MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಪಾಪ ಪರಿಹಾರಕ್ಕೆ ಗಂಗೆ ಪೂಜೆ ಮಾಡೋರು ಮನೆಗೆ ತರುವಾಗ ಈ ನಿಯಮ ಪಾಲಿಸಿ

ಪಾಪ ಪರಿಹಾರಕ್ಕೆ ಗಂಗೆ ಪೂಜೆ ಮಾಡೋರು ಮನೆಗೆ ತರುವಾಗ ಈ ನಿಯಮ ಪಾಲಿಸಿ

ಹಿಂದೂ ಧರ್ಮದಲ್ಲಿ ದೇವತೆ ಸ್ಥಾನ ಪಡೆದಿರುವ ಗಂಗೆಯನ್ನು ಮನೆಗೆ ತಂದು ಪೂಜೆ ಮಾಡಲಾಗುತ್ತದೆ. ಗಂಗಾಜಲವನ್ನು ಮನೆಗೆ ತರುವ ಮುನ್ನ ಕೆಲ ನಿಯಮ ಪಾಲಿಸಬೇಕು. ಇಲ್ಲವೆಂದ್ರೆ ಫಲ ಸಿಗೋದಿಲ್ಲ.

2 Min read
Roopa Hegde
Published : Dec 19 2025, 09:33 PM IST
Share this Photo Gallery
  • FB
  • TW
  • Linkdin
  • Whatsapp
18
ಗಂಗಾ ನದಿ
Image Credit : Asianet News

ಗಂಗಾ ನದಿ

ಸನಾತನ ಧರ್ಮದಲ್ಲಿ ಜಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಎಲ್ಲಾ ನದಿಗಳು, ಸಮುದ್ರಗಳು ಮತ್ತು ಸರೋವರಗಳ ನೀರು ತನ್ನದೇ ಆದ ಮಹತ್ವ ಹೊಂದಿದೆ. ಆದ್ರೆ ಗಂಗೆಯ ನೀರನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗುತ್ತದೆ.

28
ಗಂಗೆ ಹುಟ್ಟು
Image Credit : Asianet News

ಗಂಗೆ ಹುಟ್ಟು

ಪೌರಾಣಿಕ ನಂಬಿಕೆ ಪ್ರಕಾರ, ಗಂಗಾ ನದಿಯನ್ನು ಬ್ರಹ್ಮಾಂಡದ ರಕ್ಷಕ ಎಂದು ಪರಿಗಣಿಸಲಾದ ಭಗವಂತ ವಿಷ್ಣುವಿನ ಹೆಬ್ಬೆರಳಿನಿಂದ ಹುಟ್ಟಿಕೊಂಡಿದೆ. ಅದಕ್ಕಾಗಿಯೇ ಸನಾತನಿಗಳು ಅಮೃತವೆಂದು ಪರಿಗಣಿಸುವ ಗಂಗಾ ನೀರನ್ನು ಭಗವಂತ ಹರಿಯ ಚರಣಾಮೃತ ಎಂದೂ ಕರೆಯುತ್ತಾರೆ. ಹಿಂದೂ ನಂಬಿಕೆಯಲ್ಲಿ ಗಂಗಾ ನೀರನ್ನು ತರುವ ಮತ್ತು ಸಂಗ್ರಹಿಸಲು ಕೆಲವು ನಿಯಮಗಳನ್ನು ಸೂಚಿಸಲಾಗಿದೆ.

Related Articles

Related image1
11 ನಿಮಿಷ ಉಸಿರು ಚೆಲ್ಲಿ ಬದುಕಿದ ಮಹಿಳೆ: ಸ್ವರ್ಗ- ನರಕದ ನಂಬಲಾಗದ ಅನುಭವ ಬಿಚ್ಚಿಟ್ಟಿದ್ದು ಹೀಗೆ
Related image2
Lucky Zodiac Signs: ಹೊಸ ವರ್ಷದ ಮೊದಲ ದಿನವೇ ಈ ಮೂರು ರಾಶಿಯವರಿಗೆ ಕಾದಿದೆ ಸರ್ಪ್ರೈಸ್
38
ಗಂಗಾಜಲವನ್ನು ಮನೆಗೆ ತರುವ ವಿಧಾನ
Image Credit : Asianet News

ಗಂಗಾಜಲವನ್ನು ಮನೆಗೆ ತರುವ ವಿಧಾನ

ಹಿಂದೂ ನಂಬಿಕೆಯ ಪ್ರಕಾರ, ಗಂಗಾ ಜಲವನ್ನು ಮನೆಗೆ ತರಲು ಒಂದಿಷ್ಟು ನಿಯಮವಿದೆ. ಮೊದಲು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಬೇಕು. ಗಂಗಾ ನೀರನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ತರಬಾರದು. ಅದನ್ನು ಕಂಚು ಅಥವಾ ಹಿತ್ತಾಳೆ ಪಾತ್ರೆಯಲ್ಲಿ ತರಬೇಕು. ಮನೆಗೆ ತಂದ ಮೇಲೆ ಗಂಗಾ ಜಲದ ಪ್ರಮಾಣದಷ್ಟೆ ಹಸುವಿನ ಹಾಲನ್ನು ಗಂಗಾಜಿಗೆ ಅರ್ಪಿಸಬೇಕು.

48
ಮನೆಯ ಈ ಜಾಗದಲ್ಲಿ ಗಂಗಾಜಲ ಇಡಿ
Image Credit : Asianet News

ಮನೆಯ ಈ ಜಾಗದಲ್ಲಿ ಗಂಗಾಜಲ ಇಡಿ

ಹಿಂದೂ ನಂಬಿಕೆಯ ಪ್ರಕಾರ, ಗಂಗಾಜಲ ಪಾಪನಾಶಕ. ಆದ್ದರಿಂದ ಗಂಗಾಮಾತೆಯ ಈ ಪವಿತ್ರ ಅಮೃತವನ್ನು ಪ್ರಾರ್ಥನನೆ ಸೂಕ್ತವಾದ, ಮನೆಯ ಈಶಾನ್ಯ ಮೂಲೆಯಲ್ಲಿ ಇಡಬೇಕು. ಶುದ್ಧವಾದ ಸ್ಥಳದಲ್ಲಿ ಗಂಗಾಜಲ ಇಡುವುದು ಬಹಳ ಮುಖ್ಯ. ಅದನ್ನು ಎಂದಿಗೂ ಅಶುದ್ಧ ಸ್ಥಿತಿಯಲ್ಲಿ ಮುಟ್ಟಬಾರದು. ಕತ್ತಲೆಯಾದ ಸ್ಥಳದಲ್ಲಿ ಅಥವಾ ಜನರು ಬಂದು ಹೋಗಿ ಮುಟ್ಟಬಹುದಾದ ಸ್ಥಳದಲ್ಲಿ ಗಂಗಾಜಲವನ್ನು ಎಂದಿಗೂ ಇಡಬೇಡಿ.

58
ಧಾರ್ಮಿಕ ಮಹತ್ವ
Image Credit : Asianet News

ಧಾರ್ಮಿಕ ಮಹತ್ವ

ಗಂಗಾಜಲ ದೇಹ ಮತ್ತು ಮನಸ್ಸನ್ನು ಮಾತ್ರ ಶುದ್ಧೀಕರಿಸುವುದಿಲ್ಲ. ಎಲ್ಲಾ ರೀತಿಯ ಪಾಪ ಮತ್ತು ದೋಷಗಳಿಂದ ಮುಕ್ತಿ ನೀಡುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಶುದ್ಧ ಮನಸ್ಸಿನಿಂದ ಗಂಗಾ ನದಿಯಲ್ಲಿ ಮಿಂದೆದ್ದರೆ ವ್ಯಕ್ತಿ ಎಲ್ಲಾ ಪಾಪಗಳಿಂದ ಶುದ್ಧನಾಗುತ್ತಾನೆ. ದೋಷ ನಿವಾರಣೆಯಾಗಿ ಸಂತೋಷ ಮತ್ತು ಅದೃಷ್ಟ ಪಡೆಯುತ್ತಾನೆ. ಗಂಗಾಜಲವನ್ನು ಸೇವಿಸುವುದು ಮಾತ್ರವಲ್ಲ ಅದನ್ನು ನೋಡುವುದು ಕೂಡ ಪುಣ್ಯವೆಂದು ಪರಿಗಣಿಸಲಾಗುತ್ತದೆ.

68
ಸಕಾರಾತ್ಮಕ ಶಕ್ತಿ
Image Credit : Asianet News

ಸಕಾರಾತ್ಮಕ ಶಕ್ತಿ

ಹಿಂದೂ ಧರ್ಮದ ಪ್ರಕಾರ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ, ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ನೀವು ಗಂಗಾಜಲವನ್ನು ಬಳಸಬೇಕು. ಬೆಳಿಗ್ಗೆ ಸ್ನಾನ ಮಾಡಿ ಧ್ಯಾನ ಮಾಡಿದ ನಂತರ ನಿಮ್ಮ ಮನೆಯಾದ್ಯಂತ ಗಂಗಾ ಜಲವನ್ನು ಸಿಂಪಡಿಸಬೇಕು. ಇದ್ರಿಂದ ಮನೆ ಶುದ್ಧವಾಗುತ್ತದೆ.

78
ಶಿವನ ಆಶೀರ್ವಾದ
Image Credit : Asianet News

ಶಿವನ ಆಶೀರ್ವಾದ

ಹಿಂದೂ ಧರ್ಮದಲ್ಲಿ ಗಂಗಾ ಜಲವನ್ನು ಶಿವನ ಪೂಜೆಗೆ ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಶಿವನ ಆಶೀರ್ವಾದ ಪಡೆಯಲು, ಗಂಗಾ ಜಲವನ್ನು ಶಿವನಿಗೆ ಅರ್ಪಿಸಬೇಕು. ಗಂಗಾ ಜಲ ಕಡಿಮೆ ಇದ್ದರೆ, ಶುದ್ಧ ನೀರಿಗೆ ಸ್ವಲ್ಪ ಗಂಗಾಜಲ ಬೆರೆಸಿ ಶಿವಲಿಂಗಕ್ಕೆ ಅರ್ಪಿಸಬಹುದು.

88
ಮೋಕ್ಷ ಪ್ರಾಪ್ತಿ
Image Credit : Asianet News

ಮೋಕ್ಷ ಪ್ರಾಪ್ತಿ

ಗಂಗಾಜಲ ಮನುಷ್ಯನ ಹುಟ್ಟಿನಿಂದ ಅಂತ್ಯದವರೆಗೂ ಜೊತೆಯಲ್ಲಿರುತ್ತದೆ. ಮಗು ಹುಟ್ಟಿದಾಗ ಗಂಗಾಜಲದಲ್ಲಿ ಅದನ್ನು ಪವಿತ್ರಗೊಳಿಸಿದ್ರೆ ಸಾಯುವ ಮುನ್ನ ಬಾಯಿಗೆ ಗಂಗಾಜಲ ಬಿಡಲಾಗುತ್ತದೆ. ಗಂಗಾಜಲ ಮೋಕ್ಷ ನೀಡುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜ್ಯೋತಿಷ್ಯ
ಹಬ್ಬ

Latest Videos
Recommended Stories
Recommended image1
Lucky Zodiac Signs: ಹೊಸ ವರ್ಷದ ಮೊದಲ ದಿನವೇ ಈ ಮೂರು ರಾಶಿಯವರಿಗೆ ಕಾದಿದೆ ಸರ್ಪ್ರೈಸ್
Recommended image2
ನಾಳೆ ಡಿಸೆಂಬರ್ 20 ಚತುರ್ಗ್ರಹಿ ಯೋಗ, 5 ರಾಶಿ ಜನರು ಅದೃಷ್ಟ, ಸಂತೋಷ, ಸಮೃದ್ಧಿ
Recommended image3
2026 ರಲ್ಲಿ ಮೊದಲ ಬಾರಿಗೆ ಸೂರ್ಯ-ಚಂದ್ರ ಸಂಯೋಗ, ಜನವರಿ 18ಕ್ಕೆ 3 ರಾಶಿಗೆ ಹೊಸ ಮನೆ ಭಾಗ್ಯ
Related Stories
Recommended image1
11 ನಿಮಿಷ ಉಸಿರು ಚೆಲ್ಲಿ ಬದುಕಿದ ಮಹಿಳೆ: ಸ್ವರ್ಗ- ನರಕದ ನಂಬಲಾಗದ ಅನುಭವ ಬಿಚ್ಚಿಟ್ಟಿದ್ದು ಹೀಗೆ
Recommended image2
Lucky Zodiac Signs: ಹೊಸ ವರ್ಷದ ಮೊದಲ ದಿನವೇ ಈ ಮೂರು ರಾಶಿಯವರಿಗೆ ಕಾದಿದೆ ಸರ್ಪ್ರೈಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved