ಗೋಕರ್ಣ ಮಹಾಗಣಪತಿ ದೇವಾಲಯಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು!
ಗೋಕರ್ಣ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಆತ್ಮಲಿಂಗ, ಗಣಪತಿ ದೇವಾಲಯ ಸೇರಿದಂತೆ ಹತ್ತಾರು ದೇಗುಲಗಳು, ಕೋಟಿತೀರ್ಥ, ಕಡಲತೀರ ಪ್ರಸಿದ್ಧಿಯನ್ನು ತಂದುಕೊಟ್ಟಿದೆ.

<p>ಆತ್ಮಲಿಂಗ ಇರುವ ಮಹಾಬಲೇಶ್ವರ ದೇವಾಲಯದ ಸಮೀಪ ಮಹಾಗಣಪತಿ ದೇವಾಲಯ ಇದೆ. ಭಕ್ತರು ಮೊದಲು ಗಣಪನನ್ನು ಪೂಜಿಸಿ ತರುವಾಯ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವುದು ಸಂಪ್ರದಾಯ.</p>
ಆತ್ಮಲಿಂಗ ಇರುವ ಮಹಾಬಲೇಶ್ವರ ದೇವಾಲಯದ ಸಮೀಪ ಮಹಾಗಣಪತಿ ದೇವಾಲಯ ಇದೆ. ಭಕ್ತರು ಮೊದಲು ಗಣಪನನ್ನು ಪೂಜಿಸಿ ತರುವಾಯ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವುದು ಸಂಪ್ರದಾಯ.
<p>ಪ್ರತಿದಿನ ಸಾಕಷ್ಟುಸಂಖ್ಯೆಯ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. 3 ಅಥವಾ 4ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣಗೊಂಡಿರಬೇಕೆಂಬ ಅಭಿಪ್ರಾಯ ಇದೆ. ಈ ಮೂರ್ತಿಯೂ ಕದಂಬರ ಕಾಲದ್ದಾಗಿದೆ. ನಿಂತ ಭಂಗಿಯಲ್ಲಿರುವ ಈ ದ್ವಿಭುಜ ಗಣಪತಿ ಅರ್ಧವೃತ್ತಾಕಾರದ ನಡುಭಾಗವನ್ನು ಹೊಂದಿದೆ.</p>
ಪ್ರತಿದಿನ ಸಾಕಷ್ಟುಸಂಖ್ಯೆಯ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. 3 ಅಥವಾ 4ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣಗೊಂಡಿರಬೇಕೆಂಬ ಅಭಿಪ್ರಾಯ ಇದೆ. ಈ ಮೂರ್ತಿಯೂ ಕದಂಬರ ಕಾಲದ್ದಾಗಿದೆ. ನಿಂತ ಭಂಗಿಯಲ್ಲಿರುವ ಈ ದ್ವಿಭುಜ ಗಣಪತಿ ಅರ್ಧವೃತ್ತಾಕಾರದ ನಡುಭಾಗವನ್ನು ಹೊಂದಿದೆ.
<p>ಪೌರಾಣಿಕ ಹಿನ್ನೆಲೆ: ಗೋಕರ್ಣದಲ್ಲಿ ಶಿವನ ಆತ್ಮಲಿಂಗ ಇದೆ. ರಾವಣ ಪರಮೇಶ್ವರನಿಂದ ಆತ್ಮಲಿಂಗ ಪಡೆದು ಲಂಕೆಗೆ ಒಯ್ಯುತ್ತಿರುವಾಗ ಗೋಕರ್ಣಕ್ಕೆ ಬರುತ್ತಾನೆ.</p>
ಪೌರಾಣಿಕ ಹಿನ್ನೆಲೆ: ಗೋಕರ್ಣದಲ್ಲಿ ಶಿವನ ಆತ್ಮಲಿಂಗ ಇದೆ. ರಾವಣ ಪರಮೇಶ್ವರನಿಂದ ಆತ್ಮಲಿಂಗ ಪಡೆದು ಲಂಕೆಗೆ ಒಯ್ಯುತ್ತಿರುವಾಗ ಗೋಕರ್ಣಕ್ಕೆ ಬರುತ್ತಾನೆ.
<p>ಆಗ ದೇವತೆಗಳ ಕೋರಿಕೆಯಂತೆ ಗಣಪತಿ ಗೋಕರ್ಣಕ್ಕೆ ಬಂದು ಆತ್ಮಲಿಂಗವನ್ನು ಭೂಮಿಯ ಮೇಲಿಟ್ಟು ಪ್ರತಿಷ್ಠಾಪಿಸುತ್ತಾನೆ. ರಾವಣ ಸಿಟ್ಟಿನಿಂದ ಗಣಪತಿ. ತಲೆಯ ಮೇಲೆ ಹೊಡೆಯುತ್ತಾನೆ. ಇದಕ್ಕಾಗಿ ಗಣಪತಿಯ ತಲೆಯ ಮೇಲೊಂದು ಕುಳಿಯನ್ನು ಕಾಣಬಹುದು.</p>
ಆಗ ದೇವತೆಗಳ ಕೋರಿಕೆಯಂತೆ ಗಣಪತಿ ಗೋಕರ್ಣಕ್ಕೆ ಬಂದು ಆತ್ಮಲಿಂಗವನ್ನು ಭೂಮಿಯ ಮೇಲಿಟ್ಟು ಪ್ರತಿಷ್ಠಾಪಿಸುತ್ತಾನೆ. ರಾವಣ ಸಿಟ್ಟಿನಿಂದ ಗಣಪತಿ. ತಲೆಯ ಮೇಲೆ ಹೊಡೆಯುತ್ತಾನೆ. ಇದಕ್ಕಾಗಿ ಗಣಪತಿಯ ತಲೆಯ ಮೇಲೊಂದು ಕುಳಿಯನ್ನು ಕಾಣಬಹುದು.
<p>ಗೋಕರ್ಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ ಗೋಕರ್ಣ. ಕುಮಟಾದಿಂದ 33 ಕಿ.ಮೀ., ಅಂಕೋಲಾದಿಂದ 27 ಕಿ.ಮೀ.ದೂರ ಇದೆ.</p>
ಗೋಕರ್ಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ ಗೋಕರ್ಣ. ಕುಮಟಾದಿಂದ 33 ಕಿ.ಮೀ., ಅಂಕೋಲಾದಿಂದ 27 ಕಿ.ಮೀ.ದೂರ ಇದೆ.
<p>ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಇದೆ. ಸಮೀಪದಲ್ಲಿ ರೈಲು ನಿಲ್ದಾಣ ಇದೆ.</p>
ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಇದೆ. ಸಮೀಪದಲ್ಲಿ ರೈಲು ನಿಲ್ದಾಣ ಇದೆ.