MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಚಾಣಕ್ಯ ಹೇಳಿದ ಈ ವಿಷಯಗಳನ್ನು ಎಂದಿಗೂ ಮರೆಯಬೇಡಿ

ಚಾಣಕ್ಯ ಹೇಳಿದ ಈ ವಿಷಯಗಳನ್ನು ಎಂದಿಗೂ ಮರೆಯಬೇಡಿ

ಆಚಾರ್ಯ ಚಾಣಕ್ಯನು ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾನೆ. ಈ ವಿಷಯಗಳನ್ನು ನಮ್ಮ ಜೀವನದಲ್ಲಿ ಅನುಸರಿಸುವ ಮೂಲಕ, ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಆಚಾರ್ಯ ಚಾಣಕ್ಯನು ನೈತಿಕತೆಯಲ್ಲಿ ವ್ಯಕ್ತಿಯು ಎಂದಿಗೂ ಮರೆಯಬಾರದ ಕೆಲವು ವಿಷಯಗಳನ್ನು ಉಲ್ಲೇಖಿಸಿದ್ದಾನೆ. ಅವುಗಳ ಬಗ್ಗೆ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿ.

1 Min read
Suvarna News
Published : Oct 28 2022, 01:04 PM IST
Share this Photo Gallery
  • FB
  • TW
  • Linkdin
  • Whatsapp
16

ಆಚಾರ್ಯ ಚಾಣಕ್ಯನ ನೀತಿಗಳು ಮಾನವ ಜೀವನವನ್ನು ಯಶಸ್ವಿಗೊಳಿಸಲು ಪ್ರೇರೇಪಿಸುತ್ತವೆ. ಚಾಣಕ್ಯನ ನೀತಿಯಲ್ಲಿ ಉಲ್ಲೇಖಿಸಲಾದ ವಿಷಯಗಳು ಮೊದಲಿನಂತೆಯೇ ಇಂದಿಗೂ ಪ್ರಸ್ತುತವಾಗಿವೆ. ಜೀವನದಲ್ಲಿ ಯಶಸ್ಸು (success in life) ಪಡೆಯಲು ಬಯಸಿದರೆ ಒಬ್ಬ ವ್ಯಕ್ತಿಯು ಎಂದಿಗೂ ಯಾವ ವಿಷ್ಯಗಳನ್ನು ಮರೆಯಬಾರದು ಅನ್ನೋದನ್ನು ತಿಳಿಯೋಣ.

26

ಒತ್ತಡ-ಮುಕ್ತ - ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಒತ್ತಡದಿಂದ ಮುಕ್ತನಾಗಿರಬೇಕು (stress free). ಒತ್ತಡ-ಮುಕ್ತವಾಗಿರುವ ಮೂಲಕ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾನೆ. ಒಬ್ಬನು ಯಾವಾಗಲೂ ತನ್ನನ್ನು ತಾನು ನಂಬಬೇಕು. ಇದರಿಂದ ಮಾತ್ರ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತೆ.

36

ದೃಢವಾಗಿ ಎದುರಿಸಿ - ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿಯೊಂದು ಸನ್ನಿವೇಶವನ್ನು ದೃಢವಾಗಿ ಎದುರಿಸಬೇಕು. ಯಾವುದೇ ಕೆಲಸದಲ್ಲಿ ವಿಫಲವಾದರೆ ನಿರಾಶೆಗೊಳ್ಳಬಾರದು. ನೀವು ಯಾವಾಗಲೂ ಪ್ರಯತ್ನಿಸುತ್ತಲೇ ಇರಬೇಕು. ಇದು ಖಂಡಿತವಾಗಿಯೂ ವ್ಯಕ್ತಿಗೆ ಯಶಸ್ಸನ್ನು ನೀಡುತ್ತದೆ.

46

ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕತೆ ಮಾಡಿ - ಚಾಣಕ್ಯನ ಪ್ರಕಾರ (Chanakya niti), ಒಬ್ಬ ವ್ಯಕ್ತಿಯು ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಯಾವುದೇ ಕೆಲಸವನ್ನು ಸಣ್ಣದು ಮತ್ತು ಅದರ ಬಗ್ಗೆ ನಿರ್ಲಕ್ಷ್ಯದಿಂದ ಪರಿಗಣಿಸಬಾರದು. ಏಕೆಂದರೆ ಕೆಲಸವನ್ನು ಗಂಭೀರವಾಗಿ ಮಾಡಿದಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತೆ.

56

ನಕಾರಾತ್ಮಕತೆಯಿಂದ ದೂರವಿರಿ - ಚಾಣಕ್ಯನ ಪ್ರಕಾರ, ಪ್ರತಿಯೊಂದು ಕೆಲಸವನ್ನು ಯಶಸ್ವಿಯಾಗಿಸಲು ಸಕಾರಾತ್ಮಕತೆಯನ್ನು (negative thoughts)  ಹೊಂದಿರುವುದು ಬಹಳ ಮುಖ್ಯ. ನಕಾರಾತ್ಮಕ ಆಲೋಚನೆಗಳಿಂದ ಅಂತರ ಕಾಯ್ದುಕೊಳ್ಳಬೇಕು. ಇವು ಅವನ ಯಶಸ್ಸಿಗೆ ಅಡ್ಡಿಯಾಗಬಹುದು. ಆದುದರಿಂದ ಪಾಸಿಟಿವ್ ಆಗಿ ಯೋಚನೆ ಮಾಡೋದು ಉತ್ತಮ.

66

ತಪ್ಪುಗಳಿಂದ ಕಲಿಯಿರಿ : ತಪ್ಪು ಮಾಡೋದು ಸಾಮಾನ್ಯ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೆಲಸಗಳಲ್ಲಿ ತಪ್ಪು ಮಾಡಿರುತ್ತಾರೆ. ಆದರೆ ಆ ತಪ್ಪುಗಳಿಂದ ನೀವು ಕಲಿಯಬೇಕಾದ್ದು ಮುಖ್ಯ. ಹೌದು, ತಪ್ಪುಗಳಿಂದ ಕಲಿತಾಗ ಮಾತ್ರ ಜೀವನದಲ್ಲಿ ಉತ್ತಮ ರೀತಿಯಲ್ಲಿ ಹೆಜ್ಜೆ ಇಡಲು ಸಾಧ್ಯವಾಗುತ್ತೆ.
 

About the Author

SN
Suvarna News
ಚಾಣಕ್ಯ ನೀತಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved