ಕುಂಭಮೇಳದಲ್ಲಿ 18ಗಂಟೆಯಲ್ಲಿ 102ಜನಕ್ಕೆ ಪಾಸಿಟಿವ್: ಇದನ್ನು ತಬ್ಲಿಘಿಗೆ ಹೋಲಿಸ್ಬೇಡಿ ಎಂದ ಸಿಎಂ
ಕೊರೋನಾ ಎರಡನೇ ಅಲೆ ನಡುವೆಯೇ ಕುಂಭಮೇಳ | 18 ಗಂಟೆಯಲ್ಲೇ 102 ಜನಕ್ಕೆ ಪಾಸಿಟಿವ್
ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಮಹಾ ಕುಂಭಮೇಳಕ್ಕಾಗಿ ಹರಿದ್ವಾರದ ಗಂಗಾ ದಡದಲ್ಲಿ ಸುಮಾರು ಮೂರು ಮಿಲಿಯನ್ ಜನರು ಸೇರಿದ್ದಾರೆ.
ದೇಶದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು, ಕುಂಭಮೇಳದಲ್ಲಿ 18 ಗಂಟೆಯಲ್ಲಿ 102 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.
ಈವೆಂಟ್ನ ಫೋಟೋಗಳು ಮತ್ತು ವೀಡಿಯೊಗಳಲ್ಲಿ COVID-19 ಪ್ರೋಟೋಕಾಲ್ಗಳನ್ನು ಸೋಷಿಯಲ್ ಡಿಸ್ಟೆನ್ಸ್ ಮಾಸ್ಕ್ ಧರಿಸದಿರುವುದು ಸ್ಪಷ್ಟವಾಗಿ ಕಾಣಿಸಿದೆ.
ಎರಡನೇ ಅಲೆ ಉಲ್ಬಣವು ಪ್ರಾರಂಭವಾಗಿದೆ ಎಂದು ಮಾರ್ಚ್ ಎರಡನೇ ವಾರದಿಂದ ಸ್ಪಷ್ಟವಾಗಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ವಾರಗಳ ಹಿಂದೂ ಹಬ್ಬವನ್ನು ರದ್ದುಗೊಳಿಸಲು ನಿರಾಕರಿಸಿದೆ.
ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ಅಡೆತಡೆಗಳು ಇರಬಾರದು ಮತ್ತು ಮೇಳವು ಎಲ್ಲರಿಗೂ ಮುಕ್ತವಾಗಿರಬೇಕು ಎಂದು ಹೇಳಿದ್ದಾರೆ.
ರಾವತ್ ಸ್ವತಃ ಉತ್ಸವಕ್ಕಾಗಿ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಕೋವಿಡ್ -19 ಹೆಸರಿನಲ್ಲಿ ಯಾರನ್ನೂ ನಿಲ್ಲಿಸಲಾಗುವುದಿಲ್ಲ, ಏಕೆಂದರೆ ದೇವರ ಮೇಲಿನ ನಂಬಿಕೆಯು ವೈರಸ್ ಭಯವನ್ನು ನಿವಾರಿಸುತ್ತದೆ ಎಂದು ಅವರು ಈ ಹಿಂದೆ ಹೇಳಿದ್ದರು.
ಒಂದು ವರ್ಷದ ಹಿಂದೆ ತಬ್ಲಿಘಿ ಜಮಾಅತ್ ಕಾರ್ಯಕ್ರಮ ನಡೆದಾಗ ಭಾರತದ COVID-19 ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎನ್ನಲಾಗಿತ್ತು. ಆಗ ಕೆಲವೇ ಕೆಲವು ಸಕ್ರಿಯ ಪ್ರಕರಣಗಳು ಇದ್ದವು. ಇಂದು 1.2 ದಶಲಕ್ಷಕ್ಕೂ ಹೆಚ್ಚು ಇವೆ. ಇನ್ನೂ, ಸರ್ಕಾರದ ಬೆಂಬಲದೊಂದಿಗೆ ಹೆಚ್ಚು ದೊಡ್ಡದಾದ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕುಂಭಮೇಳವನ್ನು ಮಾರ್ಕಾಜ್ಗೆ ಹೋಲಿಸಬಾರದು ಎಂದು ಉತ್ತರಾಖಂಡ ಮುಖ್ಯಮಂತ್ರಿ ರಾವತ್ ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದ್ದಾರೆ. ಏಕೆಂದರೆ ಜನರು ತಮ್ಮ ಕೈಗಳನ್ನು ಸ್ವಚ್ಛಗೊಳಿಸುವುದು ಮಾಸ್ಕ್ ಧರಿಸಬೇಕು ಎಂದು ಈಗ ತಿಳಿದಿದ್ದಾರೆ ಎಂದಿದ್ದಾರೆ.