ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಿಸಿದ ಭಾರತೀಯ ರೈಲ್ವೇ
ಬೆಂಗಳೂರು -ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಗೊಂಡಿದೆ. ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ 17 ಕೋಚ್ಗಳ ಹೊಸ ರೈಲು ಸೇವೆ ಇದಾಗಿದೆ. ರೈಲಿನ ವೇಳಾಪಟ್ಟಿ ಇಲ್ಲಿದೆ

ಹೊಸ ರೈಲು ಸೇವೆ
ಪ್ರಧಾನಿ ನರೇಂದ್ರ ಮೋದಿ ಇಂಧನ ಉಳಿತಾಯಯಕ್ಕೆ ರೈಲು, ಸಾರಿಗೆ ಬಸ್, ಮೆಟ್ರೋ ಬಳಕೆಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹಲವರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಭಾರತೀಯ ರೈಲ್ವೇ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣ ಮುಂಬೈಗೆ ಹೊಸ ರೈಲು ಸೇವೆ ಘೋಷಿಸಿದೆ.

ನಿರಾಳರಾದ ಪ್ರಯಾಣಿಕರು
ಎಸ್ಎಂವಿಟಿ ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣ ಮುಂಬೈಗೆ ಈ ರೈಲು ಸೇವೆ ನೀಡಲಿದೆ. ವಿಶೇಷ ಅಂದರೆ ವಾರದಲಲ್ಲಿ 2 ದಿನ ರೈಲು ಸೇವೆ ಲಭ್ಯವಿದೆ. ಬೆಂಗಳೂರು ನಿಲ್ದಾಣದಿಂದ ಶನಿವಾರ ಹಾಗೂ ಮಂಗಳವಾರ ಈ ವಿಶೇಷ ರೈಲು ಲಭ್ಯವಿದೆ. ಇದರಿಂದ ಕಿಕ್ಕಿರಿದು ತುಂಬಿದ್ದ ಬೆಂಗಳೂರು ಮುಂಬೈ ರೈಲು ಪ್ರಯಾಣಿಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ವಿಶೇಷ ರೈಲು ರೈಲು ನಿಲುಗಡೆ
ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಹೊರಡುವ ಈ ವಿಶೇಷ ರೈಲು ಕರ್ನಾಟಕದ ದಾವಣಗೆರೆ, ಎಸ್ಎಸ್ ಹುಬ್ಬಳಿ ಜಂಕ್ಷನ್, ಧಾರವಾಡ, ಬೆಳಗಾವಿಯಲ್ಲಿ ನಿಲುಗಡೆಯಾಗಲಿದೆ. ಇನ್ನು ಮಹಾರಾಷ್ಟ್ರದ ಮಿರಾಜ್ ಜಂಕ್ಷನ್, ಸಾಂಗ್ಲಿ, ಕರದ್, ಸತಾರ, ಲೊನಂದ್, ಪುಣೆ, ಲೊನವಾಲ, ಕರ್ಜತ್, ಕಲ್ಯಾಣ್, ಥಾಣೆ, ಲೋಕಮಾನ್ಯ ತಿಲಕ ನಿಲ್ದಾಣ ಮುಂಬೈ ತಲುಪಲಿದೆ.
ಸೌತ್ ವೆಸ್ಟರ್ನ ರೈಲ್ವೇ ಸೆವೆ
ಸೌತ್ ವೆಸ್ಟರ್ನ್ ರೈಲ್ವೇ ವಿಭಾಗ ಹೊಸ ರೈಲು ಸೇವೆ ನೀಡುತ್ತಿದೆ. ಬೆಂಗಳೂರು ಮಂಬೈ ರೈಲುಗಳಲ್ಲಿ ಟಿಕೆಟ್ ಸಿಗದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಪ್ರತಿ ದಿನ ತೀವ್ರ ಸಮಸ್ಯೆಯಾಗಿ ಪರಿಣಿಮಿಸಿತ್ತು. ಇದೀಗ ಹೊಸ ರೈಲು ಸೇವೆಯಿಂದ ಪ್ರಯಾಣಿಕರು ಸುಲಭ ಪ್ರಯಾಣ ಮಾಡಬಹುದು.
ಹೊಸ ರೈಲು ಯೋಜನೆಗಳು
ಮೋದಿ ಈಗಾಗಲೇ ಸಾರ್ವಜನಿಕ ಸಾರಿಗೆ ಬಳಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕ ಸಾರಿಗೆ ಸಂಪರ್ಕ ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೈಸ್ಪೀಡ್ ರೈಲು, ವಂದೇ ಭಾರತ್ ಸೇರಿದಂತೆ ಹಲವು ಹೊಸ ರೈಲು ಯೋಜನೆಗಳು ಚಾಲ್ತಿಯಲ್ಲಿದೆ.
ಹೊಸ ರೈಲು ಯೋಜನೆಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

