ಬಣ್ಣದೋಕುಳಿಗೆ ಅಡ್ಡಿಯಾಗಲಿದ್ಯಾ ಚಂದ್ರಗ್ರಹಣ? ಈ ಮೂರು ರಾಶಿಗೆ ಸಂಕಷ್ಟದ ಕರಿ ನೆರಳು
Lunar Eclipse 2026 : ಹೋಳಿ ದಹನದ ದಿನವೇ ಚಂದ್ರಗ್ರಹಣ ಬಂದಿದೆ. ಇದ್ರಿಂದ ಹೋಳಿ ಹಬ್ಬಕ್ಕೆ ಅಡ್ಡಿಯಾಗುತ್ತಾ ಎನ್ನುವ ಪ್ರಶ್ನೆ ಜನರನ್ನು ಕಾಡ್ತಿದೆ. ಹೋಳಿ ಹಬ್ಬದ ಆಚರಣೆ ಹೇಗೆ, ಯಾವ ರಾಶಿ ಮೇಲೆ ಪರಿಣಾಮ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೋಳಿ ದಹನದಂದೇ ಚಂದ್ರಗ್ರಹಣ
ಹಿಂದೂ ಕ್ಯಾಲೆಂಡರ್ ಪ್ರಕಾರ, ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 2026 ರಲ್ಲಿ, ಹೋಳಿ ದಹನ ಮಾರ್ಚ್ 3 ರಂದು ಮತ್ತು ಬಣ್ಣಗಳ ಓಕುಳಿ ಹೋಳಿ ಹಬ್ಬ ಮಾರ್ಚ್ 4 ರಂದು ಆಚರಿಸಲಾಗ್ತಿದೆ. ವರ್ಷದ ಮೊದಲ ಚಂದ್ರಗ್ರಹಣ ಹೋಳಿ ದಹನದ ದಿನ ಅಂದ್ರೆ ಮಾರ್ಚ್ 3 ರಂದು ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ ಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೋಳಿ ದಹನದಂದೇ ಚಂದ್ರಗ್ರಹಣ ಬಂದಿರೋದು ಬಣ್ಣದೋಕುಳಿಗೆ ಅಡ್ಡಿ ಮಾಡುತ್ತಾ?
ಹೋಳಿ ದಹನಕ್ಕೆ ಅಡ್ಡಿಯಾಗುತ್ತಾ ಗ್ರಹಣ ?
ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 3, 2026 ರಂದು ಸಂಭವಿಸಲಿದೆ. ಗ್ರಹಣವು ಮಧ್ಯಾಹ್ನ 3.21 ಕ್ಕೆ ಪ್ರಾರಂಭವಾಗಿ ಸಂಜೆ 6.46 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು ಭಾರತದ ಹೆಚ್ಚಿನ ಭಾಗಗಳಲ್ಲಿ ಗೋಚರಿಸಲಿದೆ. ಚಂದ್ರಗ್ರಹಣದ ಒಟ್ಟು ಅವಧಿ ಸುಮಾರು 3 ಗಂಟೆ 25 ನಿಮಿಷಗಳಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ, ಗ್ರಹಣದ ಸಮಯದಲ್ಲಿ ಪೂಜೆ, ದಾನ, ಆಹಾರ ಮತ್ತು ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಹೋಳಿ ದಹನಕ್ಕೆ 6.46 ರಿಂದ 8.50ರವರೆಗೆ ಶುಭ ಸಮಯವಿದೆ. ಗ್ರಹಣವು ಹೋಳಿ ದಹನದ ಶುಭ ಸಮಯಕ್ಕಿಂತ ಸ್ವಲ್ಪ ಮೊದಲು ಕೊನೆಗೊಳ್ಳುತ್ತಿದೆ. ಆದ್ದರಿಂದ ಹೋಳಿ ದಹನ ಹಾಗೂ ಹೋಳಿ ಆಚರಣೆ ಮೇಲೆ ಯಾವುದೇ ನೇರ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಯಾವುದೇ ಭಯವಿಲ್ಲದೆ ಹೋಳಿ ದಹನ ಹಾಗೂ ಮರುದಿನ ಹೋಳಿ ಹಬ್ಬವನ್ನು ಆಚರಿಸಬಹುದಾಗಿದೆ.
ಚಂದ್ರಗ್ರಹಣದಿಂದ ಸಂಕಷ್ಟ
2026 ರಲ್ಲಿ ಹೋಳಿ ದಿನವೇ ಚಂದ್ರಗ್ರಹಣ ಬಂದಿರೋದು ಕೆಲ ರಾಶಿಯವರಿಗೆ ಸಂಕಷ್ಟ ತರಲಿದೆ. ಹೋಳಿ ಮತ್ತು ಚಂದ್ರಗ್ರಹಣದ ಸಂಯೋಜನೆಯು ಕನ್ಯಾರಾಶಿಯರಿಗೆ ಶುಭವಲ್ಲ. ಇದು ಮಾನಸಿಕ ತೊಂದರೆಗೆ ಕಾರಣವಾಗುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ಜೀವಕ್ಕೆ ಅಪಾಯವನ್ನುಂಟು ಮಾಡುವ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ದಾಂಪತ್ಯದಲ್ಲಿ ಬಿರುಕು
ಹೋಳಿ ದಹನ ಹಾಗೂ ಚಂದ್ರಗ್ರಹಣದ ಪ್ರಭಾವ ಮೇಷ ರಾಶಿಯವರ ಮೇಲಾಗಲಿದೆ. ಸಂಗಾತಿಯೊಂದಿಗೆ ಹಳೆಯ ವಿವಾದಗಳು ಮತ್ತೆ ಗಲಾಟೆಗೆ ಕಾರಣ ಆಗ್ಬಹುದು. ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಮೇಷ ರಾಶಿಯವರು ಈ ಸಂದರ್ಭದಲ್ಲಿ ಶಾಂತವಾಗಿರುವುದು ಬಹಳ ಮುಖ್ಯ. ಸಾಮಾಜಿಕ ಖ್ಯಾತಿಗೆ ಧಕ್ಕೆಯಾಗುವ ಸಂಭವ ಇರೋದ್ರಿಂದ ಆತುರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಬೇಡಿ.
ಆರ್ಥಿಕ ಸಂಕಷ್ಟ
ಶನಿಯ ಸಾಡೇ ಸತಿ ಮೀನ ರಾಶಿಯ ಮೇಲೆ ಮೇಲುಗೈ ಸಾಧಿಸುತ್ತಿದೆ. ಆದ್ದರಿಂದ, ಹೋಳಿಯಂದು ಗ್ರಹಣದ ನೆರಳು ನಿಮ್ಮ ಜೀವನದಲ್ಲಿ ದುರಂತವನ್ನು ತರಬಹುದು. ಕೆಲಸದಲ್ಲಿ ಸವಾಲುಗಳು ಹೆಚ್ಚಾಗುತ್ತವೆ. ಕಾನೂನು ವಿಷಯಗಳಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಿ. ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ. ಖರ್ಚಿಗೆ ಬ್ರೇಕ್ ಹಾಕದೆ ಹೋದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅಶುಭ ಪ್ರಭಾವದಿಂದ ರಕ್ಷಣೆ ಹೀಗೆ
ಹೋಳಿಯಂದು ಚಂದ್ರಗ್ರಹಣದ ಅಶುಭ ಪರಿಣಾಮಗಳನ್ನು ತಪ್ಪಿಸಲು, ಓಂ ನಮಃ ಶಿವಾಯ ಮಂತ್ರವನ್ನು ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಪಠಿಸುವುದು ಪರಿಣಾಮಕಾರಿ. ಚಂದ್ರಗ್ರಹಣದ ಪ್ರಭಾವಕ್ಕೆ ಒಳಗಾಗುವ ರಾಶಿಯವರು ಚಂದ್ರಗ್ರಹಣವನ್ನು ನೋಡಬಾರದು. ಗ್ರಹಣದ ನಂತರ ಸ್ನಾನ ಮಾಡಿ ದಾನ ಮಾಡಬೇಕು.
ಯಾರಿಗೆ ಲಾಭ?
ಹೋಳಿ ದಹನದ ದಿನ ಚಂದ್ರಗ್ರಹಣ ಬಂದಿರುವುದು ಕೆಲ ರಾಶಿಯವರಿಗೆ ಲಾಭ ತರಲಿದೆ. ಸಿಂಹ ರಾಶಿಯವರಿಗೆ ಸಾಕಷ್ಟು ಪ್ರಯೋಜನಕಾರಿ. ವಿದ್ಯಾರ್ಥಿಗಳಿಗೆ ಲಾಭಕರವಾಗಿರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಉದ್ಯಮಿಗಳಿಗೆ ಸಹ ಪ್ರಯೋಜನಕಾರಿ. ಧನು ರಾಶಿಯವರಿಗೆ ವಾಹನ ಅಥವಾ ಆಸ್ತಿ ಖರೀದಿ ಭಾಗ್ಯ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ಮಕರ ರಾಶಿಯವರಿಗೆ ಹೊಸ ಉದ್ಯೋಗ ಅಥವಾ ಬಡ್ತಿಯ ಲಾಭವಿದೆ. ವಿದೇಶಗಳಲ್ಲಿ ಪ್ರಯಾಣಿಸುವ ಸಾಧ್ಯತೆ ಇದೆ. ವೃತ್ತಿ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಪ್ರಯೋಜನಕಾರಿಯಾಗಿದೆ. ದುಬಾರಿ ಅಥವಾ ಐಷಾರಾಮಿ ವಸ್ತುವನ್ನು ಖರೀದಿಸಬಹುದು. ಹೊಸ ಆದಾಯದ ಮೂಲ ತೆರೆಯಲಿದೆ.

