MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಗಣೇಶನನ್ನು ಹೀಗೆ ಸಂತೋಷಪಡಿಸಿದ್ರೆ, ಜೀವನದ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ!

ಗಣೇಶನನ್ನು ಹೀಗೆ ಸಂತೋಷಪಡಿಸಿದ್ರೆ, ಜೀವನದ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ!

ಗಣೇಶನನ್ನು ವಿಘ್ನವಿನಾಶಕ ಎಂದು ಕರೆಯಲಾಗುತ್ತೆ. ಅವನು ಸ್ವತಃ ಸಿದ್ಧಿಯನ್ನು ನೀಡುವವನು ಮತ್ತು ಶುಭ ಪ್ರಯೋಜನಗಳನ್ನು ನೀಡುವವನು. ಹಾಗಾಗಿ ಗಣೇಶನನ್ನು ಪೂಜಿಸಲಾಗುತ್ತೆ. ಆದರೆ ಗಣೇಶನನ್ನು ಸಂತೋಷಪಡಿಸಲು ನೀವು ಏನು ಮಾಡಬೇಕು ಅನ್ನೋದನ್ನು ನೋಡೋಣ.

2 Min read
Suvarna News
Published : Dec 02 2022, 03:50 PM IST
Share this Photo Gallery
  • FB
  • TW
  • Linkdin
  • Whatsapp
111

ಯಾವುದೇ ಶುಭ ಕಾರ್ಯದ ಮೊದಲು ಗಣೇಶನನ್ನು(Lord Ganesha) ಪೂಜಿಸಿದ್ರೆ, ಆ ಕೆಲಸ ಸರಾಗವಾಗಿ ಪೂರ್ಣಗೊಳ್ಳುತ್ತೆ ಎನ್ನುವ ನಂಬಿಕೆಯಿದೆ. ಗಣೇಶನ ಕೃಪೆಯಿಂದ, ಎಲ್ಲಾ ಆಸೆಗಳು ಈಡೇರುತ್ತವೆ. ಗಣೇಶನನ್ನು ಹೆಚ್ಚು ಪೂಜಿಸುವ ಜನರು ತಮ್ಮ ಜೀವನದಲ್ಲಿ ಸಂತೋಷ, ಅದೃಷ್ಟ, ಸಂಪತ್ತು,  ಇತ್ಯಾದಿಗಳಿಂದ ಆಶೀರ್ವದಿಸಲ್ಪಡುತ್ತಾರೆ. ಒಬ್ಬ ವ್ಯಕ್ತಿ ಯಾವುದೇ ರೋಗ, ಬಡತನ ಅಥವಾ ಬಿಕ್ಕಟ್ಟಿನಿಂದ ಹೋರಾಡುತ್ತಿದ್ದರೆ, ಒಳ್ಳೆ ಹೃದಯದಿಂದ ಗಣೇಶನನ್ನು ಪೂಜಿಸಿದ್ರೆ ಈ ಎಲ್ಲಾ ಸಮಸ್ಯೆಗಳಿಂದ ಅವನು ಮುಕ್ತಿ ಹೊಂದುತ್ತಾನೆ ಎಂದು ಹೇಳಲಾಗುತ್ತೆ. ಪೂಜೆ ಮತ್ತು ಉಪವಾಸದ ಹೊರತಾಗಿ, ಕೆಲವು ಪರಿಹಾರಗಳ ಸಹಾಯದಿಂದ, ವಿಘ್ನ ನಿವಾರಕ ಗಣೇಶನನ್ನು ಸಂತೋಷಪಡಿಸಬಹುದು ಮತ್ತು ಅವನ ಅನುಗ್ರಹ ಪಡೆಯಬಹುದು.

211

ನೀವು ದೈಹಿಕ, ಆರ್ಥಿಕ ಅಥವಾ ಮಾನಸಿಕ ಸಮಸ್ಯೆಗಳನ್ನು (Mental Health) ಎದುರಿಸುತ್ತಿದ್ದರೆ, ಬುಧವಾರ (Wednesday),  ಕೆಲವು ಪರಿಹಾರಗಳನ್ನು ಪ್ರಯತ್ನಿಸಬಹುದು, ಅದು ನಿಮಗೆ ಗಣೇಶನ ಕೃಪೆಯನ್ನು ನೀಡುತ್ತೆ ಮತ್ತು ಎಲ್ಲಾ ದುಃಖಗಳು ನಿವಾರಣೆಯಾಗುತ್ತವೆ. ಗಣೇಶನ ಕೃಪೆಯನ್ನು ನೀವು ಯಾವ ಕ್ರಮಗಳಿಂದ ಪಡೆಯಬಹುದು ಎಂಬುದನ್ನು ನೋಡೋಣ-

 

311
ಗಣೇಶನಿಗೆ ಕುಂಕುಮವನ್ನು(Kumkum) ಅರ್ಪಿಸಿ

ಗಣೇಶನಿಗೆ ಕುಂಕುಮವನ್ನು(Kumkum) ಅರ್ಪಿಸಿ

ಪೌರಾಣಿಕ ಕಥೆಗಳಲ್ಲಿ ಗಣೇಶನು ಸಿಂಧೂರವನ್ನು ತುಂಬಾ ಇಷ್ಟಪಡುತ್ತಾನೆ ಎಂದು ಹೇಳಲಾಗುತ್ತೆ, ಹಾಗಾಗಿ ಬುಧವಾರ ಗಣೇಶನಿಗೆ ಕುಂಕುಮ ಅರ್ಪಿಸುವ ಭಕ್ತನು ಜೀವನದಲ್ಲಿನ ಅಡೆತಡೆಗಳನ್ನು ತೊಡೆದುಹಾಕುತ್ತಾನೆ ಎಂದು ನಂಬಲಾಗಿದೆ.

411
ಬುಧವಾರ ಪೂಜೆ ಮಾಡಿ, ಗರಿಕೆ ಅರ್ಪಿಸಿ

ಬುಧವಾರ ಪೂಜೆ ಮಾಡಿ, ಗರಿಕೆ ಅರ್ಪಿಸಿ

ಪ್ರತಿ ಬುಧವಾರ ಗಣೇಶನ ದೇವಾಲಯಕ್ಕೆ ಭೇಟಿ ನೀಡಿ ಪೂಜಿಸುವ ಮೂಲಕ, ಜೀವನದಲ್ಲಿ ಸಮೃದ್ಧಿಯನ್ನು ಸಾಧಿಸಬಹುದು ಎಂದು ಧರ್ಮಾಚಾರ್ಯರು ಹೇಳುತ್ತಾರೆ. ಗಣೇಶನನ್ನು ಪೂಜಿಸುವಾಗ, ಹಸಿರು ಗರಿಕೆ ಅರ್ಪಿಸಬೇಕು. ಇದಿಲ್ಲದೆ ಗಣೇಶನ ಪೂಜೆಯನ್ನು(Worship) ಅಪೂರ್ಣವೆಂದು ಪರಿಗಣಿಸಲಾಗುತ್ತೆ. ಗರಿಕೆ ಅರ್ಪಿಸುವ ಮೂಲಕ, ಬುಧನು ಬಲಶಾಲಿಯಾಗುತ್ತಾನೆ ಮತ್ತು ಸಂತೋಷವು ಮನೆ ಬಾಗಿಲಿಗೆ ಬರಲು ಪ್ರಾರಂಭಿಸುತ್ತೆ.

511

ಸಾಧ್ಯವಾದಷ್ಟು, ಗಣೇಶನನ್ನು ಕನಿಷ್ಠ 11 ಬುಧವಾರಗಳವರೆಗೆ ನಿರಂತರವಾಗಿ ಪೂಜಿಸಬೇಕು ಮತ್ತು ಪ್ರತಿ ಬುಧವಾರ ಅವನಿಗೆ 21 ಗರಿಕೆ ಅರ್ಪಿಸಬೇಕು, ಆಗ ಫಲಿತಾಂಶ ಉತ್ತಮವಾಗಿರುತ್ತವೆ. ಬುಧವಾರ, ಗಣೇಶ ದೇವಾಲಯದಲ್ಲಿ 21 ಗಂಟುಗಳ ಗರಿಕೆ ಅರ್ಪಿಸೋದರಿಂದ ಗಣೇಶನನ್ನು ಮೆಚ್ಚಿಸಬಹುದು ಮತ್ತು ಇದು ಬುಧ ದೋಷವನ್ನು ತೆಗೆದುಹಾಕುತ್ತೆ. 

611

ಬುಧವಾರ ಬೆಳಿಗ್ಗೆ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವ ಮೂಲಕ, ಬುಧ ದೋಷ ನಿವಾರಣೆಯಾಗುತ್ತೆ ಎಂದು ಸಹ ಹೇಳಲಾಗುತ್ತೆ. ಈ ದಿನದಂದು ಹಸಿರು (Green) ಬಣ್ಣ ಧರಿಸೋದರಿಂದ ಜೀವನದಲ್ಲಿ ಸಮೃದ್ಧಿ ಸಾಧಿಸಲು ಸಹಾಯ ಮಾಡುತ್ತೆ.

711
ಗಣೇಶ ರುದ್ರಾಕ್ಷಿಯನ್ನು(Rudrakshi ) ಧರಿಸಿ

ಗಣೇಶ ರುದ್ರಾಕ್ಷಿಯನ್ನು(Rudrakshi ) ಧರಿಸಿ

ವ್ಯವಹಾರದಲ್ಲಿನ ಅಡೆತಡೆಗಳನ್ನು ತೊಡೆದು ಹಾಕಲು ನೀವು ಬಯಸೋದಾದ್ರೆ  ಗಣೇಶ ರುದ್ರಾಕ್ಷಿಯನ್ನು ಧರಿಸಬೇಕು. ಇದರೊಂದಿಗೆ, ಪ್ರತಿ ಬುಧವಾರ ಗಣೇಶನ ದೇವಾಲಯದಲ್ಲಿ ಗಣೇಶನಿಗೆ ಬೆಲ್ಲ ಅರ್ಪಿಸಿ. ಅದರ ಜೊತೆಗೆ ಗಣೇಶ ಮಂತ್ರ ಓಂ ಗಣಪತೇ ನಮೋ: ನಮಃ ಪಠಿಸಿ. ಇದನ್ನು ಮಾಡುವ ಮೂಲಕ, ಗಣೇಶನು ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ.

811
ಗೋಶಾಲೆಗೆ ಹೆಚ್ಚು ಹುಲ್ಲನ್ನು ದಾನ ಮಾಡಿ

ಗೋಶಾಲೆಗೆ ಹೆಚ್ಚು ಹುಲ್ಲನ್ನು ದಾನ ಮಾಡಿ

ಬುಧವಾರ ಹಸುವಿಗೆ (Cow) ಹುಲ್ಲನ್ನು ತಿನ್ನಿಸಿ. ಸಾಧ್ಯವಾದರೆ, ವರ್ಷಕ್ಕೊಮ್ಮೆ ನಿಮ್ಮ ತೂಕಕ್ಕೆ ಸಮನಾದ ಹುಲ್ಲನ್ನು ಖರೀದಿಸಿ ಮತ್ತು ಅದನ್ನು ದನದ ಕೊಟ್ಟಿಗೆಗೆ ದಾನ ಮಾಡಿ. ಈ ದಾನವನ್ನು ಬುಧವಾರ ಮಾಡೋದಾದ್ರೆ, ಉತ್ತಮ ಫಲಿತಾಂಶ ಪಡೆಯುತ್ತೀರಿ.

911
ಮೋದಕ (Modak)ಪ್ರಸಾದ

ಮೋದಕ (Modak)ಪ್ರಸಾದ

ಮೋದಕ ಗಣೇಶನಿಗೆ ತುಂಬಾ ಪ್ರಿಯ. ನೀವು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬುಧವಾರ ಗಣೇಶನನ್ನು ಪೂಜಿಸಿದ ನಂತರ, ಅವನಿಗೆ ಮೋದಕ, ವಿಶೇಷವಾಗಿ ಕಡಲೆ ಹಿಟ್ಟಿನಿಂದ ಮಾಡಿದ ಮೋದಕವನ್ನು ಅರ್ಪಿಸಿ. ಮೋದಕ ನೋಡಿದಾಗ ಗಣೇಶನು ಬೇಗನೆ ಸಂತೋಷಪಡುತ್ತಾನೆ ಎಂದು ಹೇಳಲಾಗುತ್ತೆ.

1011
ಕವಡೆ ಪರಿಹಾರ

ಕವಡೆ ಪರಿಹಾರ

ಬುಧವಾರ 7 ಸಂಪೂರ್ಣ ಕವಡೆ ತೆಗೆದುಕೊಳ್ಳಿ. ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಗಳಲ್ಲಿ ಕವಡೆ ಸುಲಭವಾಗಿ ಲಭ್ಯವಿದೆ. ಇದರೊಂದಿಗೆ, ಹೆಸರುಕಾಳನ್ನು (Green gram) ತೆಗೆದುಕೊಂಡು ಅವುಗಳನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ದೇವಾಲಯದ ಮೆಟ್ಟಿಲ ಮೇಲೆ ಸದ್ದಿಲ್ಲದೆ ಇರಿಸಿ. ಆದರೆ ಈ ವಿಷಯದಲ್ಲಿ ಯಾರಿಗೂ ಏನನ್ನೂ ಹೇಳಬಾರದು. ಈ ಪರಿಹಾರ ನಿಮಗೆ ಆರ್ಥಿಕ ಪ್ರಯೋಜನಗಳ ಜೊತೆಗೆ ಪ್ರಗತಿಯನ್ನು ಸಹ ನೀಡುತ್ತೆ.
 

1111
ಶ್ರೀ ಗಣೇಶ ಬೀಜ ಮಂತ್ರ ಪಠಣ

ಶ್ರೀ ಗಣೇಶ ಬೀಜ ಮಂತ್ರ ಪಠಣ

ಶ್ರೀ ಗಣೇಶ ಬೀಜ ಮಂತ್ರ ಓಂ ಗಣಪತಯೇ ನಮಃ, ಗಣೇಶನ ಈ ಮಂತ್ರವನ್ನು ಪಠಿಸೋದರಿಂದ ಬುದ್ಧಿವಂತಿಕೆ ಬೆಳೆಯುತ್ತೆ ಮತ್ತು ಜ್ಞಾನ ಹೆಚ್ಚುತ್ತೆ. ಶಿಕ್ಷಣದಲ್ಲಿ ಯಶಸ್ವಿಯಾಗಲು ಬಯಸುವ ವಿದ್ಯಾರ್ಥಿಗಳು(Students) ಬುಧವಾರ ಅಥವಾ ಪ್ರತಿದಿನ ಸಾಧ್ಯವಾದಷ್ಟು ಈ ಮಂತ್ರವನ್ನು ಪಠಿಸಬೇಕು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved