ಶಾ ಸಮ್ಮುಖದಲ್ಲಿ TMC ಶಾಸಕ ಸುವೆಂದು ಅಧಿಕಾರಿ ಸೇರಿದಂತೆ 13 ನಾಯಕರು ಬಿಜೆಪಿ ಸೇರ್ಪಡೆ!
ಪಶ್ಚಿಮ ಬಂಗಾಳ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಬಿಜೆಪಿ, ಆಡಳಿತಾರೂಢ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತೃಣಮೂಲಕ ಕಾಂಗ್ರೆಸ್ ನಾಯಕರಲ್ಲಿ ಒಡಕು ಮೂಡಿದ್ದು, ಇದೀಗ ಬಿಜೆಪಿಯತ್ತ ಮುಖಮಾಡಿದ್ದಾರೆ. ಅಮಿತ್ ಶಾ ರ್ಯಾಲಿಯಲ್ಲಿ ಟಿಎಂಸಿ ನಾಯಕ ಸುವೆಂದು ಅದಿಕಾರಿ ಬಿಜೆಪಿ ಸೇರಿಕೊಂಡಿದ್ದಾರೆ. ಇದರ ಜೊತೆ ಪ್ರಮುಖ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ.

<p> ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಟ್ಟಿದ್ದ ಭದ್ರಕೋಟೆ ಇದೀಗ ಛಿದ್ರವಾಗುವ ಲಕ್ಷಣಗಳು ಕಾಣಿಸುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಇದೀಗ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. </p>
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಟ್ಟಿದ್ದ ಭದ್ರಕೋಟೆ ಇದೀಗ ಛಿದ್ರವಾಗುವ ಲಕ್ಷಣಗಳು ಕಾಣಿಸುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಇದೀಗ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.
<p>ರಾಜೀನಾಮೆ ನೀಡಿ ಮಮತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಟಿಎಂಸಿ ಶಾಸಕ ಸುವೆಂದು ಅದಿಕಾರಿ, ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ </p>
ರಾಜೀನಾಮೆ ನೀಡಿ ಮಮತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಟಿಎಂಸಿ ಶಾಸಕ ಸುವೆಂದು ಅದಿಕಾರಿ, ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ
<p>ಬಿಜೆಪಿ ಆಯೋದಿಸಿದ ಮೆಘಾ ರ್ಯಾಲಿಯಲ್ಲಿ ಸುವೆಂದು ಅಧಿಕಾರಿ ಬಿಜೆಪಿ ಸೇರಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಸುವೆಂದು ಅಧಿಕಾರಿಯನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.</p>
ಬಿಜೆಪಿ ಆಯೋದಿಸಿದ ಮೆಘಾ ರ್ಯಾಲಿಯಲ್ಲಿ ಸುವೆಂದು ಅಧಿಕಾರಿ ಬಿಜೆಪಿ ಸೇರಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಸುವೆಂದು ಅಧಿಕಾರಿಯನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
<p>ಸುವೆಂದು ಅಧಿಕಾರಿ ಜೊತೆ 11 MLA, ಓರ್ವ ಸಂಸದ ಹಾಗೂ ಓರ್ವ ಮಾಜಿ ಸಂಸದ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಇದುವರೆಗೆ ತೃಣಮೂಲ ಕಾಂಗ್ರೆಸ್ ಎದುರಿಸಿದ ಅತೀದೊಡ್ಡ ಆಘಾತ ಇದಾಗಿದೆ.</p>
ಸುವೆಂದು ಅಧಿಕಾರಿ ಜೊತೆ 11 MLA, ಓರ್ವ ಸಂಸದ ಹಾಗೂ ಓರ್ವ ಮಾಜಿ ಸಂಸದ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಇದುವರೆಗೆ ತೃಣಮೂಲ ಕಾಂಗ್ರೆಸ್ ಎದುರಿಸಿದ ಅತೀದೊಡ್ಡ ಆಘಾತ ಇದಾಗಿದೆ.
<p>ಬುರ್ದ್ವಾನ್ ಪುರ್ಬಾ ಸಂಸದ ಸುನಿಲ್ ಮೊಂಡಾಲ್ ಬಿಜೆಪಿ ಸೇರಿಕೊಂಡಿದ್ದಾರೆ. ಇನ್ನು ಆಲಿಪುರ್ದೌರ್ ಮಾಜಿ ಸಂಸದ ದಸರತ್ ತಿರ್ಕಿ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ.</p>
ಬುರ್ದ್ವಾನ್ ಪುರ್ಬಾ ಸಂಸದ ಸುನಿಲ್ ಮೊಂಡಾಲ್ ಬಿಜೆಪಿ ಸೇರಿಕೊಂಡಿದ್ದಾರೆ. ಇನ್ನು ಆಲಿಪುರ್ದೌರ್ ಮಾಜಿ ಸಂಸದ ದಸರತ್ ತಿರ್ಕಿ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ.
<p>ಸುವೆಂದು ಅಧಿಕಾರಿ ಸೇರಿದಂತ 11 MLA ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಇದರಲ್ಲಿ ಹಲ್ದಿಯಾ ಕ್ಷೇತ್ರದ MLA ತಪಸಿ ಮೊಂಡಾಲ್, ತಮ್ಲೂಕ್ ಕ್ಷೇತ್ರದ ಅಶೋಂಕ್ ದಿಂಡಾ , ಪುರುಲಿಯಾ ಕ್ಷೇತ್ರದ MLA ಸುದೀಪ್ ಮುಖರ್ಜಿ ಬಿಜೆಪಿ ಸೇರಿಕೊಂಡಿದ್ದಾರೆ.</p>
ಸುವೆಂದು ಅಧಿಕಾರಿ ಸೇರಿದಂತ 11 MLA ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಇದರಲ್ಲಿ ಹಲ್ದಿಯಾ ಕ್ಷೇತ್ರದ MLA ತಪಸಿ ಮೊಂಡಾಲ್, ತಮ್ಲೂಕ್ ಕ್ಷೇತ್ರದ ಅಶೋಂಕ್ ದಿಂಡಾ , ಪುರುಲಿಯಾ ಕ್ಷೇತ್ರದ MLA ಸುದೀಪ್ ಮುಖರ್ಜಿ ಬಿಜೆಪಿ ಸೇರಿಕೊಂಡಿದ್ದಾರೆ.
<p>ಬುರ್ದ್ವಾನ್ ಕ್ಷೇತ್ರದ MLA ಸೈಕಲ್ ಪಂಜಾ, ಗಝೋಲ್ ಕ್ಷೇತ್ರದ MLA ಶೀಲ್ಭದ್ರ ದತ್ತಾ, ನಗರ್ಕಟಾ ಕ್ಷೇತ್ರದ MLA ಸುುರ್ಕಾ ಮುಂಡಾ, ಬಿಷ್ಣುಪುರ್ ಕ್ಷೇತ್ರದ MLA ಶ್ಯಾಮಪದಾ ಮುಖರ್ಜಿ, ರ್ಯಾಲಿಯಲ್ಲಿ ಅಮಿತ್ ಶಾ ಸಮ್ಮುಖದಲ್ಲೇ ಬಿಜೆಪಿ ಸೇರಿಕೊಂಡಿದ್ದಾರೆ.</p>
ಬುರ್ದ್ವಾನ್ ಕ್ಷೇತ್ರದ MLA ಸೈಕಲ್ ಪಂಜಾ, ಗಝೋಲ್ ಕ್ಷೇತ್ರದ MLA ಶೀಲ್ಭದ್ರ ದತ್ತಾ, ನಗರ್ಕಟಾ ಕ್ಷೇತ್ರದ MLA ಸುುರ್ಕಾ ಮುಂಡಾ, ಬಿಷ್ಣುಪುರ್ ಕ್ಷೇತ್ರದ MLA ಶ್ಯಾಮಪದಾ ಮುಖರ್ಜಿ, ರ್ಯಾಲಿಯಲ್ಲಿ ಅಮಿತ್ ಶಾ ಸಮ್ಮುಖದಲ್ಲೇ ಬಿಜೆಪಿ ಸೇರಿಕೊಂಡಿದ್ದಾರೆ.
<p>ಕಲ್ನಾ ಕ್ಷೇತ್ರದ MLA ಬಿಸ್ವಜಿತ್ ಕುಂಡು ಹಾಗೂ ಉತ್ತರ ಕಾಂತಿ ಕ್ಷೇತ್ರದ ಬನಸ್ತಿ ಮೈಟಿ ಬಿಜೆಪಿ ಸೇರಿಕೊಂಡಿದ್ದಾರೆ. ಟಿಎಂಸಿ ನಾಯಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆಯಿಂದ ಮಮತಾ ಸಂಪುಟ ಖಾಲಿಯಾಗಿದೆ.</p>
ಕಲ್ನಾ ಕ್ಷೇತ್ರದ MLA ಬಿಸ್ವಜಿತ್ ಕುಂಡು ಹಾಗೂ ಉತ್ತರ ಕಾಂತಿ ಕ್ಷೇತ್ರದ ಬನಸ್ತಿ ಮೈಟಿ ಬಿಜೆಪಿ ಸೇರಿಕೊಂಡಿದ್ದಾರೆ. ಟಿಎಂಸಿ ನಾಯಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆಯಿಂದ ಮಮತಾ ಸಂಪುಟ ಖಾಲಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ