MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • 'ಕೋಮುದ್ವೇಷಕ್ಕೆ ಬಳಸಿಕೊಳ್ಳಬೇಡಿ..' ವೈಯಕ್ತಿಕ ವಿಚಾರ ಕೇರಳ ಸ್ಟೋರಿಗೆ ಲಿಂಕ್‌ ಮಾಡಿದ್ದಕ್ಕೆ ಅತುಲ್ಯ ಅಶೋಕನ್‌ ಬೇಸರ!

'ಕೋಮುದ್ವೇಷಕ್ಕೆ ಬಳಸಿಕೊಳ್ಳಬೇಡಿ..' ವೈಯಕ್ತಿಕ ವಿಚಾರ ಕೇರಳ ಸ್ಟೋರಿಗೆ ಲಿಂಕ್‌ ಮಾಡಿದ್ದಕ್ಕೆ ಅತುಲ್ಯ ಅಶೋಕನ್‌ ಬೇಸರ!

ಲವ್‌ ಜಿಹಾದ್‌ ಅಪ್ಪಿಕೊಂಡು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ ಕೇರಳದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಅತುಲ್ಯ ಅಶೋಕನ್‌ ಅಲಿಯಾಸ್‌ ಆಲಿಯಾ ಅವರ ಜೀವನವೀಗ ನರಕವಾಗಿದೆ. ಈ ನಡುವೆ ತಮ್ಮ ವೈಯಕ್ತಿಕ ವಿಚಾರವನ್ನು ಕೇರಳ ಸ್ಟೋರಿ ಚಿತ್ರಕ್ಕೆ ತಳುಕು ಹಾಕಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

2 Min read
Santosh Naik
Published : Nov 24 2023, 03:10 PM IST
Share this Photo Gallery
  • FB
  • TW
  • Linkdin
  • Whatsapp
114
214

ಈ ತಿಂಗಳ ಆರಂಭದಲ್ಲಿ ಇನ್ಸ್‌ಟಾಗ್ರಾಮ್‌ನಲ್ಲಿ ಮಾಡಿದ್ದ ಪೋಸ್ಟ್‌ಗೆ ಸಂಬಂಧಪಟ್ಟಂತೆ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಅತುಲ್ಯ ಅಶೋಕನ್‌ ಅಲಿಯಾಸ್‌ ಆಲಿಯಾ ಕೊನೆಗೂ ಮೌನ ಮುರಿದಿದ್ದಾರೆ.

314

ಮದುವೆಯಾದ ಕೇವಲ ಏಳು ತಿಂಗಳಿಗೆ ಪತಿ ರೈಸಲ್‌ ಮನ್ಸೂರ್‌ರಿಂದ ಬೇರೆಯಾಗಿರುವ ಅತುಲ್ಯ ಅಶೋಕನ್‌ ತಮ್ಮ ಜೀವನವನ್ನು ಕೇರಳ ಸ್ಟೋರಿ ಸಿನಿಮಾಗೆ ಹೋಲಿಸಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.

414

ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಅತುಲ್ಯ ಅಶೋಕನ್‌ ಇಸ್ಲಾಂಗೆ ಮತಾಂತರವಾಗಿ ಆಲಿಯಾ ಆಗಿ ಬದಲಾಗಿದ್ದರು. ಬಳಿಕ ರೈಸಲ್‌ ಮನ್ಸೂರ್‌ನನ್ನು ಮದುವೆಯಾಗಿದ್ದರು. ಈ ಹಂತದಲ್ಲಿ ಬಂದ ಕೇರಳ ಸ್ಟೋರಿ ಚಿತ್ರವನ್ನು ಟೀಕಿಸಿದವರ ಪೈಕಿ ಅತುಲ್ಯ ಮೊದಲಿಗರಾಗಿ ಕಾಣಿಸಿಕೊಂಡಿದ್ದರು.

514

ಅದಕ್ಕೆ ತನ್ನ ಜೀವನವನ್ನೇ ಉದಾಹರಣೆಯಾಗಿ ನೀಡಿದ್ದ ಅತುಲ್ಯ ಅಶೋಕನ್‌, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ನಾನು ಖುಷಿಯಾಗಿಯೇ ಇದ್ದೇನೆ ಎಂದು ಹೇಳಿದ್ದರು.

614

ಈ ತಿಂಗಳ ಆರಂಭದಲ್ಲಿ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಮುಂದೆ ನನಗೇನಾದರೂ ಆದಲ್ಲಿ ಅದಕ್ಕೆ ನನ್ನ ಕುಟುಂಬ ಕಾರಣವಲ್ಲ. ಅದಕ್ಕೆ ರೈಸಲ್‌ ಮನ್ಸೂರ್‌ (ಆಕೆಯ ಪತಿ) ಏಕೈಕ ಕಾರಣ ಎಂದು ಸ್ಟೋರಿ ಹಾಕಿದ್ದರು. ಬಳಿಕ ಇದನ್ನೂ ಡಿಲೀಟ್‌ ಮಾಡಿದರಾದರೂ, ಮೀಡಿಯಾಗಳು ೀಕೆಯ ಜೀವನವನ್ನು ಕೇರಳ ಸ್ಟೋರಿ ಸಿನಿಮಾಗೆ ಹೋಲಿಸಿದ್ದರು.

714

ತನ್ನ ಪತಿ ರೈಸಲ್‌ ಮನ್ಸೂರ್‌ನಿಂದ ಒಂದು ತಿಂಗಳ ಹಿಂದೆಯೇ ಬೇರ್ಪಟ್ಟಿದ್ದೇನೆ ಮತ್ತು ಭಾವನಾತ್ಮಕವಾಗಿ ನಾನು ಕುಗ್ಗಿ ಹೋಗಿದ್ದೆ ಎಂದು ಅವರು ಇತ್ತೀಚಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

814

ತನ್ನ ಜೀವನದ ನಿರ್ಧಾರಗಳಿಂದ ತನ್ನ ಕುಟುಂಬವು ತೊಂದರೆಗೊಳಗಾಗಬಾರದು ಎಂದು ಬಯಸಿದ್ದ ಕಾರಣಕ್ಕಾಗಿ ಆ ಪೋಸ್ಟ್‌ಅನ್ನು ಹಾಕಿದ್ದೆ ಎಂದು ಹೇಳಿದ್ದಾರೆ.

914

ನನ್ನ ವೈಯಕ್ತಿಕ ಜೀವನದ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳು ಹಾಗೂ ಜನರು ಕೋಮುದ್ವೇಷದ ವಿಚಾರವನ್ನಾಗಿ ಬಳಸಿಕೊಳ್ಳಬಾರದು ಎಂದು ಬರೆದುಕೊಂಡಿದ್ದಾರೆ.

1014

ಕೇರಳ ಸ್ಟೋರಿ ಚಿತ್ರಕ್ಕೂ ನನ್ನ ಮದುವೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕಳೆದ ಏಳು ತಿಂಗಳಿನಿಂದಲೂ ನನ್ನ ಮದುವೆಯ ಬಗ್ಗೆ ಇಂಥದ್ದೇ ವಿಚಾರಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

1114

ಕೇರಳ ಸ್ಟೋರಿ ಸಿನಿಮಾಗೂ ನನ್ನ ಜೀವನಕ್ಕೂ ಸಂಬಂಧವಿಲ್ಲ. ನನ್ನ ವಿಚಾರವನ್ನು ಒಂದು ಕೋಮಿನ ಕುರಿತಾಗಿ ಕೆಟ್ಟದಾಗಿ ಮಾತನಾಡಲು ಬಳಸಿಕೊಳ್ಳಬೇಡಿ. ಇದು ಅವಮಾನ ಎಂದಿದ್ದಾರೆ.

1214

ನನಗೇನಾದರೂ ಆದರೆ ಪತಿಯೇ ಹೊಣೆ ಎಂದು ಬರೆದಿದ್ದ ಪೋಸ್ಟ್‌ಗೆ ಸಂಬಂಧಪಟ್ಟಂತೆ ತಿಳಿಸಿರುವ ಆಕೆ, ನಾನು ಸಂಪೂರ್ಣವಾಗಿ ಸೇಫ್‌ ಆಗಿದ್ದೇನೆ ಈ ಬಗ್ಗೆ ಯಾರಿಗೂ ಯೋಚನೆ ಬೇಡ ಎಂದು ಹೇಳಿದ್ದಾರೆ.

1314

ನಾವಿಬ್ಬರೂ ನಮ್ಮೂರಿನಲ್ಲಿ ಭೇಟಿಯಾಗಿದ್ದೆವು. ಆರಂಭದಲ್ಲಿ ಮಾತನಾಡಿದೆವು. ಬಳಿಕ ನೇರಾನೇರ ಭೇಟಿಯಾದೆವು.ಪ್ರೀತಿಯಲ್ಲಿ ಬಿದ್ದೆವು. ನನ್ನ ಮದುವೆಯ ದಿನದವರೆಗೂ ಇದು ನನ್ನ ಸ್ನೇಹಿತೆಯರಿಗೆ ಯಾರಿಗೂ ತಿಳಿದಿರಲಿಲ್ಲ ಎಂದು ಅತುಲ್ಯಾ ಬರೆದಿದ್ದಾರೆ.

 

 

1414

ನಾನು ಆ ಪೋಸ್ಟ್‌ ಹಂಚಿಕೊಳ್ಳಲು ಕಾರಣ ಏನೆಂದರೆ, ಮುಂದೇನಾದರೂ ನನಗೆ ಆದಲ್ಲಿ ಯಾರೂ ಕೂಡ ನನ್ನ ಕುಟುಂಬವನ್ನು ಹೊಣೆ ಮಾಡಬಾರದು ಎನ್ನುವುದಷ್ಟೇ ಆಗಿತ್ತು ಎಂದು ತಮ್ಮ ಏಳು ತಿಂಗಳ ಮದುವೆಯ ಬಗ್ಗೆ ಅತುಲ್ಯಾ ಹೇಳಿದ್ದಾರೆ.

ಕೇರಳ ಸ್ಟೋರಿ ಚಿತ್ರವನ್ನು ಟೀಕಿಸಿ ಮುಸ್ಲಿಂ ವ್ಯಕ್ತಿಯ ಮದುವೆಯಾಗಿದ್ದ ಹಿಂದು ಹುಡುಗಿ ಬದುಕು ನರಕ!

 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕೇರಳ
ಲವ್ ಜಿಹಾದ್

Latest Videos
Recommended Stories
Recommended image1
ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!
Recommended image2
ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
Recommended image3
Viral Video: ಗಗನಯಾನ್‌ ಮಿಷನ್‌ ಲ್ಯಾಡಿಂಗ್‌ ಪ್ಯಾರಚೂಟ್‌ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved