್ರಕಾರ, ಯುವಕರ ಗುಂಪೊಂದು ಮೋನಾಲಿಸಾಳ ಬಳಿ ಬಂದು ನಿಮ್ಮ ತಂದೆ ನನ್ನೊಂದಿಗೆ ಸೇಲ್ಫಿ ತೆಗೆಸಿಕೊಳ್ಳಲು ಕಳಿಸಿದ್ದಾರೆ ಎಂದು ಹೇಳಿ ಸೆಲ್ಫಿಗೆ ಮುಗಿಬಿದ್ದಿದ್ದ ಯುವಕರ ಗುಂಪು. ಆದರೆ ಮೊನಾಲಿಸಾ ಇದಕ್ಕೆ ನಿರಾಕರಿಸಿದ್ದಾಳೆ. ಅಷ್ಟಕ್ಕೆ ಬಿಡದ ಪುಂಡರ ಗುಂಪು ಟೆಂಟ್ಗೆ ನುಗ್ಗಿ ಕಿರುಕುಳ ನೀಡಿದ್ದಾರೆ. ಸೆಲ್ಫಿಗಾಗಿ ಮುಗಿಬಿದ್ದ ಯುವಕರ ಗುಂಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಆಕೆಯ ಕುಟುಂಬದವರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಳಿಕ ಅವಳನ್ನ ಬಚ್ಚಿಟ್ಟ ಕಾರಣಕ್ಕೆ ಕುಟುಂಬಸ್ಥರ ಮೇಲೆಯೂ ಯುವಕರ ಗುಂಪು ಆಕ್ರೋಶಗೊಂಡು ಹಲ್ಲೆ ಮಾಡಲು ಮುಂದಾಗಿದೆ.
ನನ್ನ ಮತ್ತು ಕುಟುಂಬದ ಸುರಕ್ಷತೆಗಾಗಿ ನಾನು ಪ್ರಯಾಗ ರಾಜ್ ತೊರೆದು ಇಂದೋರ್ಗೆ ಹೋಗಬೇಕಿದೆ. ಸಾಧ್ಯವಾದರೆ ಮುಂದಿನ ಮಹಾಕುಂಭಾಮೇಳಕ್ಕೆ ಮತ್ತೆ ಮಾಲೆ ಮಾರಾಟ ಮಾಡಲು ಹಿಂತಿರುಗುತ್ತೇನೆ ಎಂದು ಹೇಳಿದ್ದಾಳೆ.
ಕಿರುಕುಳದ ನಂತರ, ಆಕೆಯ ತಂದೆ ಮಾತನಾಡಿದ್ದು ಮೊನಾಲಿಸಾಗೆ ಜೀವನೋಪಾಯಕ್ಕಾಗಿ ಅಥವಾ ಅವಳ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಕುಂಭಮೇಳವು ಇನ್ನು ಮುಂದೆ ಸುರಕ್ಷಿತ ಸ್ಥಳವಲ್ಲ ಎಂದು ಹೇಳಿದ್ದಾರೆ. ಹಠಾತ್ ಖ್ಯಾತಿ ಪಡೆದ ಮೊನಾಲಿಸಾ ಅವರ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು, ಏಕೆಂದರೆ ಜನರು ಹೂಮಾಲೆಗಳನ್ನು ಖರೀದಿಸುವ ಬದಲು ಸೆಲ್ಫಿಗಾಗಿ ಮುಗಿಬಿದ್ದಿದ್ದೇ ಹೆಚ್ಚು.