ಮನೆಯಲ್ಲಿ ಈ ವಸ್ತುಗಳನ್ನು ತೆರೆದಿಡುವುದು ದುಃಖ, ಬಡತನಕ್ಕೆ ಆಹ್ವಾನ ನೀಡಿದಂತೆ..
ವಾಸ್ತು ಪ್ರಕಾರ ಮನೆಯಲ್ಲಿ ಕೆಲ ವಸ್ತುಗಳನ್ನು ಬಳಸಿದ ನಂತರ ವಾಪಸ್ ಮುಚ್ಚಿಯೇ ಇಡಬೇಕು ಈ ವಸ್ತುಗಳನ್ನು ತೆರೆದಿಟ್ಟರೆ ನಿಮ್ಮ ಮನೆಯಲ್ಲಿ ಬಡತನ ಮತ್ತು ದುಃಖ ನೆಲೆಸುತ್ತದೆ. ಆ ವಸ್ತುಗಳು ಯಾವುದು ಅಂತ ಈಗ ನೋಡೋಣ.

'ಈ' ವಸ್ತುಗಳನ್ನು ತೆರೆದಿಟ್ಟರೆ ಬಡತನ ಗ್ಯಾರಂಟಿ!
ವಾಸ್ತು ಶಾಸ್ತ್ರವು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾಗಿದೆ. ವ್ಯಕ್ತಿಯ ಜೀವನದಲ್ಲಿ ವಾಸ್ತು ಶಾಸ್ತ್ರದ ಮಹತ್ವವನ್ನು ಉನ್ನತ ರೀತಿಯಲ್ಲಿ ಹೇಳಲಾಗಿದೆ. ಯಾವುದೇ ಕೆಲಸವನ್ನು ಮಾಡುವ ಮೊದಲು ಅಥವಾ ಮಾಡುವಾಗ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳನ್ನು ಪಾಲಿಸಿದರೆ, ಅದಕ್ಕೆ ಸಂಬಂಧಿಸಿದ ಫಲಿತಾಂಶಗಳು ಬಹಳ ಮಂಗಳಕರವಾಗಿರುತ್ತವೆ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತವೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳನ್ನು ನಿರ್ಲಕ್ಷಿಸಿದರೆ, ಅದರ ಪರಿಣಾಮಗಳು ಕೆಟ್ಟದಾಗಿರುತ್ತವೆ ಎಂದು ಹೇಳಲಾಗಿದೆ. ಆದ್ದರಿಂದ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿರುವ ಕೆಲವು ವಸ್ತುಗಳ ಬಗ್ಗೆ ಹೇಳಲಿದ್ದೇವೆ. ಅವುಗಳನ್ನು ನೀವು ತಪ್ಪಾಗಿಯೂ ನಿಮ್ಮ ಮನೆಯಲ್ಲಿ ತೆರೆದಿಡಬಾರದು. ಅವುಗಳಲ್ಲಿ ಯಾವುದನ್ನಾದರೂ ನೀವು ತೆರೆದಿಟ್ಟರೆ ನಿಮ್ಮ ಮನೆಯಲ್ಲಿ ಬಡತನ ಮತ್ತು ದುಃಖ ಹೆಚ್ಚಾಗುತ್ತದೆ. ಆದ್ದರಿಂದ ಅದು ಯಾವ ವಸ್ತುಗಳು ಎಂದು ಈಗ ತಿಳಿದುಕೊಳ್ಳೋಣ.
ಪುಸ್ತಕ
ನೀವು ಪುಸ್ತಕಗಳನ್ನು ಓದಿದ ತಕ್ಷಣ ಅವುಗಳನ್ನು ಮುಚ್ಚಿಡಿ. ಒಂದು ವೇಳೆ ಪುಸ್ತಕವನ್ನು ಓದಿದ ನಂತರ ತೆರೆದೇ ಇಡುವುದು ತಪ್ಪು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ವೇದಗಳ ಪ್ರಕಾರ, ಪುಸ್ತಕಗಳು ಬುಧನಿಗೆ ಸಂಬಂಧಿಸಿವೆ. ಆದ್ದರಿಂದ, ಅವು ಬುದ್ಧಿವಂತಿಕೆ ಮತ್ತು ಮಾತಿನ ಅಂಶವೆಂದು ಪರಿಗಣಿಸಲ್ಪಡುತ್ತವೆ. ಆದ್ದರಿಂದ, ನಿಮ್ಮ ಮನೆಯಲ್ಲಿ ಎಂದಿಗೂ ಪುಸ್ತಕಗಳನ್ನು ಓದಿದ ನಂತರ ತತೆರೆದಿಡಬೇಡಿ. ಹಾಗೆ ಮಾಡಿದರೆ, ಬುಧ ದುರ್ಬಲನಾಗುತ್ತಾನೆ. ಓದಿದ ನಂತರ ಪುಸ್ತಕವನ್ನು ನೀಟಾಗಿ ಮಡಚಿಡಿ.
ಉಪ್ಪು
ವಾಸ್ತು ಶಾಸ್ತ್ರದ ಪ್ರಕಾರ ಉಪ್ಪನ್ನು ಬಳಸಿದ ನಂತರ ನೀವು ಅದನ್ನು ಎಂದಿಗೂ ತೆರೆದಿಡಬಾರದು. ಏಕೆಂದರೆ ಉಪ್ಪು ಚಂದ್ರನಿಗೆ ಸಂಬಂಧಿಸಿದೆ ನೀವು ಉಪ್ಪಿನ ಡಬ್ಬವನ್ನು ತೆರೆದಿಟ್ಟಾಗ, ಅದು ಚಂದ್ರನನ್ನು ದುರ್ಬಲಗೊಳಿಸುತ್ತದೆ. ನಿಮ್ಮ ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ, ಸೋಮವಾರ ಉಪ್ಪು ದಾನ ಮಾಡಬಹುದು.
ಹಾಲು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಂದಿಗೂ ಹಾಲಿನ ಪಾತ್ರೆಯನ್ನು ತೆರೆದಿಡಬಾರದು. ಹಾಲಿನ ಪಾತ್ರೆ ತೆರೆದಿದ್ದರೆ, ನಿಮ್ಮ ಜಾತಕದಲ್ಲಿ ಶುಕ್ರ ದುರ್ಬಲನಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ನೀವು ಆರೋಗ್ಯ ಮತ್ತು ಆರ್ಥಿಕವಾಗಿ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ.
ಆಹಾರ ಪದಾರ್ಥಗಳು
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಆಹಾರ ಪದಾರ್ಥಗಳನ್ನು ತೆರೆದಿಡಬಾರದು. ಹೀಗೆ ಮಾಡುವುದು ತಪ್ಪು. ಒಂದು ವೇಳೆ ತೆರೆದಿಟ್ಟರೆ, ಆಹಾರ ಮತ್ತು ಹಣ ಎರಡರಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ತೆರೆದಿಟ್ಟ ಆಹಾರದಲ್ಲಿ ಕೀಟಗಳು, ಧೂಳು ಬೀಳುತ್ತವೆ. ಇದರಿಂದ ಆರೋಗ್ಯ ಹದಗೆಡುತ್ತದೆ.
ಅಲಮಾರಿ
ತಪ್ಪಾಗಿಯೂ ಮನೆಯಲ್ಲಿರುವ ಕಪಾಟನ್ನು ಎಂದಿಗೂ ತೆರೆದಿಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಒಂದು ವೇಳೆ ತೆರೆದಿದ್ದರೆ, ಲಕ್ಷ್ಮೀದೇವಿಯು ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಅಲ್ಲದೆ, ಕಪಾಟು ಕಾಣುವ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ.