MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಗಣೇಶ ಚತುರ್ಥಿ 2024: ಗಣೇಶ ಮೂರ್ತಿ ಕೂರಿಸುವ ದಿನಾಂಕ, ಮುಹೂರ್ತ, ವಿಸರ್ಜನೆ ಸಮಯದ ಮಾಹಿತಿ ಇಲ್ಲಿದೆ

ಗಣೇಶ ಚತುರ್ಥಿ 2024: ಗಣೇಶ ಮೂರ್ತಿ ಕೂರಿಸುವ ದಿನಾಂಕ, ಮುಹೂರ್ತ, ವಿಸರ್ಜನೆ ಸಮಯದ ಮಾಹಿತಿ ಇಲ್ಲಿದೆ

ಚೌತಿ ಎಲ್ಲರ ಬಾಳಿಗೂ ಶುಭದಾಯಕವಾಗಿರಲಿ. ಗಣಪತಿ ನಿಮಗೆ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ.  ಬದುಕಿನ ಕಷ್ಟವೆಲ್ಲಾ ದೂರವಾಗಲಿ, ದೇವರ ಆಶೀರ್ವಾದದ ಪ್ರಭೆಯಲ್ಲಿ ಖುಷಿಯೊಂದೇ ನೆಲೆಗೊಳ್ಳಲಿ. ಗಣೇಶ ಚತುರ್ಥಿ ಯಾವಾಗ ಸಮಯ ದಿನಾಂಕ ಮಾಹಿತಿ ಇಲ್ಲಿದೆ

2 Min read
Suvarna News
Published : Aug 21 2024, 08:31 PM IST| Updated : Aug 21 2024, 08:45 PM IST
Share this Photo Gallery
  • FB
  • TW
  • Linkdin
  • Whatsapp
14

ಪ್ರತಿ ವರ್ಷ ಗೌರಿಯ ಮಗ ಗಣೇಶ ಕೈಲಾಸದಿಂದ ಭೂಮಿಗೆ ಬಂದು 10 ದಿನಗಳ ಕಾಲ ಇದ್ದು ಭೂಲೋಕದಲ್ಲಿನ ಭಕ್ತರ ದುಃಖವನ್ನು ನಿವಾರಿಸುತ್ತಾನೆ. ಕೈಲಾಸದಿಂದ ಭೂಮಿಗೆ ಬರುವ ಈ ದಿನಗಳನ್ನ ಗಣೇಶ ಉತ್ಸವವನ್ನಾಗಿ ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನದಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ, ಈ ದಿನದಂದು ಗಣೇಶನು ಪ್ರತಿ ಮನೆಯಲ್ಲೂ ನೆಲೆಗೊಳ್ಳುತ್ತಾನೆ.. ಊರುಗಳಲ್ಲಿ  ದೊಡ್ಡ ದೊಡ್ಡ ಪಂಡಲ್‌ಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆಲಂಕರಿಸಲಾಗುತ್ತದೆ. ಇದೀಗ ಗಣೇಶ ಚತುರ್ಥಿ  ಬಂದಿದೆ. 2024 ರ ಗಣೇಶ ಚತುರ್ಥಿ ಮುಹೂರ್ತವ ಕೂಡಿಸುವ ವೇಳೆ ಬಗ್ಗೆ ಇಲ್ಲಿ ತಿಳಿಯೋಣ.

24

ಈ ವರ್ಷ ಗಣೇಶ ಚತುರ್ಥಿ 7 ಸೆಪ್ಟೆಂಬರ್ 2024 ರಂದು ಬಂದಿದೆ.  ಇಂದಿನಿಂದಲೇ ಗಣೇಶ ಉತ್ಸವದ ಸಿದ್ಧತೆಗಳು ಆರಂಭವಾಗಿ 17 ಸೆಪ್ಟೆಂಬರ್ 2024 ರಂದು ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ.  ಈ ದಿನ, ಗಣಪತಿಯ ನೀರಿನಲ್ಲಿ ವಿಸರ್ಜನೆ ಮಾಡುವ ಮೂಲಕ ಗಣಪತಿಗೆ ಬೀಳ್ಕೊಡಲಾಗುತ್ತದೆ. 

ಗಣೇಶ ಮೂರ್ತಿ ಸ್ಥಾಪನೆಗೆ ಮುಹೂರ್ತ

ಪಂಚಾಂಗದ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿ 6ನೇ ಸೆಪ್ಟೆಂಬರ್ 2024 ರಂದು 03:01 PM ಕ್ಕೆ ಪ್ರಾರಂಭವಾಗುತ್ತದೆ ಮತ್ತು 7 ನೇ ಸೆಪ್ಟೆಂಬರ್ 2024 ರಂದು 05:37 PM ಕ್ಕೆ ಕೊನೆಗೊಳ್ಳುತ್ತದೆ. ಮಧ್ಯಾಹ್ನ ಗಣೇಶ ಪೂಜೆ ಮುಹೂರ್ತ - 11:10 AM - 01:39 PM (02 ಗಂಟೆ 29 ನಿಮಿಷಗಳು) ಗಣೇಶ ವಿಸರ್ಜನ್ - 17 ಸೆಪ್ಟೆಂಬರ್ 2024 ಸಾಯಂಕಾಲ. ಕೂರಿಸುವಾಗ ಡೋಲು ಭಜಂತ್ರಿಗಳ ಸಮೇತ ಭಜನಾ ಮೆರವಣಿಗೆ ಮೂಲಕ ಮನೆಗೆ ಭಕ್ತಿಯಿಂದ ಕರೆತನ್ನಿ.

34

ಗಣೇಶೋತ್ಸವದ ಮಹತ್ವ:

 10 ದಿನಗಳ ಗಣೇಶ ಉತ್ಸವದ ಆಚರಣೆಯು ಪುರಾತನ ಗ್ರಂಥಗಳು ಮತ್ತು ಪುರಾಣಗಳಲ್ಲಿ ಬೇರೂರಿದೆ. ಗಣೇಶ ಚತುರ್ಥಿಯು ಶಿವ ಮತ್ತು ಪಾರ್ವತಿ ದೇವಿಯ ಪುತ್ರ ಗಣಪತಿಯ ಜನ್ಮದಿನವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಜನಪ್ರಿಯ ಪೌರಾಣಿಕ ಕಥೆಯ ಪ್ರಕಾರ, ಋಷಿ ವೇದವ್ಯಾಸರು ಒಮ್ಮೆ ಮಹಾಕಾವ್ಯ ಮಹಾಭಾರತವನ್ನು ಬರೆಯಲು ಗಣೇಶನನ್ನು ಆಹ್ವಾನಿಸಿದರಂತೆ. ಋಷಿ ವ್ಯಾಸರು ಶ್ಲೋಕಗಳನ್ನು ಪಠಿಸಿದರು, ಗಣಪತಿಯು ನಿರಂತರ ಹತ್ತು ದಿನಗಳ ಕಾಲ  ಬರೆದರು. ಅನಂತ ಚತುರ್ದಶಿ ಎಂದು ಕರೆಯಲ್ಪಡುವ ಹತ್ತನೇ ದಿನದಂದು, ಗಣೇಶನು ಸರಸ್ವತಿ ನದಿಯಲ್ಲಿ ಸ್ನಾನ ಮಾಡಿ, ತನ್ನನ್ನು ತಾನೇ ಶುದ್ಧೀಕರಿಸಿದನು. ಈ ಘಟನೆಯು ಹತ್ತು ದಿನಗಳ ಕಾಲ ಗಣೇಶ ಉತ್ಸವವನ್ನು ಆಚರಿಸುವ ಸಂಪ್ರದಾಯವನ್ನು ಸ್ಥಾಪಿಸಿದೆ ಎಂದು ನಂಬಲಾಗಿದೆ. 

44

ಈ ಹಬ್ಬವು ಗಣೇಶನ ಜನ್ಮವನ್ನು ಸ್ಮರಿಸುವುದಲ್ಲದೆ, ನಿಖರವಾದ ಪೂಜೆ ಮತ್ತು ಆಚರಣೆಗಳನ್ನು ಒಳಗೊಂಡಿರುತ್ತದೆ, ಈ ಸಮಯದಲ್ಲಿ ಭಕ್ತರು ತಮ್ಮ ಎಲ್ಲಾ ಕಾರ್ಯಗಳು ಮತ್ತು ಪ್ರಯತ್ನಗಳು ಗಣಪತಿ ಪೂಜೆಯಿಂದ ಯಶಸ್ವಿಗೊಳ್ಳುತ್ತವೆ ಎಂದು ನಂಬುತ್ತಾರೆ. ಈ ವರ್ಷ, ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7, 2024 ರಂದು ಆಚರಿಸಲಾಗುತ್ತದೆ, ಪ್ರಪಂಚದಾದ್ಯಂತದ ಭಕ್ತರು ಹಬ್ಬಗಳಲ್ಲಿ ಭಾಗವಹಿಸುತ್ತಾರೆ, ಸಮೃದ್ಧಿ, ಬುದ್ಧಿವಂತಿಕೆ ಮತ್ತು ಸಂತೋಷಕ್ಕಾಗಿ ಗಣೇಶನ ಆಶೀರ್ವಾದವನ್ನು ಪಡೆಯುತ್ತಾರೆ.

ಚೌತಿ ಎಲ್ಲರ ಬಾಳಿಗೂ ಶುಭದಾಯಕವಾಗಿರಲಿ. ಗಣಪತಿ ನಿಮಗೆ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ.  ಬದುಕಿನ ಕಷ್ಟವೆಲ್ಲಾ ದೂರವಾಗಲಿ, ದೇವರ ಆಶೀರ್ವಾದದ ಪ್ರಭೆಯಲ್ಲಿ ಖುಷಿಯೊಂದೇ ನೆಲೆಗೊಳ್ಳಲಿ.  ಗಜವದನನ ಆಶೀರ್ವಾದದ ಬೆಳಕು ನಿಮ್ಮ ಜೀವನವನ್ನು ಇನ್ನಷ್ಟು ಸುಖಮಯವಾಗಿಸಲಿ. ಬದುಕಿನ ಎಲ್ಲಾ ಕಷ್ಟ ಕಾರ್ಪಣ್ಯಗಳು ಕೊನೆಯಾಗಲಿ. 

About the Author

SN
Suvarna News
ಹಬ್ಬ
ಗಣೇಶ ಚತುರ್ಥಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved