MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ತಿರುಪತಿ ತಿಮ್ಮಪ್ಪನ ಕಣ್ಣುಗಳು ಯಾವಾಗಲೂ ಮುಚ್ಚಿರೋದಕ್ಕೆ ಕಾರಣವೇನು?

ತಿರುಪತಿ ತಿಮ್ಮಪ್ಪನ ಕಣ್ಣುಗಳು ಯಾವಾಗಲೂ ಮುಚ್ಚಿರೋದಕ್ಕೆ ಕಾರಣವೇನು?

ತಿರುಪತಿ ಬಾಲಾಜಿ ದೇವಾಲಯವು ವಿಷ್ಣುವಿನ ಒಂದು ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತ. ಧಾರ್ಮಿಕ ನಂಬಿಕೆ ಪ್ರಕಾರ, ವೆಂಕಟೇಶ್ವರನು ತನ್ನ ಭಕ್ತರನ್ನು ಸಮಸ್ಯೆಗಳಿಂದ ರಕ್ಷಿಸಲು ಕಲಿಯುಗದಲ್ಲಿ ಅವತಾರ ತಾಳಿದನು. ಆದರೆ ವೆಂಕಟೇಶ್ವರನ ಕಣ್ಣುಗಳ ಮೇಲೆ ಬಿಳಿ ನಾಮ ಬಳಿದು ಮುಚ್ಚೋದು ಯಾಕೆ ಅನ್ನೋದು ಗೊತ್ತಾ? 

2 Min read
Author : Pavna Das
Published : Jun 01 2024, 04:12 PM IST
Share this Photo Gallery
  • FB
  • TW
  • Linkdin
  • Whatsapp
16

ದೇಶದಲ್ಲಿ ಅನೇಕ ದೇವಾಲಯಗಳಿವೆ, ಅವುಗಳು ಕಾಯ್ದುಕೊಂಡಿರುವ ರಹಸ್ಯದಿಂದಾಗಿಯೇ ಬಹಳ ಪ್ರಸಿದ್ಧವಾಗಿವೆ. ಅವುಗಳಲ್ಲಿ ತಿರುಪತಿ ಬಾಲಾಜಿ ದೇವಾಲಯವೂ (Tirupati Balaji Temple) ಒಂದು. ಇದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿದೆ. ಈ ದೇವಾಲಯವು ಅನೇಕ ನಂಬಿಕೆಗಳಿಗೆ ಹೆಸರುವಾಸಿ. ತಿರುಪತಿ ಬಾಲಾಜಿ ದೇವಾಲಯವು ವಿಷ್ಣುವಿನ ಒಂದು ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತ. ನಂಬಿಕೆ ಪ್ರಕಾರ, ವೆಂಕಟೇಶ್ವರನು ತನ್ನ ಭಕ್ತರನ್ನು ಸಮಸ್ಯೆಗಳಿಂದ ರಕ್ಷಿಸಲು ಕಲಿಯುಗದಲ್ಲಿ ಅವತರಿಸಿದ.
 

26

ಭಗವಾನ್ ವೆಂಕಟೇಶ್ವರನೊಂದಿಗೆ (Venkateshwara) ಕಲಿಯುಗ ಕೊನೆಗೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ವೆಂಕಟೇಶ್ವರನನ್ನು ಪೂಜಿಸುವುದರಿಂದ ಭಕ್ತನ ಎಲ್ಲ ಆಸೆಗಳು ಈಡೇರುತ್ತವೆ. ಇಲ್ಲಿ ಹರಕೆ ಹೊತ್ತು ಎಷ್ಟೋ ಭಕ್ತರು ಬರುತ್ತಾರೆ. ಅಲ್ಲದೇ ತಿರುಪತಿ ತಿಮ್ಮಪ್ಪನ ಹುಂಡಿಗೆ ಚಿನ್ನ (Gold), ವಜ್ರ (Diamond), ಕೊಟ್ಯಾಂತರ ಹಣವನ್ನು ದಾನ ಮಾಡುವವರು ಇದ್ದಾರೆ. ಇದೆಲ್ಲವೂ ಅವರವರ ನಂಬಿಕೆ. 

36

ನೀವು ಎಂದಾದರೂ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರೆ, ತಿಮ್ಮಪ್ಪನ ಕಣ್ಣುಗಳು ಮುಚ್ಚಿರೋದನ್ನು ಕಾಣಬಹುದು.  ವೆಂಕಟೇಶ್ವರನ ಕಣ್ಣುಗಳ ಎದುರು ದೊಡ್ಡದಾದ ಬಿಳಿ ನಾಮದಿಂದ ಮುಚ್ಚಲಾಗಿದೆ ಇದನ್ನ ನೀವು ನೋಡಿರಬಹುದು, ಆದರೆ ವೆಂಕಟೇಶ್ವರನ ಕಣ್ಣುಗಳನ್ನು ಮುಚ್ಚಿಡಲು (clossed eyes) ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ನಿಮಗೆ ಗೊತ್ತಿಲ್ಲದಿದ್ದರೆ, ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.  
 

46

ಭಗವಾನ್ ವೆಂಕಟೇಶ್ವರನ ಕಣ್ಣುಗಳನ್ನು ಮುಚ್ಚುವ ರಹಸ್ಯ ಇದು
ಧಾರ್ಮಿಕ ನಂಬಿಕೆಯ ಪ್ರಕಾರ, ಭಗವಾನ್ ವೆಂಕಟೇಶ್ವರನು ಕಲಿಯುಗದಲ್ಲಿ ತಿರುಪತಿ ದೇವಸ್ಥಾನದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಭಗವಾನ್ ವೆಂಕಟೇಶ್ವರನು ತನ್ನ ಪ್ರಕಾಶಮಾನವಾದ ಮತ್ತು ಶಕ್ತಿಯುತ ಕಣ್ಣುಗಳಿಗೆ ಹೆಸರುವಾಸಿ. 

56

ವೆಂಕಟೇಶ್ವರನ ಕಣ್ಣುಗಳಲ್ಲಿನ ಕಾಸ್ಮಿಕ್ ಶಕ್ತಿಯಿಂದ (cosmic power) ಭಕ್ತರು ಅವನ ಕಣ್ಣುಗಳನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಆದ್ದರಿಂದ ವೆಂಕಟೇಶ್ವರನ ಕಣ್ಣುಗಳನ್ನು ಬಿಳಿ ಮುಖವಾಡದಿಂದ ಮುಚ್ಚಲಾಗುತ್ತದೆ. ಈ ಮುಖವಾಡವನ್ನು ಗುರುವಾರ ಮಾತ್ರ ಬದಲಾಯಿಸಲಾಗುತ್ತದೆ, ಆದ್ದರಿಂದ ಭಕ್ತರು ಈ ಸಮಯದಲ್ಲಿ ಒಂದು ಕ್ಷಣ ಅವರ ಕಣ್ಣುಗಳನ್ನು ನೋಡಬಹುದು.  
 

66

ಈ ದಿನ, ಶ್ರೀಗಂಧದಿಂದ ಸ್ನಾನ 
ಗುರುವಾರ, ವೆಂಕಟೇಶ್ವರನನ್ನು ಶ್ರೀಗಂಧದಿಂದ ಸ್ನಾನ ಮಾಡಿಸಲಾಗುತ್ತದೆ. ನಂತರ ಅವನ ವಿಗ್ರಹಕ್ಕೆ ಶ್ರೀಗಂಧವನ್ನು ಹಚ್ಚಲಾಗುತ್ತದೆ. ಭಗವಾನ್ ವೆಂಕಟೇಶ್ವರನ ಹೃದಯಕ್ಕೆ ಶ್ರೀಗಂಧವನ್ನು ಹಚ್ಚುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ (Lakshmi) ಚಿತ್ರ ಕಾಣಸಿಗುತ್ತದೆ ಎಂದು ಹೇಳಲಾಗುತ್ತದೆ.  

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ತಿರುಪತಿ
ದೇವಸ್ಥಾನ

Latest Videos
Recommended Stories
Recommended image1
ನಾಳೆ ಫೆಬ್ರವರಿ 26 ಈ 5 ರಾಶಿ ಜನರಿಗೆ ಸಂಪತ್ತೇ ಸಂಪತ್ತು, ಗಜಕೇಸರಿ ರಾಜಯೋಗದಿಂದ ಬಂಪರ್‌ ಅದೃಷ್ಟ
Recommended image2
ಈ 3 ರಾಶಿಗೆ 5 ದಿನದಲ್ಲಿ ಯು ಟರ್ನ್, 30 ವರ್ಷ ನಂತರ ಪವಾಡ- ದೊಡ್ಡ ಲಾಭ
Recommended image3
ಮಾರ್ಚ್ 3 ಬ್ಲಡ್ ಮೂನ್: ಬೆಂಗಳೂರಿನಲ್ಲಿ ಚಂದ್ರಗ್ರಹಣ ಎಷ್ಟು ಗಂಟೆಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved