MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಸಹೋದರಿಯರು ರಾಶಿ ಪ್ರಕಾರ ರಕ್ಷಾಬಂಧನ ಕಟ್ಟಿದರೆ ಸಹೋದರನಿಗೆ ಲಕ್!

ಸಹೋದರಿಯರು ರಾಶಿ ಪ್ರಕಾರ ರಕ್ಷಾಬಂಧನ ಕಟ್ಟಿದರೆ ಸಹೋದರನಿಗೆ ಲಕ್!

ಸಹೋದರ-ಸಹೋದರಿಯರ ಸಂಬಂಧವನ್ನು ಸಾರಿ ಹೇಳುವ ಹಬ್ಬವೇ ರಕ್ಷಾಬಂಧನ. ರಕ್ಷಾಬಂಧನದ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರಿಗಾಗಿ ಸುಂದರ ರಾಖಿಗಳನ್ನು ಆರಿಸುವುದರಲ್ಲಿ ನಿರತರಾಗಿದ್ದಾರೆ, ಸಹೋದರರು ತಮ್ಮ ಪ್ರೀತಿಯ ಸಹೋದರಿಗಾಗಿ ಅತ್ಯುತ್ತಮ ಉಡುಗೊರೆಯನ್ನು ನೀಡಲು ತಯಾರಿ ನಡೆಸುತ್ತಿದ್ದಾರೆ. ರಕ್ಷಾಬಂಧನದ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರನ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಬಾರಿ ರಾಖಿ ತೆಗೆದುಕೊಳ್ಳುವಾಗ ಈ ಒಂದು ವಿಷಯದ ಬಗ್ಗೆ ಗಮನ ಹರಿಸಿದರೆ, ಈ ರಕ್ಷಾಬಂಧನವು ತಮ್ಮ ಸಹೋದರನಿಗೆ ಅತ್ಯಂತ ಮಂಗಳಕರವೆಂದು ಸಾಬೀತುಪಡಿಸಬಹುದು. ಇದಕ್ಕಾಗಿ, ಸಹೋದರಿಯು ತನ್ನ ಸಹೋದರನ ರಾಶಿಗೆ ಅನುಗುಣವಾಗಿ ರಾಖಿ ಕಟ್ಟಬೇಕು. ಆಗಸ್ಟ್ 22 ರ ರಕ್ಷಾಬಂಧನದ ದಿನದಂದು  ಸಹೋದರನಿಗೆ ಯಾವ ರಾಖಿಯನ್ನು ಕಟ್ಟುವುದು ಉತ್ತಮ ಎಂದು ತಿಳಿಯಿರಿ.

2 Min read
Author : Suvarna News | Asianet News
Published : Aug 17 2021, 12:39 PM IST
Share this Photo Gallery
  • FB
  • TW
  • Linkdin
  • Whatsapp
113

ರಾಶಿಚಕ್ರದ ಪ್ರಕಾರ ರಾಖಿಯನ್ನು ಆರಿಸಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೆ ಅನುಗುಣವಾಗಿ ಮಂಗಳಕರ ಬಣ್ಣ, ದಿನ, ರತ್ನ ಇತ್ಯಾದಿಗಳನ್ನು ಹೇಳಲಾಗಿದೆ. ಆಯಾ ರಾಶಿಚಕ್ರದ ವ್ಯಕ್ತಿಯು ಆ ವಸ್ತುಗಳನ್ನು ಬಳಸುವುದರಿಂದ, ಅವನು ಅಪಾರ ಶಕ್ತಿಯನ್ನು ಪಡೆಯುತ್ತಾನೆ. ಕುಂಡಲಿಯಲ್ಲಿರುವ ಗ್ರಹಗಳು ಪ್ರಬಲವಾಗಿರುವಾಗ ಇದು ಅವನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸಹೋದರನಿಗೆ ತನ್ನ ರಾಶಿಚಕ್ರದ ಪ್ರಕಾರ ವಿಶೇಷ ಬಣ್ಣದ ರಾಖಿಯನ್ನು ಕಟ್ಟುವುದು ಅವನಿಗೆ ಅತ್ಯಂತ ಶುಭಕರವೆಂದು ಸಾಬೀತಾಗುತ್ತದೆ. ಆ ಬಣ್ಣದ ರಾಖಿ ಲಭ್ಯವಿಲ್ಲದಿದ್ದರೆ, ಕನಿಷ್ಠ ಆ ಬಣ್ಣದ ರಾಖಿಯ ಎಳೆಯನ್ನು ಕಟ್ಟುವುದರಿಂದಲೂ ಸಹೋದರ ಅದೃಷ್ಟ ಬದಲಾಗುತ್ತದೆ ಎಂದು ನಂಬಲಾಗಿದೆ.

213

ಮೇಷ ರಾಶಿ: 
ಸಹೋದರನ ರಾಶಿಯು ಮೇಷರಾಶಿಯಾಗಿದ್ದರೆ, ರಕ್ಷಾಬಂಧನದ ದಿನದಂದು ಅವನಿಗೆ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಬಹಳ ಒಳ್ಳೆಯದು. ಇದು ಸಹೋದರನನ್ನು ಪವರ್ ಫುಲ್ ಆಗಿ ಮಾಡುವುದು ಮಾತ್ರವಲ್ಲ, ಅವರ ಜೀವನವು ಸದಾ ಸುಖ-ಶಾಂತಿ, ನೆಮ್ಮದಿಯಿಂದ ಇರುವಂತೆ ಮಾಡುತ್ತದೆ.
 

313

ವೃಷಭ ರಾಶಿ: 
ಈ ರಾಶಿಯ ಜನರಿಗೆ ಬಿಳಿ ಬಣ್ಣದ ರಾಖಿ ಕಟ್ಟುವುದು ತುಂಬಾ ಶುಭಕರವಾಗಿರುತ್ತದೆ. ಇದರೊಂದಿಗೆ, ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅವರಿಗೆ ನೀಡುವುದು ತುಂಬಾ ಒಳ್ಳೆಯದು. ಅಣ್ಣ-ತಮ್ಮನಿಗೆ ಶುಭವಾಗಲೆಂದು ಕಟ್ಟುವ ರಾಖಿಗೆ ಅರ್ಥ ಹೆಚ್ಚಿಸಿ. 

413

ಮಿಥುನ ರಾಶಿ: 
ಸಹೋದರ ಮಿಥುನ ರಾಶಿಯವರಾಗಿದ್ದರೆ, ಅವರಿಗೆ ಹಸಿರು ಬಣ್ಣದ ರಾಖಿಯನ್ನು ಆರಿಸಿ. ಇದು ಅವರನ್ನು ತೊಂದರೆಗಳಿಂದ ರಕ್ಷಿಸುತ್ತದೆ. ಹಸಿರು ಸಮೃದ್ಧಿಯ ಸಂಕೇತ. ಇಂಥ ಱಾಖಿ ಕಟ್ಟರೆ ಸಹೋದರನಿಗೂ ಶಾಂತಿ, 

513


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರಿಗೆ ಬಿಳಿ ಅಥವಾ ಹಳದಿ ಬಣ್ಣದ ರಾಖಿ ಕಟ್ಟುವುದು ಶುಭಕರವಾಗಿರುತ್ತದೆ. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.

613


ಸಿಂಹ ರಾಶಿ: 
ಸಹೋದರ ಸಿಂಹ ರಾಶಿಯವರಾಗಿದ್ದರೆ ಅವರಿಗೆ  ಕೆಂಪು ಅಥವಾ ಹಳದಿ ಬಣ್ಣಗಳ ರಾಖಿ ಕಟ್ಟುವುದರಿಂದ ಅವರ ಅದೃಷ್ಟ ಬದಲಾಗುವುದು ಎಂಬ ನಂಬಿಕೆ ಇದೆ.

713


ಕನ್ಯಾ ರಾಶಿ: 
ಈ ರಾಶಿಯ ಸಹೋದರನಿಗೆ ಕಿತ್ತಳೆ ಬಣ್ಣದ ರಾಖಿ ಅತ್ಯುತ್ತಮವಾಗಿರುತ್ತದೆ. ಇದು ಅವರ ಜೀವನದಲ್ಲಿ ಧೈರ್ಯ, ಉತ್ಸಾಹವನ್ನು ತುಂಬುತ್ತದೆ.

813


ತುಲಾ ರಾಶಿ: 
ರಕ್ಷಾಬಂಧನದಲ್ಲಿ  ತುಲಾ ರಾಶಿಯವರಿಗೆ ಬಿಳಿ ಬಣ್ಣದ ರಾಖಿ ಕಟ್ಟುವುದು ಮತ್ತು ಬಿಳಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ತುಂಬಾ ಒಳ್ಳೆಯದು.

913

.

ವೃಶ್ಚಿಕ ರಾಶಿ: 
ಈ ರಾಶಿಯವರಿಗೆ ಅವರ ಸಹೋದರಿಯರು ಕೆಂಪು ಅಥವಾ ಗುಲಾಬಿ ಬಣ್ಣದ ರಾಖಿಯನ್ನು ಕಟ್ಟಿದರೆ ಅದು ಶುಭಕರವಾಗಿರುತ್ತದೆ.

1013

ಧನು ರಾಶಿ: 
ಧನು ರಾಶಿಯ ಸಹೋದರರಿಗೆ ಹಳದಿ ಅಥವಾ ಚಿನ್ನದ ಬಣ್ಣದ ರಾಖಿ ಕಟ್ಟಿಸಿ ಮತ್ತು ಅವರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ತಿನ್ನಿಸಿ. ಇದು ಸಹೋದರನ ಸಂಪತ್ತನ್ನು ಹೆಚ್ಚಿಸುತ್ತದೆ.

1113


 ಸಹೋದರ ಮಕರ ರಾಶಿಯವರಾಗಿದ್ದರೆ ಅವರಿಗೆ ನೀಲಿ ಬಣ್ಣದ ರಾಖಿಯನ್ನು ಕಟ್ಟುವುದರಿಂದ ತುಂಬಾ ಒಳ್ಳೆಯದಾಗುತ್ತದೆ.
 

1213


ಕುಂಭ ರಾಶಿ: 
ಈ ರಾಶಿಯ ಜನರಿಗೆ, ಅವರ ಸಹೋದರಿಯರು ನೀಲಿ ಬಣ್ಣದ ರಾಖಿಯನ್ನು ಆರಿಸಿದರೆ, ನಿಮ್ಮ ಸಹೋದರನಿಗೆ ಎಂತಹದ್ದೇ ಕಷ್ಟ ಎದುರಾದರೂ ಜಯಶಾಲಿಯಾಗುತ್ತಾರೆ.

1313

ಮೀನ ರಾಶಿ: 
ಮೀನ ರಾಶಿಯ ಸಹೋದರರಿಗೆ ಹಳದಿ ಅಥವಾ ಚಿನ್ನದ ಬಣ್ಣದ ಸುಂದರ ರಾಖಿಯನ್ನು ಕಟ್ಟುವುದು ಶುಭಕರವಾಗಿರುತ್ತದೆ. ರಕ್ಷಾಬಂಧನದ ದಿನದಂದು ಸಹೋದರಿಯರು ಈ ಜನರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ಶುಭ.

About the Author

SN
Suvarna News

Latest Videos
Recommended Stories
Recommended image1
ತ್ರಿಗ್ರಹ ಯೋಗದಿಂದ 5 ರಾಶಿಗೆ ತ್ರಿವಳಿ ಪ್ರಯೋಜನ, ನಾಳೆ ಶುಕ್ರವಾರದಿಂದ ಬಂಪರ್ ಲಾಭ
Recommended image2
ಸೂರ್ಯ ಮತ್ತು ಗುರುವಿನ ವಿಶೇಷ ಸಂಯೋಜನೆ, ಈ 5 ರಾಶಿಗೆ ಹೊಸ ಉದ್ಯೋಗ, ಸಂಪತ್ತಿನ ಸುರಿಮಳೆ
Recommended image3
ಮುಂದಿನ ತಿಂಗಳು ಫೆಬ್ರವರಿಯಲ್ಲಿ ಬುಧನ ತ್ರಿವಳಿ ಚಲನೆ, ಈ 3 ರಾಶಿಗೆ ಅದೃಷ್ಟ, ಹಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved