ತಿರುಪತಿ ತಿಮ್ಮಪ್ಪನಿಗೂ ತಟ್ಟಿದ ಕೊರೋನಾ ಭೀತಿ!
ದೇಶದಲ್ಲಿ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ತೀವ್ರವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಶಾಲಾ, ಕಾಲೇಜು, ಮಾಲ್, ಸಿನಿಮಾಹಾಲ್ಗಳನ್ನು ಕೆಲವು ಕಾಲದ ವರೆಗೆ ಬಂದ್ ಮಾಡಲಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಈಗ ತಿರುಪತಿ ತಿಮ್ಮಪ್ಪನ ಸರದಿ. ದೇಶದ ಶ್ರೀಮಂತ ಬಾಲಾಜಿ ದೇವಸ್ಥಾನವನ್ನು ಮುಚ್ಚಲು ತಿರುಮಲ ತಿರುಪತಿ ದೇವಸ್ತಾನ ಮಂಡಳಿ ನಿರ್ಧರಿಸಿದೆ. ಈ ದೇವಸ್ಥಾನದ ಇತ್ತೀಚಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಗೆ ದರ್ಶನವನ್ನು ನಿಲ್ಲಿಸಲಾಗಿದೆ.
ತುರ್ತು ಸಭೆಯ ನಂತರ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಶುಕ್ರವಾರದಿಂದ ಮುಚ್ಚಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ನಿರ್ಧರಿಸಿದೆ.
ಜ್ವರ, ಕೆಮ್ಮು ಮತ್ತು ಶೀತದಿಂದ ದೇವಾಲಯದ ಒಳಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಮಹಾರಾಷ್ಟ್ರದ ಭಕ್ತರೊಬ್ಬರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ತಿಳಿಸಿದರು.
ಈ ನಿರ್ಬಂಧಗಳು ಶುಕ್ರವಾರದಿಂದ (21.3.2020) ಜಾರಿಗೆ ಬರಲಿವೆ ಎಂದು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ COVID-19 ಕುರಿತು ಉನ್ನತ ಮಟ್ಟದ ಸಭೆಯ ನಂತರ ವೈದ್ಯಕೀಯ ಮತ್ತು ಆರೋಗ್ಯ ಉಪ ಮುಖ್ಯಮಂತ್ರಿ ಎ ಕೆ ಕೆ ಶ್ರೀನಿವಾಸ್ ಹೇಳಿದರು.
ತಿರುಮಲಕ್ಕೆ ಪ್ರತಿದಿನ 75,000 ದಿಂದ 90,000 ಯಾತ್ರಾರ್ಥಿಗಳು ಬರುತ್ತಾರೆ. ದೇವಾಲಯಕ್ಕೆ ಭೇಟಿ ನೀಡುವುದಂತೆ ಮನವಿಯ ನಂತರವೂ ಈ ವಾರ ದಿನಕ್ಕೆ ಸುಮಾರು 30,000 ಭಕ್ತರು ಇದ್ದರು.
ಇದರಿಂದ ಸಹ ಆರೋಗ್ಯಕ್ಕೆ ದೊಡ್ಡ ಅಪಾಯವಾಗಬಹುದು. ಅದಕ್ಕಾಗಿಯೇ ನಾವು ಭಕ್ತರಿಗೆ ದೇವಾಲಯವನ್ನು ಮುಚ್ಚಲು ನಿರ್ಧರಿಸಿದ್ದೇವೆ. ಜನರು ಅಸಮಾಧಾನಗೊಳಬಹುದು, ಆದರೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ" ಎಂದು ಶ್ರೀ ರೆಡ್ಡಿ ಹೇಳಿದರು.
ಇತ್ತೀಚಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಗಾಗಿ ಒಂದು ವಾರದ ದೇವಾಲಯವನ್ನು ಮುಚ್ಚಲಾಗುವುದು.
ದೈನಂದಿನ ಪೂಜಾ ವಿಧಿಗಳನ್ನು ಅರ್ಚಕರು ನೆಡೆಸುತ್ತಾರೆ ಆದರೆ ಭಕ್ತರಿಗೆ ಪ್ರವೇಶವಿಲ್ಲ.
ಇತರ ಧರ್ಮಗಳ ಪ್ರಮುಖ ಪೂಜಾ ಸ್ಥಳಗಳನ್ನು ಸಹ ಮುಚ್ಚಲಾಗುವುದು - ಆಂದ್ರ ಉಪಮುಖ್ಯಮಂತ್ರಿ .
ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಮಾಲ್ಗಳು ಮತ್ತು ಸಿನೆಮಾ ಹಾಲ್ಗಳನ್ನು ಮಾರ್ಚ್ 31 ರವರೆಗೆ ಮುಚ್ಚುವಂತೆ ಆದೇಶ ನೀಡಿದೆ.
ಮುಂದಿನ ನಿರ್ದೇಶನಗಳವರೆಗೆ ಸ್ವಾಮಿ ಪುಷ್ಕರಿಣಿ ಘಾಟ್ ಅನ್ನು ಸಹ ಲಾಕ್ ಮಾಡಲಾಗುತ್ತದೆ.